ಹಳಿಯಾಳ:- ಹಳಿಯಾಳ ಪುರಸಭೆಯ ಸದಸ್ಯರೊರ್ವರ ಮಾತಿಗೆ ಪುರಸಭೆಯ ಸಿಬ್ಬಂದಿಗಳು ಮುಗ್ದ ತಾಯಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಅಮಾನವೀಯ ಹೃದಯವಿದ್ರಾವಕ ಘಟನೆ ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆಯಲ್ಲಿ ನಡೆದಿದೆ.
ಜನÀರು ಹಾಕಿದ್ದ ಅನ್ನ ಇತ್ಯಾದಿ ಆಹಾರ ತಿನ್ನುತ್ತ ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ ಕಳೆದ ಕೆಲ ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ 2 ಮರಿಗಳು ಸರಿಯಾದ ಆಹಾರವಿಲ್ಲದೇ ಸತ್ತು ಹೊಗಿದ್ದವು. ಇನ್ನೂ ಒಂದು ಮರಿಯೊಂದಿಗೆ ಇದ್ದ ಈ ತಾಯಿ ನಾಯಿ ಜನರಿಗೆ ಉಪಟಳ ನೀಡುತ್ತಿದೆ ಎಂದು ಆಪಾದಿಸಿದ ಪುರ ಸದಸ್ಯ ಹಳಿಯಾಳ ಪುರಸಭೆಯ ಸಿಬ್ಬಂದಿಗಳಿಗೆ ಅದನ್ನು ಕೊಲ್ಲುವಂತೆ ಸೂಚಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪುರಸಭೆಯ ವಾಹನ ಚಾಲಕರು ಪುರಸಭೆಯ ಗಾರ್ಡನ್ ಗೇಟ್ಗೆ ಸರಪಳಿಯಿಂದ ಕಟ್ಟಿ ಹಾಕಿದ್ದ ನಾಯಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿದ್ದಾರೆ.
ರಾಕ್ಷಸರಂತೆ ದೊಣ್ಣೆ ಹಾಗೂ ಕಲ್ಲಿನಿಂದ ನಾಯಿಗೆ ಮನ ಬಂದಂತೆ ಹೊಡೆದು ಸಾಯಿಸಿದ್ದು. ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪುರಸಭೆಯ ಈ ಅಮಾನವೀಯ ಕೃತ್ಯಕ್ಕೆ ಇದೆ ಭಾಗದ ನಿವಾಸಿ ಆಟೋ ಚಾಲಕ ಬಸವರಾಜ ತೀವೃ ಆಕ್ರೋಶ ವ್ತಕ್ತಪಡಿಸಿದ ಮಾಧ್ಯಮದವರನ್ನು ಸ್ಥಳಕ್ಕೆ ಕರೆಯಿಸಿ ನಡೆದ ಘಟನೆಯ ಬಗ್ಗೆ ತಿಳಿಸಿ ಪುರಸಭೆಗೆ ಹಿಡಿ ಶಾಪ ಹಾಕಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ವಕೀಲರಾದ ಮಂಜುನಾಥ ಮಾದರ, ಪುರಸಭೆ ಮಾಜಿ ಉಪಾಧ್ಯಕ್ಷ ಸಂತಾನ ಸಾವಂತ, ಪ್ರಾಣಿಪ್ರಿಯ ಸಿದ್ದು ಶೆಟ್ಟಿ ಇತರರು ಒಂದಾನುವೇಳೆ ನಾಯಿ ತೊಂದರೆ ಕೊಡುತ್ತಿದ್ದರೇ ಹಿಡಿದು ಅದನ್ನು ದೂರಕ್ಕೆ ಹೋಗಿ ಬಿಡಬಹುದಿತ್ತು ಆದರೇ ಈ ರೀತಿ ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸಿ ತಾಯಿ ನಾಯಿಯನ್ನು ಹೊಡಿದು ಕೊಂದಿರುವುದು ಸರಿಯಾದ ಕ್ರಮವಲ್ಲ. ಇದನ್ನು ತೀವೃವಾಗಿ ಖಂಡಿಸುವುದಾಗಿ ಅವರು ಹೇಳಿದರು.
ಏನೆ ಆಗಲಿ ಮುಗ್ದ ತಾಯಿ ನಾಯಿಯನ್ನು ಹಿಡಿದು ದೂರಕ್ಕೆ ಹೊಗಿ ಬಿಟ್ಟು ಬರಬಹುದಿತ್ತು ಆದರೇ ಗಲ್ಲಿಯಲ್ಲಿ ಚಿಕ್ಕ ಮಕ್ಕಳ ಹಾಗೂ ಜನರ ಎದುರುಗಡೆಯೇ ಕಲ್ಲು-ದೊಣ್ಣೆಯಿಂದ ಹೊಡೆದು ಸಾಯಿಸಿ ರಾಕ್ಷಸಿ ಪ್ರವೃತ್ತಿ ತೊರಿಸಿರುವುದು ತೀರಾ ಅಮಾನುಷ ಘಟನೆಯಾಗಿದ್ದು ಪುರಸಭೆಯ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವೃ ಟಿಕೆಗಳು ಕೇಳಿ ಬರುತ್ತಿವೆ.
Leave a Comment