
ಹೊನ್ನಾವರ ತಾಲೂಕಿನ ಮಂಕಿ ಗುಳದಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಿವೇಕ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದ್ದು ತಕ್ಷಣ ತುರ್ತು ಕುಡಿಯುವ ನೀರಿನ ಸರಬರಾಜು ಮಾಡಬೇಕೆಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಮಂಕಿ ಗ್ರಾಮದ ಚಿತ್ತಾರ ಕ್ರಾಸ್ ಬಳಿಯ ವಿವೇಕ ನಗರದಲ್ಲಿ ಬಾವಿಗಳು ಭತ್ತಿ ಹೋಗಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಈ ಕುರಿತು ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲಾ. ಸುಮಾರು 25 ಕ್ಕೂ ಹೆಚ್ಚು ಕುಟುಂಬಗಳು ನಿತ್ಯ ನೀರಿಗೆ ಪರದಾಡಬೇಕಾಗಿದೆ. ಕಳೆದು ಹಲವು ವರ್ಷಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದರು ಈ ಭಾಗಕ್ಕೆ ನೀರು ಸರಬರಾಜು ಮಾಡಲು ಇವರೆಗೂ ಯಾವುದೇ ಯೋಜನೆ ಮಂಜೂರಾಗಿಲ್ಲಾ.ಪ್ರತಿ ಬೇಸಿಗೆ ಸಂಧರ್ಭದಲ್ಲಿ ಕೆಲವು ದಿನಗಳಕಾಲ ಟ್ಯಾಂಕರ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಕುಡಿಯಲು ಮಾತ್ರ ನೀರು ಓದಗಿಸಲಾಗುತ್ತಿದೆ. ಈ ವರ್ಷ ಇಷ್ಟು ನೀರಿನ ಅಭಾವ ಉಂಟಾಗುತ್ತಿದ್ದರು ಇವರೆಗೂ ನೀರು ಪೊರೈಕೆಯಾಗಿಲ್ಲ. ತಕ್ಷಣ ಕುಡಿಯುವ ನೀರಿನ ಪೊರೈಕೆ ಮಾಡಬೇಕೆಂದು ಗ್ರಾಮ ಪಂಚಾಯತ ಅಧಿಕಾರಿಗಳ ಮುಖಾಂತರ ಲಕ್ಷಣ ನಾಯ್ಕ, ಶಂಕರ ಎಸ್ ನಾಯ್ಕ, ಉಲ್ಲಾಸ ಮೋಹನ ಮಹಾಲೆ, ವಿ ಎಸ್ ಅಯ್ಯಂಗಾರ, ಗಜಾನನ ನಾಯ್ಕ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
Leave a Comment