ಹಳಿಯಾಳ:- ಪ್ರಸಕ್ತ 5 ವರ್ಷದ ಮೋದಿ ಆಡಳಿತದಲ್ಲಿ ರಾಷ್ಟ್ರದಲ್ಲಿ ದೇಶಭಕ್ತರು-ದೇಶಪ್ರೇಮಿಗಳು ಯಾರು ಹಾಗೂ ದೇಶದ್ರೋಹಿಗಳು ಯಾರು ಎಂಬುದು ಬಹಿರಂಗವಾಗಿದೆ ಅಲ್ಲದೇ ಭ್ರಷ್ಟಾಚಾರಿಗಳು ತಾವಾಗೇ ರಸ್ತೆಯ ಮೇಲೆ ಬಂದು ನಿಂತಿದ್ದು ಕುಂಬಳ ಕಾಯಿ ಕಳ್ಳರು ತಾವೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ತಾಲೂಕಿನ ತೇರಗಾಂವ, ಕಾವಲವಾಡ ಹಾಗೂ ಭಾಗವತಿ ಗ್ರಾಮಗಳಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಸಭೆಯಲ್ಲಿ ಮಾತನಾಡಿದ ಅವರು ಜನರನ್ನು ನಾವು 2 ಕಣ್ಣಾಗಿ ನೋಡಿದರೇ ಜನರು ನಮ್ಮನ್ನ ಸಾವಿರು ಕಣ್ಣಾಗಿ ತೂಕ ಮಾಡುತ್ತಾರೆ ಈಗ ಅವರ ಇಚ್ಚೆಯಂತೆಯೇ ಮೋದಿಜಿ ಇನ್ನೊಮ್ಮೆ ಪ್ರಧಾನಿ ಆಗಲಿದ್ದಾರೆಂದು ಭವಿಷ್ಯ ನುಡಿದರು.
ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಟ್ಟಿರುವ ಮೋದಿಜಿ ಅವರು ಇನ್ನೊಮ್ಮೆ ಪ್ರಧಾನಿ ಆದರೇ 2020ರ ನಂತರ ಭಾರತ ದೇಶ ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುವ ಶಕ್ತಿ ಹೊಂದಲಿದೆ ಎಂದು ಐಎಮ್ಎಫ್ ಅಂತರಾಷ್ಟ್ರೀಯ ಸಂಸ್ಥೆ ಹೇಳಿದೆ. ದೇಶದ ಗ್ರಾಮಾಂತರ ಭಾಗದ ಅಭಿವೃದ್ದಿಗೆ ಕೇಂದ್ರ ಸರ್ಕಾರ 70ಸಾವಿರ ಕೋಟಿ ಅನುದಾನವನ್ನು ಮುಂದಿನ ದಿನಗಳಲ್ಲಿ ದುಪ್ಪಟ್ಟು ಮಾಡುವ ಭರವಸೆ ನೀಡಿದ್ದು ಅಭಿವೃದ್ದಿಯೊಂದೆ ಬಿಜೆಪಿ ಮಂತ್ರ ಎಂದರು.
ಈ ಬಾರಿಯ ಚುನಾವಣೆಯಲ್ಲಿ ನಮಗಿಂತ ಜನ ಮುಂದಿದ್ದಾರೆ. ಕೆನರಾ ಕ್ಷೇತ್ರದಲ್ಲಿ 100 ಕೆಜಿ ಪೈಲ್ವಾನನ ಮುಂದೆ 25 ಕೆಜಿ ಪೈಲ್ವಾನ್ ಕುಸ್ತಿಗೆ ನಿಂತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸೋಲಿನ ಭಿತಿಯಿಂದ ಅಮೂಲ್ ಬೆಬಿ ರಾಹುಲ್ ಕೆರಳದ ವೈನಾಡುವಿನಲ್ಲೂ ಸ್ಪರ್ದಿಸುತ್ತಿದ್ದಾರೆ ಎಂದ ಅನಂತಕುಮಾರ ಇದು ದೇಶದ ಮಹಾಚುನಾವಣೆಯಾಗಿದ್ದು ಪ್ರೀತಿ ವಿಶ್ವಾಸದಿಂದ ದೇಶ ಕಟ್ಟೊ ಕಾಯಕ ಮಾಡೊರಿಗೆ ಮತ ನೀಡಿ ಹೊರತು ಭ್ರಷ್ಟಾಚಾರಿಗಳು, ಕುಟುಂಬ ರಾಜಕಾರಣ ಮಾಡೋರಿಗಲ್ಲ ಎಂದು ಕರೆ ನೀಡಿದರು.
ಕೇಂದ್ರದಲ್ಲಿ ಇನ್ನೊಮ್ಮೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ಭ್ರಷ್ಟಾಚಾರಿಗಳ ಪರಿಸ್ಥಿತಿ ಕೆಡಲಿದೆ. ದೇಶದ ಹಣ ಲೂಟಿಯಾಗಲು ಬಿಡುವುದಿಲ್ಲ. ನಮ್ಮದು ಭಾಷಣ ಮಾಡುವ ಸರ್ಕಾರವಲ್ಲ ಬದಲಾಗಿ ಕೆಲಸ ಮಾಡೊ ಸ್ಪಷ್ಟ ಸರ್ಕಾರ ಎಂದ ಹೆಗಡೆ ಪ್ರಜ್ಞಾವಂತ ಜನರೂ ಮತ್ತೊಮ್ಮೆ ಮೋದಿಜಿಯವರ ಕೈ ಬಲ ಪಡಿಸಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ವಿಚಿತ್ರ ಸನ್ನಿವೇಶದಲ್ಲಿ ಚುನಾವನೆ ನಡೆಯುತ್ತಿದೆ. ಕಾಂಗ್ರೇಸ್-ಜೆಡಿಎಸ್ ಮುಖಂಡರುಗಳಿಗೆ ಮಾತ್ರ ಮೈತ್ರಿ ಅನಿವಾರ್ಯವಾಗಿದ್ದು ಜನರಿಗೆ-ಮತದಾರರಿಗೆ ಮೈತ್ರಿಯ ಅವಶ್ಯಕತೆ ಇಲ್ಲ ಎಂದ ಅವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಸ್ವತಃ ಸಮಾಜದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅವರದೇ ಸಮಾಜದ ಜಿಲ್ಲಾಧ್ಯಕ್ಷ ಜಿವೋಜಿ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಅಲ್ಲದೇ ಈಗಾಗಲೇ ಲೋಕಾಯುಕ್ತದಲ್ಲೂ ಪ್ರಕರಣ ದಾಖಲಾಗಿದೆ ಆದರೇ ಘೊಟ್ನೇಕರ ಅವರು ಬೆರೆ ಅವರ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡುವುದರಲ್ಲಿ ನಿಸ್ಸಿಮರಾಗಿರುವುದು ದುರಾದೃಷ್ಟ ಎಂದರು.
ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಮರಾಠಿಗರಿಗೆ ಮೀಸಲಾತಿ ದೊರಕಿಸಿ ಕೊಡುವುದಾಗಿ ಹೇಳುವ ಇವರುಗಳು ಅವರದೇ ಸರ್ಕಾರ ಕಳೆದ 6 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಮರಾಠರಿಗೆ ಮೀಸಲಾತಿ ನೀಡಲು ಸಾಧ್ಯವಾಗದ ಇವರುಗಳು ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಾರೆಂದು ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಘೋಟ್ನೇಕರ ವಿರುದ್ದ ಆರೋಪಗಳ ಸುರಿಮಳೆಗೈದರು.
ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ ಮೈತ್ರಿ ಪಕ್ಷಗಳ ಸರ್ಕಾರ ಭ್ರಷ್ಟರ ಕೂಟವಾಗಿದೆ. ವಿಪಕ್ಷಗಳು ರಾಜ್ಯ-ದೇಶದ ಅಭಿವೃದ್ದಿಯ ಚಿಂತೆ ಮಾಡದೇ ಕುಟುಂಬ ರಾಜಕಾರಣ ಮಾಡುತ್ತಾ ಸ್ವಾರ್ಥ ಸಾಧನೆಗೆ ಘಟಬಂದನ ಮಾಡಿ ಚುನಾವಣೆ ಆಡುತ್ತಿದ್ದು ಮತದಾರ ತಕ್ಕ ಪಾಠ ಕಲಿಸಲಿದ್ದಾನೆಂದರು.
ಮುಖಂಡರಾದ ಶೀವಾಜಿ ನರಸಾನಿ, ಗೋಪಾಲ ಧೂಳಿ, ರಾಮಚಂದ್ರ ಮಿರಾಶಿ, ಈರಣ್ಣಾ ನಾವಲಗಿ, ಶಂಕರ ಗಳಗಿ, ಕಿರಪ್ಪಾ ರಗಟೆ, ಶಂಕರ ಕಾಜಗಾರ ಮೊದಲಾದವರು ಇದ್ದರು.
Leave a Comment