• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಡಿಯುವ ನೀರಿನ ಕರ ಕುರಿತು ದಾಂಡೇಲಿ‌ ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯೊಂದಿಗೆ ಚರ್ಚಿಸಿದ ಅಧಿಕಾರಿಗಳು

April 4, 2019 by Yogaraj SK Leave a Comment

watermarked dandeli 1

ದಾಂಡೇಲಿ: ತಾಲೂಕಿನ ತಹಶಿಲ್ದಾರರಾದ ಪಾಟೀಲ ನಗರಸಭೆಯ ಪೌರಾಯುಕ್ತÀರಾದ ಸೈಯದ ಜಾಹೇದಾಲಿ ಇವರು ನಗರಸಭೆಯಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮಾ. 29 ರಂದು ನೀಡಿದ ಮನವಿಯಲ್ಲಿರುವ ವಿಷಯಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಮಂಗಳವಾರ ಸುದಿರ್ಘವಾಗಿ ಚರ್ಚೆ ನಡೆಸಿದರು.
ದಾಂಡೇಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಹಾಗೂ ನೀರಿನ ಕರ ಹೆಚ್ಚಿಸಿದ್ದ ಕುರಿತು ಸುದಿರ್ಘವಾಗಿ ಚರ್ಚೆ ನಡೆಸಿ ಸರಕಾರದ ಆದೇಶದ ಪ್ರಕಾರ ನೀರನ ಕರ ಆಕರಣೆ ಮಾಡಲಾಗುತ್ತಿಲ್ಲ. ಎಂದು ಸಮಿತಿಯ ಪದಾಧಿಕಾರಿಗಳು ಅಕ್ಷೇಪಿಸಿದಾಗ ಆಯಕ್ತಕರು ಈ ವಿಷಯದ ಬಗ್ಗೆ ಮೆಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಹೇಳಿದರು ಅಲ್ಲದೆ ಶುದ್ಧ ಕುಡಿಯುವ ನೀರಿನ ಬಗ್ಗೆಯು ಸಹ ಸೂಕ್ತ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.
2007 ರಲ್ಲಿ ದಾಂಡೇಲಿ ಬಚಾವೊ ಸಮಿತಿ ಕೈಗೊಂಡ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟದ ಗಂಭೀರತೆಯನ್ನು ಅರಿತು ದಾಂಡೇಲಿ ನಗರದ ಸಮಗ್ರ ಅಭಿವೃದ್ಧಿಗಾಗಿ ಅಂದಿನ ರಾಜ್ಯ ಸರಕಾರದ ಕಾರ್ಯದರ್ಶಿ ಆಯ್.ಎ.ಎಸ್ ಅಧಿಕಾರಿಯಾದ ಮಹೇಂದ್ರ ಜೈನ ನೇತೃತ್ವದ ಆಯೋಗ ನೇಮಿಸಿ 180 ಪುಟಗಳ ವಿಸ್ತಾರವಾದ ವರದಿ ದಾಂಡೇಲಿ ಅಭಿವೃದ್ಧಿ ದೃಷ್ಟಿ ಕೊನದಿಂದ ಸರಕಾರ ಪಡೆದುಕೊಂಡಿತ್ತು ವರದಿ ಸಲ್ಲಿಸಿ 12 ವರ್ಷ ಕಳೆದರು ವರದಿಯಲ್ಲಿನ ಯಾವುದೇ ಶಿಫಾರಸ್ಸುಗಳನ್ನು ಇಂದಿನ ವರೆಗೆ ಅನುಷ್ಟಾನಗೊಳಿಸಲಾಗಿಲ್ಲ.
ವರದಿಯಲ್ಲಿನ ಬಹುಮುಖ್ಯ ವಿಷಯಗಳಾದ ಮುಚ್ಚಿರುವ ಕೈಗಾರಿಕೆ ಪ್ರಾರಂಭಿಸಬೇಕು, ಐ.ಟಿ., ಬಿ.ಟಿ, ಬಿ.ಪಿ.ಒ, ಗಳನ್ನು ಆರಂಭಿಸಬೇಕು. ಪರಿಸರ ಸ್ನೇಹಿ ಪ್ರವಾಸೊದ್ಯಮ, ಮನೆಮಾಲಿಕತ್ವವನ್ನು ವಹಿಸಿಕೊಡುವುದು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಮಂಜೂರಿ ಮಾಡಬೇಕೆಂದು ತಿಳಿಸಿದರು. ವಿಶೇಷ ಪರಿಹಾರ ಧನ ಸಹ ಬಿಡುಗಡೆ ಮಾಡಬೇಕೇಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನೇಕ ಯೋಜನೆ ಜಾರಿ ಮಾಡಬೇಕೆಂದು ವರಧಿಯಲ್ಲಿರುವ ಅಂಶಗಳು ಜಾರಿಗೆಯಲ್ಲಿ ಬರಲಿಲ್ಲ ಎಂದು ಒತ್ತಾಯಿಸಿದಾಗ ವರಧಿಯಲ್ಲಿರುವ ವಿಷಯಗಳ ಬಗ್ಗೆ ಮೇಲಾಧಿಕಾರಿಗಳ ಜೋತೆಗೆ ಚರ್ಚಿಸಿ ಕೂಡಲೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಸಾಮಾಜಿಕ ಹೋಣೆಗಾರಿಕೆ(ಸಿ.ಎಸ್.ಆರ್) ಶೆಕಡಾ 2 ರಷ್ಟು ಲಾಭದಲ್ಲಿ ಖಾಸಗಿ ಕಂಪನಿಯವರು ಸಾರ್ವಜನಿಕರ ಸೇವೆಗಾಗಿ ಉಪಯೋಗಿಸ ಬೇಕಾಗುತ್ತದೆ. ಆದರೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ದಾಂಡೇಲಿಯವರ ನಗರಕ್ಕೆ ಶಾಶ್ವತವಾದ ಯಾವುದೇ ಯೋಜನೆ ಜಾರಿ ಮಾಡಲಿಲ್ಲ ಎಂದು ಸಮಿತಿಯವರು ಒತ್ತಾಯಿಸಿದ ವೆಸ್ಟ್ ಕೊಸ್ಟ್ ಪೆಪರ್ ಮೀಲ್ ಅಧಿಕಾರಿಗಳ ಜೋತೆಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದರು ಅಂತಿಮವಾಗಿ ಆದಷ್ಟು ಬೇಗನೆ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಅಕ್ರಮ್ ಖಾನ್, ಅಶೋಕ ಪಾಟೀಲ, ಸಿ.ಎ. ಲೊಬೊ, ಅಬ್ದುಲ್ ವಹಾಬ ಬಾಂಸರಿ, ಮಹೇಶ ಮೆತ್ರಿ, ಸಲೀಮ್ ಕಾಕರ, ಸೈಯದ ಉಸ್ಮಾನ, ಚಂದ್ರಕಾಂತ ನಡಿಗೇರ, ಪ್ರಮೀಣ ಕೊಠಾರಿ, ಸಬಾಸ್ಟಿನ್ ಡಿಮೆಲ್ಲೊ, ಧನಂಜಯ ಕಲಘುಟಕರ್, ಎಸ್.ಎ ಕೊನಾಪುರಿ, ಎಸ್.ಎಸ್ ಕುರಡೆಕರ್, ರಮೇಶ ಚಂದಾವರ, ಗುರುದಾಸ ನಾಯ್ಕ, ಡಿ.ಎಮ್ ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Dandeli Bachao Committee's struggle to hold talks with the office bearers on Tuesday, Dandeli's comprehensive development committee, Dandeli's comprehensive development struggle, discussions, projects, Syed Jahdali, the development of development, ಕುರಿತು ಚರ್ಚಿಸಿದ ಅಧಿಕಾರಿಗಳು, ದಾಂಡೇಲಿ ಬಚಾವೊ ಸಮಿತಿ ಕೈಗೊಂಡ ಹೋರಾಟದ ಫಲ, ದಾಂಡೇಲಿ‌ ಸಮಗ್ರ ಅಭಿವೃದ್ಧಿ ಹೋರಾಟ, ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ಪದಾಧಿಕಾರಿಗಳೊಂದಿಗೆ ಮಂಗಳವಾರ ಸುದಿರ್ಘವಾಗಿ ಚರ್ಚೆ, ಯೋಜನೆಗಳ, ಸಮೀತಿಯೊಂದಿಗೆ ಅಭಿವೃದ್ಧಿ, ಸೈಯದ ಜಾಹೇದಾಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...