ಹೊನ್ನಾವರ : ನಾಲ್ಕು ದಿನಗಳ ಕಾಲ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಹಾಗೂ ಜನತಾ ನ್ಯಾಯಾಲಯದ ಅಭಿಯಾನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿ, ಕಾನೂನಿನ ಅರಿವು ಎಲ್ಲರಿಗೆ ಇರಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಸಮಿತಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿದ್ದು ಜನ ಇದರ ಪ್ರಯೋಜನ ಪಡೆಯಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ. ಭಾಗವತ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಸನ್ಮತಿ ಎಸ್.ಆರ್., ವಕೀಲ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ, ಸಹಾಯಕ ಸರ್ಕಾರಿ ಅಭಿಯೋಜಕ ಬದರಿನಾಥ ನಾಯರಿ, ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಭಟ್ ಮೊದಲಾದವರು ಉಪಸ್ಥಿತರಿದ್ದರು. ಬೆಳಿಗ್ಗೆ ಐಟಿಐ ಕಾಲೇಜು, ಮಧ್ಯಾಹ್ನ ರಿಲಾಯಬಲ್ ಕ್ಯಾಶ್ಯೂ, ಸಂಜೆ ಸೇಂಟ್ ಇಗ್ನೇಷಿಯಸ್ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಗಳು ನಡೆದವು. ದಿನಾಂಕ 9ರಂದು ಬೆಳಿಗ್ಗೆ 10ಗಂಟೆಗೆ ಹಡಿನಬಾಳ ಸರ್ಕಾರಿ ಪ್ರೌಢಶಾಲೆ, 3ಗಂಟೆಗೆ ಕವಲಕ್ಕಿ ಪ.ಪೂ. ಕಾಲೇಜು, ಸಂಜೆ ಖರ್ವಾ ಪ್ರೌಢಶಾಲೆ, ದಿ. 10ಕ್ಕೆ ಬೆಳಿಗ್ಗೆ ಮುಗ್ವಾ ಪಂಚಾಯತ ಸಭಾಭವನ, 3ಕ್ಕೆ ಮರಬಳ್ಳಿ ವೀರವಿಠ್ಠಲ ದೇವಸ್ಥಾನ, ಸಂಜೆ ಮರಬಳ್ಳಿ ಹಿರಿಯ ಪ್ರಾಥಮಿಕ ಶಾಲೆ, ದಿ. 11ರಂದು ಹಳದೀಪುರ ಜೀವನ ಗಾರ್ಮೆಂಟ್ಸ್, 3ಗಂಟೆಗೆ ಸಿರಿ ಬಿಎಸ್.ಡಬ್ಲ್ಯೂ ಕಾಲೇಜು ಅರೇಅಂಗಡಿ, 4ಕ್ಕೆ ಪಟ್ಟಣ ಪಂಚಾಯತ ಹಾಲ್ನಲ್ಲಿ ಕಾರ್ಯಕ್ರಮಗಳು ನಿಗದಿಯಾಗಿವೆ. ಆಯಾ ಸಂಸ್ಥೆಯ ಪ್ರಮುಖರು ಮತ್ತು ನ್ಯಾಯಾಧೀಶರು, ನ್ಯಾಯವಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
Leave a Comment