ಹೊನ್ನಾವರ; ಪಟ್ಟಣದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಬಿಜೆಪಿ ಮಾಧ್ಯಮ ಸಂಚಾಲಕರಾದ ನಾಗರಾಜ ನಾಯಕ ಮಾತನಾಡಿ 5 ವರ್ಷದ ಅವಧಿಗೆ ಈ ಹಿಂದೆ ಶಾಸಕರಾಗಿ ಆಯ್ಕೆಮಾಡಿದಾಗ ಪೂರ್ಣ ಅವಧಿಗೆ ಕಾರ್ಯನಿರ್ವಹಿಸದೇ ಇದ್ದ ಆನಂದ ಅಸ್ನೋಡಿಕರ್ 5 ಬಾರಿ ಆಯ್ಕೆಯಾದ ಸಚಿವರಾದ ಅನಂತಕುಮಾರ ಹೆಗಡೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದೀಗ ಚುನಾವಣೆಯ ಹೊಸ್ತಿನಲ್ಲಿ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ದಾಖಲೆ ಸಮೇತ ಮಾಹಿತಿ ನೀಡಿದರು.
ಬಿಜೆಪಿಯಲ್ಲಿ ಹಿಂದುಳಿದವರು ಮುಂದುಳಿದವರು ಎಂದು ತಕ್ಕಡಿಯಲ್ಲಿ ತೂಗುವುದಿಲ್ಲ. ಇವರು ಹೇಳುವ ಪ್ರಕಾರ ಹಿಂದುಳಿದವರಿಗೆ ಬಿಜೆಪಿ ಕತ್ತಿ ನೀಡಿಲ್ಲ ಅಧಿಕಾರ ನೀಡಿದೆ ಎಂದು ತಿರುಗೇಟು ನೀಡುತ್ತಾ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಜೆಪಿಯಿಂದ ಆಯ್ಕೆಯಾದ 3 ಶಾಸಕರು ಹಿಂದುಳಿದವರೆ. 12 ಜನ ಜಿಲ್ಲಾ ಪಂಚಾಯತಿ ಸದಸ್ಯರಲ್ಲಿ 7 ಜನ ಹಿಂದುಳಿದವರೆ ಆಗಿದ್ದಾರೆ. 37 ಮಂದಿ ತಾಲೂಕು ಪಂಚಾಯತಿಗೆ ಪಕ್ಷದಿಂದ ಆಯ್ಕೆಯಾದ ಸದಸ್ಯರಲ್ಲಿ 29 ಜನ ಹಿಂದುಳಿದ ವರ್ಗದವರೆ. 25 ಜಿಲ್ಲಾ ಪದಾಧಿಕಾರಿಗಳಲ್ಲಿ 17 ಜನ ಹಿಂದುಳಿದವರು. ವಿವಿಧ ಮೋರ್ಚಾಗಳ 31 ಪದಾದಿಕಾರಿಗಳಲ್ಲಿ 28 ಜನ ಹಿಂದುಳಿದ ವರ್ಗದವರೆ ಆಗಿದ್ದಾರೆ ಎಂದು ಆನಂದ ಅಸ್ನೋಟಿಕರ್ ಅವರ ಹೇಳಿಕೆಗೆ ದಾಖಲೆ ಸಮೇತ ವಿರೋಧಿಸಿದರು. ಬಿಜೆಪಿ ಹಿಂದುಳಿದ ವರ್ಗಕ್ಕೆ ನೀಡಿದಷ್ಟು ಪ್ರಾಶ್ಯಸ್ತವನ್ನು ಬೇರೆ ಯಾವುದೇ ಪಕ್ಷ ನೀಡಿಲ್ಲ. ನಮಗೆ ಪಕ್ಷಕ್ಕಿಂತ ರಾಷ್ಟ್ರದ ಹಿತ ಮುಖ್ಯ. ಬಿಜೆಪಿ ಎಲ್ಲಾ ಜಾತಿ ಸಮುದಾಯದವರಿಗೂ ಗುರುತಿಸಿದೆ. ಪ್ರಧಾನಿ ಮೋದಿ ಕೂಡಾ ಹಿಂದುಳಿದ ಸಮುದಾಯದವರು ರಾಷ್ಟ್ರಪತಿಯನ್ನು ಒರ್ವ ದಲಿತ ಸಮುದಾಯದವರನ್ನು ಆಯ್ಕೆ ಮಾಡಿದೆ. ನೋವಿನಿಂದ ಜಾತಿವಾರ ಲೆಕ್ಕಚಾರ ಹೇಳುವ ಸಂದರ್ಭವನ್ನು ಮೈತ್ರಿ ಅಭ್ಯರ್ಥಿ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಮತದಾರರ ದಿಕ್ಕು ತಪ್ಪಿಸುವ ಹುನ್ನಾರವೇ ಹೊರತು ಬೇರೆ ಏನು ಇಲ್ಲ ಎಂದು ಅಸ್ನೋಟಿಕರ್ ಹೇಳಿಕಯನ್ನು ಖಂಡಿಸಿದರು.
ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಮತದಾರರ ಆಯ್ಕೆ ಅಂತಿಮ. ಕಳೆದ 5 ಬಾರಿ ಆಯ್ಕೆ ಮಾಡಿದ ಅನಂತಕುಮಾರ ವಿರುದ್ದ ಇವರು ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಕ್ಷೇತ್ರ ಮತದಾರರಿಗೆ ಮಾಡಿದ ಅವಮಾನ. ಅಸ್ನೋಟಿಕರ್ ಒರ್ವ ಪೇಪರ್ ಟೈಗರ್ ಇದ್ದಂತೆ. ಬೇರೆಯವರ ಬಗ್ಗೆ ಪ್ರಶ್ನೆ ಮಾಡುವಾಗ ಆ ವರ್ಗಕ್ಕೆ ತಮ್ಮ ಅಧಿಕಾರ ಅವಧಿಯಲ್ಲಿ ನೀಡಿದ ಕೊಡುಗೆ ಏನು? ಮೀನುಗಾರಿಕಾ ಸಚಿವರಾಗಿದ್ದಾಗ ಆ ಕ್ಷೇತ್ರದ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ. ಬಂದರು ಪ್ರದೇಶದ ಅಭಿವೃದ್ದಿ ಮಾಡುವ ಗೋಜಿಗೆ ಹೋಗಿಲ್ಲ. ಹೂಳೆತ್ತುವ ಕಾರ್ಯವು ಮಾಡಿಲ್ಲ. ಸಚೀವರಾಗಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಮಾಜಿ ಜಿ.ಪಂ. ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಮುಖಂಡರಾದ ಎಂ.ಎಸ್.ಹೆಗಡೆ, ಲೋಕೇಶ ಮೇಸ್ತ್ರ ಉಪಸ್ಥಿತರಿದ್ದರು.
Leave a Comment