• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ.

April 9, 2019 by Vishwanath Shetty Leave a Comment

watermarked bjp pres meet poto

ಹೊನ್ನಾವರ; ಪಟ್ಟಣದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಬಿಜೆಪಿ ಮಾಧ್ಯಮ ಸಂಚಾಲಕರಾದ ನಾಗರಾಜ ನಾಯಕ ಮಾತನಾಡಿ 5 ವರ್ಷದ ಅವಧಿಗೆ ಈ ಹಿಂದೆ ಶಾಸಕರಾಗಿ ಆಯ್ಕೆಮಾಡಿದಾಗ ಪೂರ್ಣ ಅವಧಿಗೆ ಕಾರ್ಯನಿರ್ವಹಿಸದೇ ಇದ್ದ ಆನಂದ ಅಸ್ನೋಡಿಕರ್ 5 ಬಾರಿ ಆಯ್ಕೆಯಾದ ಸಚಿವರಾದ ಅನಂತಕುಮಾರ ಹೆಗಡೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದೀಗ ಚುನಾವಣೆಯ ಹೊಸ್ತಿನಲ್ಲಿ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ದಾಖಲೆ ಸಮೇತ ಮಾಹಿತಿ ನೀಡಿದರು.
ಬಿಜೆಪಿಯಲ್ಲಿ ಹಿಂದುಳಿದವರು ಮುಂದುಳಿದವರು ಎಂದು ತಕ್ಕಡಿಯಲ್ಲಿ ತೂಗುವುದಿಲ್ಲ. ಇವರು ಹೇಳುವ ಪ್ರಕಾರ ಹಿಂದುಳಿದವರಿಗೆ ಬಿಜೆಪಿ ಕತ್ತಿ ನೀಡಿಲ್ಲ ಅಧಿಕಾರ ನೀಡಿದೆ ಎಂದು ತಿರುಗೇಟು ನೀಡುತ್ತಾ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಜೆಪಿಯಿಂದ ಆಯ್ಕೆಯಾದ 3 ಶಾಸಕರು ಹಿಂದುಳಿದವರೆ. 12 ಜನ ಜಿಲ್ಲಾ ಪಂಚಾಯತಿ ಸದಸ್ಯರಲ್ಲಿ 7 ಜನ ಹಿಂದುಳಿದವರೆ ಆಗಿದ್ದಾರೆ. 37 ಮಂದಿ ತಾಲೂಕು ಪಂಚಾಯತಿಗೆ ಪಕ್ಷದಿಂದ ಆಯ್ಕೆಯಾದ ಸದಸ್ಯರಲ್ಲಿ 29 ಜನ ಹಿಂದುಳಿದ ವರ್ಗದವರೆ. 25 ಜಿಲ್ಲಾ ಪದಾಧಿಕಾರಿಗಳಲ್ಲಿ 17 ಜನ ಹಿಂದುಳಿದವರು. ವಿವಿಧ ಮೋರ್ಚಾಗಳ 31 ಪದಾದಿಕಾರಿಗಳಲ್ಲಿ 28 ಜನ ಹಿಂದುಳಿದ ವರ್ಗದವರೆ ಆಗಿದ್ದಾರೆ ಎಂದು ಆನಂದ ಅಸ್ನೋಟಿಕರ್ ಅವರ ಹೇಳಿಕೆಗೆ ದಾಖಲೆ ಸಮೇತ ವಿರೋಧಿಸಿದರು. ಬಿಜೆಪಿ ಹಿಂದುಳಿದ ವರ್ಗಕ್ಕೆ ನೀಡಿದಷ್ಟು ಪ್ರಾಶ್ಯಸ್ತವನ್ನು ಬೇರೆ ಯಾವುದೇ ಪಕ್ಷ ನೀಡಿಲ್ಲ. ನಮಗೆ ಪಕ್ಷಕ್ಕಿಂತ ರಾಷ್ಟ್ರದ ಹಿತ ಮುಖ್ಯ. ಬಿಜೆಪಿ ಎಲ್ಲಾ ಜಾತಿ ಸಮುದಾಯದವರಿಗೂ ಗುರುತಿಸಿದೆ. ಪ್ರಧಾನಿ ಮೋದಿ ಕೂಡಾ ಹಿಂದುಳಿದ ಸಮುದಾಯದವರು ರಾಷ್ಟ್ರಪತಿಯನ್ನು ಒರ್ವ ದಲಿತ ಸಮುದಾಯದವರನ್ನು ಆಯ್ಕೆ ಮಾಡಿದೆ. ನೋವಿನಿಂದ ಜಾತಿವಾರ ಲೆಕ್ಕಚಾರ ಹೇಳುವ ಸಂದರ್ಭವನ್ನು ಮೈತ್ರಿ ಅಭ್ಯರ್ಥಿ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಮತದಾರರ ದಿಕ್ಕು ತಪ್ಪಿಸುವ ಹುನ್ನಾರವೇ ಹೊರತು ಬೇರೆ ಏನು ಇಲ್ಲ ಎಂದು ಅಸ್ನೋಟಿಕರ್ ಹೇಳಿಕಯನ್ನು ಖಂಡಿಸಿದರು.

ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಮತದಾರರ ಆಯ್ಕೆ ಅಂತಿಮ. ಕಳೆದ 5 ಬಾರಿ ಆಯ್ಕೆ ಮಾಡಿದ ಅನಂತಕುಮಾರ ವಿರುದ್ದ ಇವರು ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಕ್ಷೇತ್ರ ಮತದಾರರಿಗೆ ಮಾಡಿದ ಅವಮಾನ. ಅಸ್ನೋಟಿಕರ್ ಒರ್ವ ಪೇಪರ್ ಟೈಗರ್ ಇದ್ದಂತೆ. ಬೇರೆಯವರ ಬಗ್ಗೆ ಪ್ರಶ್ನೆ ಮಾಡುವಾಗ ಆ ವರ್ಗಕ್ಕೆ ತಮ್ಮ ಅಧಿಕಾರ ಅವಧಿಯಲ್ಲಿ ನೀಡಿದ ಕೊಡುಗೆ ಏನು? ಮೀನುಗಾರಿಕಾ ಸಚಿವರಾಗಿದ್ದಾಗ ಆ ಕ್ಷೇತ್ರದ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ. ಬಂದರು ಪ್ರದೇಶದ ಅಭಿವೃದ್ದಿ ಮಾಡುವ ಗೋಜಿಗೆ ಹೋಗಿಲ್ಲ. ಹೂಳೆತ್ತುವ ಕಾರ್ಯವು ಮಾಡಿಲ್ಲ. ಸಚೀವರಾಗಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.

ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಮಾಜಿ ಜಿ.ಪಂ. ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಮುಖಂಡರಾದ ಎಂ.ಎಸ್.ಹೆಗಡೆ, ಲೋಕೇಶ ಮೇಸ್ತ್ರ ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: against the record, at the time of elections, the Asnotikar backward trump card used, the BJP backward class, the BJP has not given the sword to the backward, The democracy system, the irregularities of the Ananthakumar Hegde, the power of the BJP, the President of the Dalit community, ಅಧಿಕಾರ ನೀಡಿದೆ ಎಂದು ತಿರುಗೇಟು, ಅನಂತಕುಮಾರ ಹೆಗಡೆ ಬಗ್ಗೆ ಇಲ್ಲಸಲ್ಲದ ಆರೋಪ, ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ, ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ, ಚುನಾವಣೆಯ ಸಮಯದಲ್ಲಿ, ದಾಖಲೆ ಸಮೇತ ವಿರೋಧಿಸಿದರು, ಪ್ರಜಾಪ್ರಭುತ್ವ ವ್ಯವಸ್ಥೆ ಮತದಾರರ, ಬಿಜೆಪಿ ಹಿಂದುಳಿದ ವರ್ಗ, ರಾಷ್ಟ್ರಪತಿಯನ್ನು ಒರ್ವ ದಲಿತ ಸಮುದಾಯ, ಹಿಂದುಳಿದವರಿಗೆ ಬಿಜೆಪಿ ಕತ್ತಿ ನೀಡಿಲ್ಲ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...