ದಾಂಡೇಲಿ: ತಾಲೂಕಿನ ತಹಶಿಲ್ದಾರರಾದ ಪಾಟೀಲ ನಗರಸಭೆಯ ಪೌರಾಯುಕ್ತÀರಾದ ಸೈಯದ ಜಾಹೇದಾಲಿ ಇವರು ನಗರಸಭೆಯಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮಾ. 29 ರಂದು ನೀಡಿದ ಮನವಿಯಲ್ಲಿರುವ ವಿಷಯಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಮಂಗಳವಾರ ಸುದಿರ್ಘವಾಗಿ ಚರ್ಚೆ ನಡೆಸಿದರು.
ದಾಂಡೇಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಹಾಗೂ ನೀರಿನ ಕರ ಹೆಚ್ಚಿಸಿದ್ದ ಕುರಿತು ಸುದಿರ್ಘವಾಗಿ ಚರ್ಚೆ ನಡೆಸಿ ಸರಕಾರದ ಆದೇಶದ ಪ್ರಕಾರ ನೀರನ ಕರ ಆಕರಣೆ ಮಾಡಲಾಗುತ್ತಿಲ್ಲ. ಎಂದು ಸಮಿತಿಯ ಪದಾಧಿಕಾರಿಗಳು ಅಕ್ಷೇಪಿಸಿದಾಗ ಆಯಕ್ತಕರು ಈ ವಿಷಯದ ಬಗ್ಗೆ ಮೆಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಹೇಳಿದರು ಅಲ್ಲದೆ ಶುದ್ಧ ಕುಡಿಯುವ ನೀರಿನ ಬಗ್ಗೆಯು ಸಹ ಸೂಕ್ತ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.
2007 ರಲ್ಲಿ ದಾಂಡೇಲಿ ಬಚಾವೊ ಸಮಿತಿ ಕೈಗೊಂಡ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟದ ಗಂಭೀರತೆಯನ್ನು ಅರಿತು ದಾಂಡೇಲಿ ನಗರದ ಸಮಗ್ರ ಅಭಿವೃದ್ಧಿಗಾಗಿ ಅಂದಿನ ರಾಜ್ಯ ಸರಕಾರದ ಕಾರ್ಯದರ್ಶಿ ಆಯ್.ಎ.ಎಸ್ ಅಧಿಕಾರಿಯಾದ ಮಹೇಂದ್ರ ಜೈನ ನೇತೃತ್ವದ ಆಯೋಗ ನೇಮಿಸಿ 180 ಪುಟಗಳ ವಿಸ್ತಾರವಾದ ವರದಿ ದಾಂಡೇಲಿ ಅಭಿವೃದ್ಧಿ ದೃಷ್ಟಿ ಕೊನದಿಂದ ಸರಕಾರ ಪಡೆದುಕೊಂಡಿತ್ತು ವರದಿ ಸಲ್ಲಿಸಿ 12 ವರ್ಷ ಕಳೆದರು ವರದಿಯಲ್ಲಿನ ಯಾವುದೇ ಶಿಫಾರಸ್ಸುಗಳನ್ನು ಇಂದಿನ ವರೆಗೆ ಅನುಷ್ಟಾನಗೊಳಿಸಲಾಗಿಲ್ಲ.
ವರದಿಯಲ್ಲಿನ ಬಹುಮುಖ್ಯ ವಿಷಯಗಳಾದ ಮುಚ್ಚಿರುವ ಕೈಗಾರಿಕೆ ಪ್ರಾರಂಭಿಸಬೇಕು, ಐ.ಟಿ., ಬಿ.ಟಿ, ಬಿ.ಪಿ.ಒ, ಗಳನ್ನು ಆರಂಭಿಸಬೇಕು. ಪರಿಸರ ಸ್ನೇಹಿ ಪ್ರವಾಸೊದ್ಯಮ, ಮನೆಮಾಲಿಕತ್ವವನ್ನು ವಹಿಸಿಕೊಡುವುದು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಮಂಜೂರಿ ಮಾಡಬೇಕೆಂದು ತಿಳಿಸಿದರು. ವಿಶೇಷ ಪರಿಹಾರ ಧನ ಸಹ ಬಿಡುಗಡೆ ಮಾಡಬೇಕೇಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನೇಕ ಯೋಜನೆ ಜಾರಿ ಮಾಡಬೇಕೆಂದು ವರಧಿಯಲ್ಲಿರುವ ಅಂಶಗಳು ಜಾರಿಗೆಯಲ್ಲಿ ಬರಲಿಲ್ಲ ಎಂದು ಒತ್ತಾಯಿಸಿದಾಗ ವರಧಿಯಲ್ಲಿರುವ ವಿಷಯಗಳ ಬಗ್ಗೆ ಮೇಲಾಧಿಕಾರಿಗಳ ಜೋತೆಗೆ ಚರ್ಚಿಸಿ ಕೂಡಲೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಸಾಮಾಜಿಕ ಹೋಣೆಗಾರಿಕೆ(ಸಿ.ಎಸ್.ಆರ್) ಶೆಕಡಾ 2 ರಷ್ಟು ಲಾಭದಲ್ಲಿ ಖಾಸಗಿ ಕಂಪನಿಯವರು ಸಾರ್ವಜನಿಕರ ಸೇವೆಗಾಗಿ ಉಪಯೋಗಿಸ ಬೇಕಾಗುತ್ತದೆ. ಆದರೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ದಾಂಡೇಲಿಯವರ ನಗರಕ್ಕೆ ಶಾಶ್ವತವಾದ ಯಾವುದೇ ಯೋಜನೆ ಜಾರಿ ಮಾಡಲಿಲ್ಲ ಎಂದು ಸಮಿತಿಯವರು ಒತ್ತಾಯಿಸಿದ ವೆಸ್ಟ್ ಕೊಸ್ಟ್ ಪೆಪರ್ ಮೀಲ್ ಅಧಿಕಾರಿಗಳ ಜೋತೆಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದರು ಅಂತಿಮವಾಗಿ ಆದಷ್ಟು ಬೇಗನೆ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಅಕ್ರಮ್ ಖಾನ್, ಅಶೋಕ ಪಾಟೀಲ, ಸಿ.ಎ. ಲೊಬೊ, ಅಬ್ದುಲ್ ವಹಾಬ ಬಾಂಸರಿ, ಮಹೇಶ ಮೆತ್ರಿ, ಸಲೀಮ್ ಕಾಕರ, ಸೈಯದ ಉಸ್ಮಾನ, ಚಂದ್ರಕಾಂತ ನಡಿಗೇರ, ಪ್ರಮೀಣ ಕೊಠಾರಿ, ಸಬಾಸ್ಟಿನ್ ಡಿಮೆಲ್ಲೊ, ಧನಂಜಯ ಕಲಘುಟಕರ್, ಎಸ್.ಎ ಕೊನಾಪುರಿ, ಎಸ್.ಎಸ್ ಕುರಡೆಕರ್, ರಮೇಶ ಚಂದಾವರ, ಗುರುದಾಸ ನಾಯ್ಕ, ಡಿ.ಎಮ್ ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು.
Leave a Comment