ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯನಾಗಿ ಪಕ್ಷಾತೀತವಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಭಿವೃದ್ದಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ನೂತನ ಸದಸ್ಯ ಹಾಗೂ ಹಳಿಯಾಳ ಎಪಿಎಮ್ಸಿ ಅಧ್ಯಕ್ಷರು ಆಗಿರುವ ಶ್ರೀನಿವಾಸ ಘೋಟ್ನೆಕರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಅಧ್ಯಕ್ಷರುಗಳಾದ ಶಿರಶಿಯ ಸುನೀಲ್ ನಾಯ್ಕ, ಮುಂಡಗೋಡದ ದೇವು ಪಾಟೀಲ್, ಯಲ್ಲಾಪೂರದ ಮಹಾಬಳೇಶ್ವರ ಭಟ್, ಸಿದ್ದಾಪುರದ ಕೆ.ಜಿ.ನಾಗರಾಜ್, ಕುಮಟಾದ ರಾಮನಾಥ್ ಶಾನಭಾಗ್, ಹೊನ್ನಾವರದ ಗೋಪಾಲ್ ನಾಯಕ್, ಕಾರವಾರದ ಗಣಪತಿ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲಾ ಎಪಿಎಂಸಿ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡುವುದರ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗಳ ಉನ್ನತಿಗಾಗಿ ಕೈ ಜೋಡಿಸಿದ್ದು ಮುಂದಿನ ದಿನಗಳಲ್ಲಿ ಮಂಡಳಿಯ ಪರವಾಗಿ ಎಲ್ಲಾ ರೀತಿಯ ಅನುದಾನ ಮತ್ತು ಸೌಕರ್ಯಗಳನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.
ಹಳಿಯಾಳ ಎಪಿಎಂಸಿಯ ಅಭಿವೃದ್ದಿಗಾಗಿ ಇಗಾಗಲೇ 5 ಕೋಟಿ ರೂಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದ ಅಂಚಿನಲ್ಲಿರುವ ಬಾಣಸಗೇರಿ ಗ್ರಾಮದ ಸಮೀಪ 25 ಎಕರೆ ಜಮೀನು ಪಡೆಯುವ ಪ್ರಸ್ತಾವಣೆಯು ರಾಜ್ಯ ಸರ್ಕಾರದ ಮಂತ್ರಿ ಮಂಡಳದ ಮುಂದಿದ್ದು ಚುನಾವಣೆಯ ನಂತರ ಆದೇಶ ಹೊರಬಿಳಲಿದೆ. ಅಲ್ಲದೇ ವಿವಿಧ ಕಾಮಗಾರಿಗಳಿಗಾಗಿ 2 ಕೋಟಿ ಹೆಚ್ಚುವರಿ ಅನುದಾನವು ಮಂಜೂರಾಗಿದ್ದು ಶೀಘ್ರದಲ್ಲಿಯೇ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಸೃಷ್ಟ ಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಎರಡು ಕೋಲಿಂಗ್ ಟಾವರ್ಗಳನ್ನು ನಿರ್ಮಿಸುವ ಚಿಂತನೆ ನಡೆದಿದ್ದು ಇದಕ್ಕಾಗಿ ಒಟ್ಟೂ 10 ಕೋಟಿ ರೂ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುವ ಪ್ರಯತ್ನ ಮುಂದುವರೆದಿದ್ದು ಇದರಿಂದ ಇಡೀ ಜಿಲ್ಲೆಯ ಮೀನು, ತರಕಾರಿ, ಹೂ ಮತ್ತು ಹಣ್ಣೂ ಸೇರಿದಂತೆ ಇನ್ನಿತರ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆವಣಿಗೆ ಕಾಣಲಿದ್ದು, ಇದರ ಜೊತೆಗೆ ಹೈಟೆಕ್ ಹರಾಜು ಕಟ್ಟೆಯನ್ನು ನಿರ್ಮಿಸಲಾಗುವುದು. ಜಿಲ್ಲೆಯ ಎಪಿಎಂಸಿಗಳ ಸಮಗ್ರ ಅಭಿವೃದ್ದಿಗೆ ತಾವು ಸಿದ್ದರಾಗಿದ್ದು ಎಲ್ಲಾ ಸಮಿತಿಗಳ ಸಹಕಾರ ಮತ್ತು ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಹಳಿಯಾಳದಲ್ಲಿ ಎಪಿಎಂಸಿ ಪ್ರಾಗಂಣದಲ್ಲಿ ಪಾದಚಾರಿಗಳ ಮಾರ್ಗ ಮತ್ತು 6 ಅಂಗಡಿಗಳ ಬೃಹತ್ ಸಂಕೀರ್ಣ ನಿರ್ಮಿಸಲಾಗುವುದು, ರೈತಭವನದ ನವೀಕರಣ, ಫೇವರ್ಸ್ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯಲಿದ್ದು, ಭವಿಷ್ಯದಲ್ಲಿ ಉತ್ತಮ ಸೇವೆಗಳನ್ನು ನೀಡಲು ಇವುಗಳು ಸಹಾಯಕಾರಿಯಾಗಲಿವೆ. ಸುಮಾರು 800 ಮೆಟ್ರಿಕ್ ಟನ್ ಸಾಮಥ್ರ್ಯದ ಎರಡು ದೊಡ್ಡ ಗಾತ್ರದ ಗೋಡಾನ್ಗಳನ್ನು ಸಹ ನಿರ್ಮಿಸುವ ಗುರಿ ಹೊಂದಲಾಗಿದ್ದು ರೈತರ ಉತ್ಪನ್ನ ಮತ್ತು ಮಾರುಕಟ್ಟೆ ಒದಗಿಸಲು ತಾವು ಸಿದ್ದರಾಗಿದ್ದೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಯಶವಂತ್ ಪಟ್ಟೇಕರ, ಸಂತೋಷ ಮಿರಾಶಿ ಮತ್ತು ಉಮೇಶ್ ಬೋಳಶೆಟ್ಟಿ ಇದ್ದರು.
Leave a Comment