ಸಿದ್ದಾಪುರ (ಉ.ಕ);
ಸಂವಿಧಾನ ನಮ್ಮೆಲ್ಲರ ಆಸ್ತಿ. ಅದಕ್ಕೆ ಅವಮಾನ ಆಗಬಾರದು. ಆದ್ದರಿಂದ ಸಂವಿಧಾನವನ್ನು ಬದಲಾಯಿಸುವ ವ್ಯಕ್ತಿಗಳು ಆಯ್ಕೆಯಾಗಬಾರದು. ಅವರನ್ನು ದೂರವಿಡುವ ಉದ್ದೇಶದಿಂದ ಮುಂಬರುವ ಲೋಕಸಭಾ ಚುನಾಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ, ಕರ್ನಾಟಕ ರಾಹುಲ್ ಗಾಂಧಿ ಟೀಂ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ಗಣಪತಿ ನಾಯ್ಕ ತಿಳಿಸಿದ್ದಾರೆ.
ಅವರು ಪಟ್ಟಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಹಿಂದೆ ಬಿಜೆಪಿಯಲ್ಲಿದ್ದ ಆನಂದ ಅಸ್ನೋಟಿಕರ, ಸೂರಜ್ ನಾಯ್ಕ ಸಂಸದರೊಂದಿಗೆ ಕೆಲಸ ಮಾಡಿ ಇಂದು ಅವರ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ. ಮುಂದೆ ಅಧಿಕಾರದಾಶೆಗೆ ಅದೇ ಪಕ್ಷಕ್ಕೆ ಹೊಗುವುದಿಲ್ಲಾ ಎನ್ನುವುದು ಯಾವ ಗ್ಯಾರಂಟಿ. ರಾಜಕಿಯ ಪೇರಿತವಾಗಿ ಈ ರೀತಿ ಹೇಳಿಕೆ ನೀಡಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಕುಟುಂಬ ರಾಜಕೀಯ ಮತ್ತು ಹಣದಿಂದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗುತ್ತಿಲ್ಲಾ. ರಾಹುಲ್ ಗಾಂಧಿಯವರಿಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಆದರೂ ಇದಕ್ಕೆ ಸ್ಥಳೀಯ ಕಾಂಗ್ರೇಸ್ ಮುಖಂಡರು ಧ್ವನಿ ಎತ್ತುತ್ತಿಲ್ಲಾ. ಆದ್ದರಿಂದ ಬಡವರ, ಶೋಷಿತರ ಧ್ವನಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.
ಕರ್ನಾಟಕ ರಾಹುಲ್ ಗಾಂಧಿ ಟೀಂ ನ ರಾಜ್ಯಾಧ್ಯಕ್ಷರು ನನಗೆ ಬೆಂಬಲ ಸೂಚಿಸಿದ್ದಾರೆ. ಸ್ಪರ್ಧೆ ಮಾಡುವುದು ಖಚಿತ. ಸಂದರ್ಭ ಬಂದರೆ ರಾಹುಲ್ ಗಾಂಧಿ ಟೀಂ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ವಾಪಸಾತಿ ಇಲ್ಲಾ. ಜಿಲ್ಲೆಯಲ್ಲಿ ಹಿತೈಶಿಗಳು, ಆತ್ಮೀಯರ ಭೇಟಿ ಮಾಡಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದರು.
Leave a Comment