• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ ಪುರಸಭೆ ಸಿಬ್ಬಂದಿ ಮುಖ ಪ್ರಾಣಿಯನ್ನು ಹೊಡೆದು ಕೊಂದರು.

April 14, 2019 by Yogaraj SK Leave a Comment

 

ಹಳಿಯಾಳ:- ಹಳಿಯಾಳ ಪುರಸಭೆಯ ಸದಸ್ಯರೊರ್ವರ ಮಾತಿಗೆ ಪುರಸಭೆಯ ಸಿಬ್ಬಂದಿಗಳು ಮುಗ್ದ ತಾಯಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಅಮಾನವೀಯ ಹೃದಯವಿದ್ರಾವಕ ಘಟನೆ ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆಯಲ್ಲಿ ನಡೆದಿದೆ.
ಜನÀರು ಹಾಕಿದ್ದ ಅನ್ನ ಇತ್ಯಾದಿ ಆಹಾರ ತಿನ್ನುತ್ತ ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ ಕಳೆದ ಕೆಲ ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ 2 ಮರಿಗಳು ಸರಿಯಾದ ಆಹಾರವಿಲ್ಲದೇ ಸತ್ತು ಹೊಗಿದ್ದವು. ಇನ್ನೂ ಒಂದು ಮರಿಯೊಂದಿಗೆ ಇದ್ದ ಈ ತಾಯಿ ನಾಯಿ ಜನರಿಗೆ ಉಪಟಳ ನೀಡುತ್ತಿದೆ ಎಂದು ಆಪಾದಿಸಿದ ಪುರ ಸದಸ್ಯ ಹಳಿಯಾಳ ಪುರಸಭೆಯ ಸಿಬ್ಬಂದಿಗಳಿಗೆ ಅದನ್ನು ಕೊಲ್ಲುವಂತೆ ಸೂಚಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪುರಸಭೆಯ ವಾಹನ ಚಾಲಕರು ಪುರಸಭೆಯ ಗಾರ್ಡನ್ ಗೇಟ್‍ಗೆ ಸರಪಳಿಯಿಂದ ಕಟ್ಟಿ ಹಾಕಿದ್ದ ನಾಯಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿದ್ದಾರೆ.
ರಾಕ್ಷಸರಂತೆ ದೊಣ್ಣೆ ಹಾಗೂ ಕಲ್ಲಿನಿಂದ ನಾಯಿಗೆ ಮನ ಬಂದಂತೆ ಹೊಡೆದು ಸಾಯಿಸಿದ್ದು. ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪುರಸಭೆಯ ಈ ಅಮಾನವೀಯ ಕೃತ್ಯಕ್ಕೆ ಇದೆ ಭಾಗದ ನಿವಾಸಿ ಆಟೋ ಚಾಲಕ ಬಸವರಾಜ ತೀವೃ ಆಕ್ರೋಶ ವ್ತಕ್ತಪಡಿಸಿದ ಮಾಧ್ಯಮದವರನ್ನು ಸ್ಥಳಕ್ಕೆ ಕರೆಯಿಸಿ ನಡೆದ ಘಟನೆಯ ಬಗ್ಗೆ ತಿಳಿಸಿ ಪುರಸಭೆಗೆ ಹಿಡಿ ಶಾಪ ಹಾಕಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ವಕೀಲರಾದ ಮಂಜುನಾಥ ಮಾದರ, ಪುರಸಭೆ ಮಾಜಿ ಉಪಾಧ್ಯಕ್ಷ ಸಂತಾನ ಸಾವಂತ, ಪ್ರಾಣಿಪ್ರಿಯ ಸಿದ್ದು ಶೆಟ್ಟಿ ಇತರರು ಒಂದಾನುವೇಳೆ ನಾಯಿ ತೊಂದರೆ ಕೊಡುತ್ತಿದ್ದರೇ ಹಿಡಿದು ಅದನ್ನು ದೂರಕ್ಕೆ ಹೋಗಿ ಬಿಡಬಹುದಿತ್ತು ಆದರೇ ಈ ರೀತಿ ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸಿ ತಾಯಿ ನಾಯಿಯನ್ನು ಹೊಡಿದು ಕೊಂದಿರುವುದು ಸರಿಯಾದ ಕ್ರಮವಲ್ಲ. ಇದನ್ನು ತೀವೃವಾಗಿ ಖಂಡಿಸುವುದಾಗಿ ಅವರು ಹೇಳಿದರು.
ಏನೆ ಆಗಲಿ ಮುಗ್ದ ತಾಯಿ ನಾಯಿಯನ್ನು ಹಿಡಿದು ದೂರಕ್ಕೆ ಹೊಗಿ ಬಿಟ್ಟು ಬರಬಹುದಿತ್ತು ಆದರೇ ಗಲ್ಲಿಯಲ್ಲಿ ಚಿಕ್ಕ ಮಕ್ಕಳ ಹಾಗೂ ಜನರ ಎದುರುಗಡೆಯೇ ಕಲ್ಲು-ದೊಣ್ಣೆಯಿಂದ ಹೊಡೆದು ಸಾಯಿಸಿ ರಾಕ್ಷಸಿ ಪ್ರವೃತ್ತಿ ತೊರಿಸಿರುವುದು ತೀರಾ ಅಮಾನುಷ ಘಟನೆಯಾಗಿದ್ದು ಪುರಸಭೆಯ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವೃ ಟಿಕೆಗಳು ಕೇಳಿ ಬರುತ್ತಿವೆ.

TAYI nayi konda, pursabhe sibandigalu

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: a dog for the people, a dog to a dog, a garden gate, a member of a petition, auto driver, Basavaraja screaming, behaved like beasts, chained by a chain, dining dogs, eating dishes, face animals, heart attack, killed human beings, Murdered municipal personnel, pursabhe sibandigalu, stoning like a monster, TAYI nayi konda, town's Chawan shelter, ಅನ್ನ ಇತ್ಯಾದಿ ಆಹಾರ ತಿನ್ನುತ್ತ, ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ, ಆಟೋ ಚಾಲಕ, ಆಪಾದಿಸಿದ ಪುರ ಸದಸ್ಯ, ಕಲ್ಲಿನಿಂದ ನಾಯಿಗೆ ಮನ, ಗಾರ್ಡನ್ ಗೇಟ್‍ಗೆ, ನಾಯಿ ಜನರಿಗೆ ಉಪಟಳ, ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆ, ಪುರಸಭೆ ಸಿಬ್ಬಂದಿ, ಬಸವರಾಜ ತೀವೃ ಆಕ್ರೋಶ, ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ, ಮುಖ ಪ್ರಾಣಿಯನ್ನು, ಮುಗ್ದ ತಾಯಿ ನಾಯಿ, ರಾಕ್ಷಸರಂತೆ ದೊಣ್ಣೆ, ಸರಪಳಿಯಿಂದ ಕಟ್ಟಿ, ಹೃದಯವಿದ್ರಾವಕ ಘಟನೆ, ಹೊಡೆದು ಕೊಂದರು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...