ಹೊನ್ನಾವರ: ಕಾಂಗ್ರೆಸ್ – ಜೆ.ಡಿ.ಎಸ್. ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೋಟಿಕರ್ರವರು ದಿ.12ರಂದು ಹೊನ್ನಾವರದಲ್ಲಿ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಹಳದೀಪುರದ ರಥಬೀದಿಯಲ್ಲಿ, 4ಗಂಟೆಗೆ ಅರೇಅಂಗಡಿಯ ಎಸ್.ಕೆ.ನಾಯ್ಕ ಕಟ್ಟಡದ ಆವರಣದಲ್ಲಿ, ಸಂಜೆ 5ಗಂಟೆಗೆ ಹೊನ್ನಾವರ ಪಟ್ಟಣದ ಕರ್ಕಿ ನಾಕಾ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ಜೆ.ಡಿ.ಎಸ್.ಪಕ್ಷದ ಮುಖಂಡರಾದ ಪ್ರದೀಪ ನಾಯP,À ಸೂರಜ್ ಸೋನಿ ಭಾಗವಹಿಸಲಿದ್ದಾರೆ. ಕಾರಣ ಸಾರ್ವಜನಿಕರು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಮತ್ತು ಜೆ.ಡಿ.ಎಸ್.ತಾಲೂಕಾಧ್ಯಕ್ಷ ಸುಬ್ರಾಯ ಗೌಡ ಜಂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment