ಹಳಿಯಾಳ:- ಧರ್ಮ ರಕ್ಷಣೆ ಮಾಡಲು ಲೋಕಸಭಾ ಸದಸ್ಯನಾಗಿದ್ದೇನೆ, ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಮಾಡಿ- ಮಠ ಕಟ್ಟಿಕೊಂಡು ಪ್ರವಚನ ನೀಡಿ ಅದನ್ನು ಬಿಟ್ಟು ರಾಜಕೀಯ ಮಾಡಬೇಡಿ- ಅನಂತಕುಮಾರ ರಾಜಕೀಯಕ್ಕೆ ನಯಾ ಪೈಸೆ ಲಾಯಕ್ಕಿಲ್ಲವೆಂದು ಲೋಕಸಭಾ ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಾ ಪ್ರಹಾರ ನಡೆಸಿದರು.
ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಸೋಲು ಖಚಿತವಾಗಿದೆ. 5 ಬಾರಿ ಸಂಸದರಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಏನು ? ಎಂದು ಪ್ರಶ್ನೀಸಿದರು.
ಈ ಹಿಂದೆ ಜಿಲ್ಲೆಯಲ್ಲಿ ಡಾ.ಚಿತ್ತರಂಜನ ಹತ್ಯೆ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ್ದು, ಬಳಿಕ ಅಟಲ್ ಬಿಹಾರಿ ವಾಜಪೇಯಿ ಅಲೆ, ಆ ನಂತರ ಮೋದಿ ಅಲೆ ಈ ವಿಚಾರಗಳಲ್ಲೇ ಗೆದ್ದು ಬಿಗುತ್ತಿರುವ ಹೆಗಡೆ ಈ ಬಾರಿಯ ಯಾವ ಅಲೆಯು ಕೆನರಾ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣುವ ಅನಂತಕುಮಾರನನ್ನು ಜನ ಮನೆಗೆ ಕಳುಹಿಸಲಿದ್ದಾರೆಂದರು.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ದಿ. ಬಂಗಾರಪ್ಪ ಅವರ ಅನುಯಾಯಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ ಅಲ್ಲದೇ ಸಚಿವ ಆರ್.ವಿ.ದೇಶಪಾಂಡೆ ಅವರ ಶಕ್ತಿ, ಕಿತ್ತೂರು-ಖಾನಾಪುರ ಭಾಗದಲ್ಲಿ ಎಮ್.ಇಎಸ್ ಹಾಗೂ ಮರಾಠಾ ಬಾಂಧವರು ಈಗಾಗಲೇ ಆಶೀರ್ವಾದ ಮಾಡಿದ್ದಾರೆ. ಅಲ್ಲಿಯ ನಾಯಕರಾದ ಇನಾಮದಾರ ಹಾಗೂ ಅಪ್ಪಾಸಾಹೇಬ ಪಾಟೀಲ್ ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದು ಎಲ್ಲ ಕ್ಷೇತ್ರಗಳಲ್ಲಿ ನಾವು ಮುಂಚುಣಿಯಲ್ಲಿದ್ದು 60-70% ನಿರ್ಣಾಯಕ ಮತಗಳೊಂದಿಗೆ ನನ್ನ ಗೆಲುವಾಗಲಿದೆ ಎಂದು ಭವಿಷ್ಯ ನುಡಿದರು ಅಸ್ನೋಟಿಕರ.
ಹಲವಾರು ಕಾರಣಗಳಿಂದ ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಹಗುರವಾಗಿ ಮಾತನಾಡುವ ಹೆಗಡೆ ಅವರನ್ನು ಅವರದೇ ಪಕ್ಷದವರು ಈ ಬಾರಿ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದು ನಮಗೆ ಬೆಂಬಲ ನೀಡುತ್ತಿದ್ದಾರೆ. ಕೇವಲ ಧರ್ಮ ಆಧಾರಿತ ರಾಜಕಾರಣ ಮಾಡುವ ಸಂಸದರು ಅಭಿವೃದ್ದಿಯ ವಿಚಾರಕ್ಕೆ ಬಂದರೇ ಮಾತೆ ಆಡುವುದಿಲ್ಲ. ಅವರು ಎಷ್ಟು ಸಭೆಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಎಷ್ಟು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ ಎಂದು ಪ್ರಶ್ನೀಸಿದ ಅಸ್ನೋಟಿಕರ್ ಅವರದ್ದೇ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಸ್ಪಂದಿಸದ ಸಂಸದರು ಯುವಕರ ಕೈಗೆ ಉದ್ಯೋಗ ನೀಡಿ ಎಂದರೇ ಕೈಗೆ ಕತ್ತಿ ಕೊಡುವ ಕೆಲಸ ಮಾಡುತ್ತಾರೆ ಎಂದು ಟೀಕೆಗಳ ಸುರಿಮಳೆ ಗೈದರು.
ಕೌಶಲ್ಯ ಅಭಿವೃದ್ದಿ ಮಂತ್ರಿಯಾಗಿ ಜಿಲ್ಲೆಗೆ ಏನು ಮಾಡಿದ್ದಾರೆ ? ಒಬ್ಬರಿಗಾದರೂ ಉದ್ಯೋಗಾವಕಾಶ ಒದಗಿಸಿಕೊಟ್ಟಿದ್ದಾರೆಯೇ ? 5 ಬಾರಿ ಸಂಸದರಾಗಿರುವ ಇವರು ಜಿಲ್ಲೆಯ ಜ್ವಲಂತ ಅತಿಕ್ರಮಣ ಸಮಸ್ಯೆಯ ಬಗ್ಗೆ, ಶಾಶ್ವತ ಕುಡಿಯುವ ನೀರಿನ ಸಮಸ್ಯೆ, ಅಡಿಕೆ ಇತರೇ ಬೆಳೆಗಾರರ ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೇಗಳನ್ನು ಕೇಳಿದ್ದಾರೆಯೇ ಹೋರಾಟ ಮಾಡಿದ್ದಾರೆಯೇ ಎಂದು ಪ್ರಶ್ನೇಗಳನ್ನು ಕೇಳಿದ ಆನಂದ ಚುನಾವಣೆ ಸಮಯದಲ್ಲಿ ಮಾತ್ರ ಕಂಡು ಗೆದ್ದ ಮೇಲೆ ನಾಪತ್ತೆಯಾಗುವವರನ್ನು ಪ್ರಜ್ಞಾವಂತ ಜನರು, ಯುವಕರು ಈ ಬಾರಿ ಮನೆಗೆ ಕಳುಹಿಸಬೇಕಿದೆ ಹಾಗೂ ನಮಗೊಂದು ಅವಕಾಶ ಕೊಟ್ಟು ನೋಡಿ ಎಂದು ಅಸ್ನೋಟಿಕರ ವಿನಂತಿಸಿದರು.
ತಾವು ಗೆದ್ದರೇ ಪ್ರತಿ ತಾಲೂಕಿಗೆ ಭೇಟಿ ನೀಡುತ್ತೇನೆ ಕಾಲ ಕಾಲಕ್ಕೆ ಜನಸ್ಪಂದನ ಸಭೆಗಳನ್ನು ಮಾಡಿ ಜಿಲ್ಲೆಯ ಧ್ವನಿಯಾಗಿ ಲೋಕಸಭೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದ ಅಸ್ನೋಟಿಕರ ಎಪ್ರಿಲ್ 2 ರಂದು ಜಿಲ್ಲೆಯಲ್ಲಿ ಸಚಿವ ದೇಶಪಾಂಡೆ ಹಾಗೂ ಜಿಲ್ಲಾ ಪ್ರಮುಖ ಮುಖಂಡರು, ಅಧ್ಯಕ್ಷರೊಂದಿಗೆ ಸಭೆ ನಡೆಯಲಿದೆ. ದಿ.4ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಹಾಗೂ ದಿ,5 ರಿಂದ ಕಾಂಗ್ರೇಸ್-ಜೆಡಿಎಸ್ ಒಟ್ಟಾಗಿ ಚುನಾವಣಾ ಪ್ರಚಾರ ಆರಂಭಿಸಲಿದ್ದೇವೆಂದರು.
ಇನ್ನೂ ಪತ್ರಕರ್ತರು ಕೇಳಿದ ಪ್ರಶ್ನೇಗೆ ಪ್ರತಿಕ್ರಿಯಿಸಿದ ಅವರು ಸಚಿವ ದೇಶಪಾಂಡೆ ಅವರು ಮೈತ್ರಿ ಧರ್ಮ ಪಾಲನೆ ಮಾಡಲಿದ್ದಾರೆ ಜಿಲ್ಲೆಯಲ್ಲಿ ಕಾರ್ಯಕರ್ತರಲ್ಲಿ ಏನೆ ಅಸಮಾಧಾನವಿದ್ದರು ಅವರು ಅದನ್ನು ಶಮನ ಮಾಡಲಿದ್ದಾರೆ ಹಾಗೂ ದೇಶಪಾಂಡೆ, ಮಾರ್ಗರೇಟ್ ಆಳ್ವಾ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇನೆಂದು ಅಸ್ನೋಟಿಕರ ಸ್ಪಷ್ಟಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಎನ್.ಎಸ್.ಜಿವೋಜಿ, ಎಸ್.ಎ.ಶೇಟವಣ್ಣವರ, ಬಿ.ಆರ್.ನಾಯ್ಕ, ಉಮೇಶ, ನಾರಾಯಣ ದಡ್ಡಿ ಇದ್ದರು.
Leave a Comment