ಹಳಿಯಾಳ:- ಮಾಜಿ ಶಾಸಕ ಸುನಿಲ ಹೆಗಡೆ ಕಾರವಾರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ದ ನೀಡಿದ ಹೇಳಿಕೆ ತುಂಬಾ ಹಾಸ್ಯಾಸ್ಪದವಾಗಿದೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದ್ದಾರೆ.
ಸುನೀಲ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಸುನೀಲ್ ಈ ಹಿಂದೆ ತನ್ನ ಅಧಿಕಾರಾವಧಿಯ 5 ವರ್ಷಗಳ ಶಾಸಕರ ಅವಧಿಯಲ್ಲಿ ಹಳಿಯಾಳ–ಜೋಯಿಡಾ ವಿಧಾನಸಭಾ ಕ್ಷೇತ್ರ ಎಷ್ಟು ಅನುದಾನ ತಂದಿದ್ದಾರೆಂಬುವುದು ಕ್ಷೇತ್ರದ ಜನತೆಗೆ ಗೊತ್ತೆ ಇದೆ. ಐದು ವರ್ಷದಲ್ಲಿ ಇಡೀ ಕ್ಷೇತ್ರಕ್ಕೆ ಹೆಗಡೆ ತಂದಂತಹ ಅನುದಾನ ಸಚಿವ ಆರ್.ವಿ.ದೇಶಪಾಂಡೆಯವರು ಸರಾಸರಿ ಪ್ರತಿ ಒಂದು ಬೂತ್ಗೆ ತಂದಿದ್ದಾರೆಂದು ತಿರುಗೇಟು ನೀಡಿದ್ದಾರೆ.
ತಮ್ಮ ಹೇಳಿಕೆಗಳನ್ನು ನೀಡುವ ಮುಂಚೆ ಕ್ಷೇತ್ರದಲ್ಲಿ ಆದ ಕಾಮಗಾರಿಗಳ ಬಗ್ಗೆ ಪರೀಶಿಲನೆ ನಡೆಸÀಬೇಕು. ತಮ್ಮ ಎಂದಿನ ಬೇಜಬ್ದಾರಿತನದ ಹೇಳಿಕೆಗಳನ್ನು ಬಿಟ್ಟು ಆರ್.ವಿ.ದೇಶಪಾಂಡೆಯವರು ತಂದತಹ ಅನುದಾನವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು. ಇದನ್ನು ಬಿಟ್ಟು ಇಲ್ಲ ಸಲ್ಲದ ಅಪವಾದ ಮಾಡಿ, ಜನರನ್ನು ತಪ್ಪು ಹಾದಿಗೆ ತರುವ ಕೆಲಸ ಅವರಿಗೆ ಶೋಭೆ ತರುವುದಿಲ್ಲ ಎಂದು ಕೊರ್ವೆಕರ ಸಲಹೆ ನೀಡಿದ್ದಾರೆ.
Leave a Comment