ಹೊನ್ನಾವರ: ತಾಲೂಕಿನ ಹೆಬೈಲ್ ಬಸ್ಸ್ಟಾಫ್ ಎದುರಿನ ಅರಣ್ಯದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇರ್ವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದಿದೆ.
ತಮ್ಮ-ತಮ್ಮ ಅನ್ಯಾಯದ ಲಾಭಗೋಸ್ಕರ ಎರಡೂ ಕಡೆಗಳಿಂದ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಎಂಬ ಹೆಸರಿನ ಜೂಜಾಟವನ್ನು ಆಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊನ್ನಾವರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು ಮಂಡದಲ್ಲಿ ರೂ.3080 ಹಣ ಹಾಗೂ 2 ಕೋಳಿ ಕತ್ತಿಗಳು, ಒಂದು ಆಟೋ ರಿಕ್ಷಾ, ಎರಡು ಮೋಟಾರ್ ಸೈಕಲ್ ದೊರಕಿದೆ. ದಾಳಿ ಸಂದರ್ಭದಲ್ಲಿ ಮುಗ್ವಾ ನಿವಾಸಿ ಸ್ಟೀಫನ್ ಪ್ರಾನ್ಸಿಸ್ ಮಿರಾಂಡಾ, ಕುಳಕೋಡ ನಿವಾಸಿ ದಿಲೀಪ್ ಪುಂಡಲೀಕ್ ದೇಶಬಂಡಾರಿ ಇರ್ವರು ಆರೋಪಿತರು ಸೆರೆಸಿಕ್ಕಿದ್ದಾರೆ ಎನ್ನಲಾಗಿದೆ. ದುರ್ಗಾಕೇರಿಯ ನಿವಾಸಿ ರವಿ ಪುರಸಯ್ಯ ನಾಯ್ಕ, ಹಳದಿಪುರದ ನಿವಾಸಿ ಗಣಪತಿ ವಿ ನಾಯ್ಕ ಸೇರಿದಂತೆ ಮತ್ತಿತರರು ದಾಳಿ ವೇಳೆ ಪರಾರಿಯಾದ ಆರೋಪಿತರಾಗಿದ್ದಾರೆ. ಪಿ.ಎಸ್.ಐ. ತೇಜಸ್ವಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment