ದಾಂಡೇಲಿ: ದಾಂಡೇಲಿ ನಗರ ಸಭೆಯವರು ನೀರಿನ ಕರವನ್ನು ಹೆಚ್ಚಿಸಿದರ ಕುರಿತು ಅಕ್ಷೇಪಣೆಯನ್ನು ಸಲ್ಲಿಸುತ್ತಾ ಬಂದರು ಚುನಾಯಿತ ಪ್ರತಿನಿಧಿಗಳಾಗಲಿ ಸರರ್ಕಾರಿ ಅಧಿಕಾರಿಗಳಾಗಲಿ ಆಕ್ಷೇಪಣೆಗೆ ಕ್ಯಾರೆ ಎನ್ನದೇ ಹಾರಿಕೆಯ ಉತ್ತರಗಳನ್ನು ನೀಡುತ್ತಾ ದಿನ ಕಳೆಯುತ್ತಿದ್ದಾರೆಂದು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯ ಅಧ್ಯಕ್ಷ ಅಕ್ರಂಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕೆಂಬುದು ದಾಂಡೇಲಿ ಸಾರ್ವಜನಿಕರ ಬೇಡಿಕೆಯಾಗಿದೆ ಅಲ್ಲದೇ ಕಳೇದ ಮೂರು ವರ್ಷದಿಂದ ದಾಂಡೇಲಿ ನಗರದ ಹೀರಿಯ ನಾಗರಿಕರ ಸಮಿತಿ ಮತ್ತು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯವರು ಉಚಿತ ನೀರು ಒದಗಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ ಆದರೇ ನಗರಸಭೆಯವರು ಮಾತ್ರ ನೀರಿನ ಕರವನ್ನು ಹೆಚ್ಚಿಸುತ್ತಾ ಮನವಿಗೆ ಸ್ಪಂದಿಸದೆ ಸಾರ್ವಜನೀಕರಿಗೆ ಅವಮಾನ ಮಾಡುತ್ತಿದ್ದಾರೆಂದು ಅಕ್ರಂಖಾನ್ ಆರೋಪಿಸಿದ್ದಾರೆ.
ಸರಕಾರವು ನೀರಿನ ಸರಬರಾಜು ಯೋಜನೆ ಮತ್ತು ಒಳ ಚರಂಡಿಗಳ ಆರ್ಥಿಕ ಮಾದರಿ ಮತ್ತು ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಲು ನೀಡಿರುವ ಆದೇಶವನ್ನು ಅಧಿಕಾರಿಗಳೆ ಉಲಂಘಿಸಿದ್ದಾರೆ. ಕಾರಣ ಸದರಿ ಆದೇಶದಲ್ಲಿರುವ ಎಲ್ಲಾ ಆದೇಶಗಳನ್ನು ಜಾರಿ ಮಾಡದೆ ಈ ಹಿಂದೆ ಇದ್ದ ನೀರಿನ ಕರ 120 ಇದ್ದದನ್ನು 180 ನ್ನು ಸಾರ್ವಜನಿಕರಿಂದ ವತ್ತಾಯ ಪೂರಕವಾಗಿ ತುಂಬಿಸಿಕೊಳ್ಳುತ್ತಿದ್ದಾರೆ.
ಸದರಿ ಆದೇಶದ ಪ್ರಕಾರ ಸರಕಾರದ ಆದೇಶವನ್ನು ಪತ್ರಿಕೆಯಲ್ಲಿ ಮತ್ತು ಕರ ಪತ್ರಗಳಲ್ಲಿ ಮುದ್ರಿಸಿ ಪ್ರಚಾರ ಮಾಡಿ ಆರು ತಿಂಗಳ ಸಮಯಕೊಟ್ಟು ಆ ಆರು ತಿಂಗಳಲ್ಲಿ ಮೀಟರನ್ನು ಕೂಡಿಸುವ ವ್ಯವಸ್ಥೆಯು ಸಹ ನಗರಸಭೆಯೆ ಮಾಡುವ ಆದೇಶ ಸರಕಾರವೇ ನೀಡಿದೆ ಅಲ್ಲದೆ ಮೀಟರ ಅಳವಡಿಸಲು ಅದಕ್ಕೆ ತಗಲುವ ವೆಚ್ಚವನ್ನು ಬಡತನ ರೇಖೆಗಿಂತ ಕೇಳಗಿರುವ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ನಗರಸಭೆಯಿಂದ ಉಚಿತವಾಗಿ ಮೀಟರ ಅಳವಡಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕು ಉಳಿದ ಕುಟುಂಬಗಳಿಗೆ ಹಂತ ಹಂತವಾಗಿ ಹಣ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ಇದ್ದರು ಸಹ ನಗರಸಭೆ ಜಾರಿಮಾಡಲು ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.
ನೀರಿನ ಖರ್ಚು ವೆಚ್ಚದಲ್ಲಿ ಲಾಭ ನಷ್ಟ ಇಲ್ಲದೆ ನೀರಿನ ಕರವನ್ನು ಸಂಗ್ರಹಿಸಬೇಕು. ಎನ್ನುವ ಆದೇಶ ಇದ್ದರು ಇದನ್ನು ಗಾಳಿಗೆ ತೂರಿರುವ ನಗರಸಭೆಯವರು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ನೀರಿನ ತೆರಿಗೆ ಸಮಗ್ರಹಿಸುತ್ತಿರುವ ಬಗ್ಗೆ ನಗರದ ಎಲ್ಲಾ ರಾಜಕೀಯ ಪಕ್ಷಗಳು ಸಭೆ ಸೇರಿ ಈ ವಿಷಯದ ಬಗ್ಗೆ ಸುದೀಘರ್Àವಾಗಿ ಚರ್ಚಿಸಿದ್ದು ದಾಂಡೇಲಿ ನಾಗರಿಕರ ನೀರಿನ ಕರ ಸಮಸ್ಯೆಯನ್ನು ಪರಿಹರಿಸಲು ಸರಕಾರ ಯಾವುದೇ ಕ್ರಮ ಇದುವರೆಗೆ ವಹಿಸುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಿ ಇತÀ್ಯರ್ಥ ಮಾಡಬೇಕೆಂದು ಆಗ್ರಹಿಸಲಾಗಿಯಿತು ಎಂದು ಅಕ್ರಂಖಾನ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಮಂತ್ರಿಯಾದ ದೇಶಪಾಂಡೆಯವರಿಗೆ , ಜಿಲ್ಲಾಧಿಕಾರಿಗಳಿಗೆ, ನಗರಸಭೆ ಅಧ್ಯಕ್ಷರಿಗೆ ಹಲವಾರು ಭಾರಿ ಮನವಿ ಸಲ್ಲಿಸಿ ವತ್ತಾಯಿಸಿದರು ದಾಂಡೇಲಿಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಕುರಿತು ಪಕ್ಷಾತೀತವಾಗಿ ದಾಂಡೇಲಿ ಸಾರ್ವಜನಿಕ ನೀರಿನ ಬಗ್ಗೆ ಸಭೆ ಕರೆದು ಮುಂದಿನ ಹೋರಾಟದ ರೂಪರೇಶಗಳನ್ನು ರೂಪಿಸಲು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ. ಮುಖ್ಯವಾಗಿ ದಾಂಡೇಲಿಗೆ ಉಚಿತ ಶುದ್ಧ ನೀರು ಸರಭರಾಜು ಮಾಡಬೇಕು ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮೀಲ್ ಇವರು ಸಾಮಾಜಿಕ ಹೋಣೆಗಾರಿಕೆಯಲ್ಲಿ ನೀರು ಸರಭರಾಜು ಮಾಡಲು ಆಗುವ ಖರ್ಚನ್ನು ಅವರು ವಹಿಸಿಕೊಂಡು ಸಾರ್ವಜನಿಕರಿಗೆ ಉಚಿತ ನೀರು ಸರಭರಾಜು ಯೋಜನೆಯನ್ನು ಪ್ರಾರಂಭಿಸಲು ಸಹಾಯ ಮಾಡಬೇಕೆಂದು ಆಗ್ರಹಿಸಲಾಗಿದೆ.
ಸಭೆಯ ಅಧ್ಯಕ್ಷತೆ ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷರಾದ ವಿ.ಎ.ಕೊನಾಪುರಿ ವಹಿಸಿದ್ದರು. ಸೈಯದ ತಂಗಳ ಅಧ್ಯಕ್ಷರು ಬ್ಲಾಕ ಕಾಂಗ್ರೇಸ, ಅಶೋಕ ಪಾಟೀಲ ಭಾರತಿಯ ಜನತಾ ಪಕ್ಷ ಜಿಲ್ಲಾ ಸದಸ್ಯರು, ಹರೀಶ ನಾಯ್ಕ ಅಧ್ಯಕ್ಷರು ಸಿ.ಪಿ.ಆಯ್.(ಎಂ) ಪಕ್ಷ ಹಳಿಯಾಳ ತಾಲೂಕ, ಟಿ.ಎಸ್.ನಾಯ್ಕ ಮಾಜಿ ನಗರಸಭೆ ಅಧ್ಯಕ್ಷರು ದಾಂಡೇಲಿ, ಅಕ್ರಮ್ ಖಾನ್ ಅಧ್ಯಕ್ಷರು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ಸಿ.ಎ.ಲೋಬೊ ಪ್ರಧಾನ ಕಾರ್ಯದರ್ಶಿ, ಸತೀಶ ನಾಯ್ಕ, ಅಬ್ದುಲ ವಹಾಬ ಬಾನ್ಸುರಿ, ಮುಜಿಬಾ ಚಬ್ಬಿ, ಮೀನಾಕ್ಷಿ ಬಡಿಗೇರ, ಲೀಲಾ ಮಾದರ, ರವಿ ಚೌವ್ಹಾಣ, ರಮೇಶ ಚಂದಾವರ ಇದ್ದರು.
Leave a Comment