ಹೊನ್ನಾವರ : ಮೋದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ದೇಶದ 2ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಅನ್ನುವ ಆಶ್ವಾಸನೆ ನೀಡಿ ಅಧಿಕಾರಕೆ ಬಂದಿದ್ದರು . ಆದರೆ ಅಧಿಕಾರಕ್ಕೆ ಬಂದು ಐದು ವರ್ಷ ಕಳೆದರೂ ಕೇವಲ ಒಂದು ಲಕ್ಷ ಉದ್ಯೋಗ ಸ್ಶಷ್ಟಿಸಲು ವಿಫಲರಾದ ಮೋದಿ ಸುಳ್ಳಿನ ಸರದಾರ ಎಂದು ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ಕಾಂಗ್ರೆಸ-ಜೆ.ಡಿ.ಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಿಸಿದರು.
ಅವರು ಹೊನ್ನಾವರ ತಾಲೂಕಿನ ಅರೇಅಂಗಡಿ, ಹಳದೀಪುರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಹೊನ್ನಾವರ ಬ್ಲಾಕ ಕಾಂಗ್ರೆಸ ಮತ್ತು ಜೆ.ಡಿ.ಎಸ್. ಜಂಟಿಯಾಗಿ ಏರ್ಪಡಿಸಿದ ಸಾರ್ವಜನಿಕ ಸಭೆಯನ್ನು ಮುಗಿಸಿ, ಹೊನ್ನಾವರ ಕರ್ಕಿ ನಾಕಾ ಬಳಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂಸದ ಅನಂತ ಕುಮಾರ ಹೆಗಡೆ ಕಳಾಹೀನ ಮಂತ್ರಿಯಾಗಿದ್ದೂ, ತನ್ನ ಕಾಲಾವಧಿಯಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೇ ಕೆನರಾ ಕ್ಷೇತ್ರವನ್ನು 25 ವರ್ಷ ಹಿಂದಕ್ಕೆ ತಳ್ಳಿದ್ದಾರೆ ಎಂದರು. ಕೇವಲ ಹಿಂದುಳಿದ ವರ್ಗದ ಯುವಕರನ್ನು ಸಮಾಜ ವಿರೋಧಿ ಕೆಲಸಕ್ಕೆ ಪ್ರಚೋದಿಸಿ, ಇಂದು ನೂರಾರು ಯುವಕರು ಕೋರ್ಟ, ಕಛೇರಿ ಅಲೆಯುತ್ತಿದ್ದರೆ. ಅದು ಅನಂತ ಕುಮಾರ ಹೆಗಡೆಯ ಸಾಧನೆ ಎಂದರು. ಇನ್ನಾದರೂ ಉತ್ತರ ಕನ್ನಡ ಜಿಲ್ಲೆಯ ಮತದಾರರು ಅಭಿವೃದ್ದಿಯ ದೃಷ್ಟಿಯಿಂದ ಅನಂತ ಕುಮಾರ ಹೆಗಡೆಯನ್ನು ಸೋಲಿಸಿ ನನ್ನನ್ನು ಗೆಲ್ಲಿಸಿದರೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಹಗಲು ರಾತ್ರಿ ಹೋರಾಡುವುದಾಗಿ ನೆರೆದ ಸಾರ್ವಜನಿಕರಿಗೆ ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಪಿ.ಸಿ.ಸಿ.ಯಿಂದ ನಿಯೋಚಿಸಲ್ಲಟ್ಟ ವೀಕ್ಷಕರಾದ ಯು.ಆರ್.ಸಭಾಪತಿ ಮಾತಾನಾಡಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಬಿ.ಜೆ.ಪಿ.ಯವರ ಮನೆ ಆಸ್ತಿಯಂತೆ ವರ್ತಿಸುತ್ತಿದ್ದಾರೆ. ನೂರಾರು ವರ್ಷಗಳ ಭವ್ಯ ಇತಿಹಾಸವಿದ್ದು, ಸ್ವಾತಂತ್ರ ಸಂಗ್ರಾಮದ ಮೂಲಕ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕಾಂಗ್ರೆಸ ಪಕ್ಷವನ್ನು ದೇಶದ್ರೋಹಿಗಳು ಎಂದು ಕರೆಯುತ್ತಿರುವ ಬಿ.ಜೆ.ಪಿ. ಮುಖಂಡರ ವರ್ತನೆಯನ್ನು ಸಭಾಪತಿ ಖಂಡಿಸಿದರು.
ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮಾತನಾಡಿ ಸಂಸದ ಅನಂತ ಕುಮಾರ ಹೆಗಡೆಯ ನಾಲಿಗೆ ಅವರ ಅಂತರಂಗವನ್ನು ಸಾರುತ್ತದೆ. ಸುಳ್ಳು ಹೇಳುವುದೇ ಅವರ ಬಂಡವಾಳ ಎಂದರು. ಹೊನ್ನಾವರದಲ್ಲಿ ಸಾವಿಗಿಡಾದ ಪರೇಶ ಮೇಸ್ತನಿಗೆ ಒಂದು ವಾರದಲ್ಲಿ ಹನಿಹನಿ ರಕ್ತಕ್ಕೂ ನ್ಯಾಯ ಕೂಡಿಸುತ್ತೇನೆ ಎಂದವರು ಈಗ ವರ್ಷ ಕಳೆದರೂ ನ್ಯಾಯದ ಬಗ್ಗೆ ಮಾತೇ ಇಲ್ಲಾ. ನನ್ನ ಕಾಲಾವಧಿಯಲ್ಲಿ ನಾನು ಕ್ಷೇತ್ರಕ್ಕೆ ಮಾಡಿದ ಅಭಿವೃಧ್ದಿಯ ಶೇ10ನ್ನ ಕೂಡ ಅನಂತ ಕುಮಾರ ಮಾಡಿಲ್ಲಾ ಎಂದರು.
ಜನತಾದಳದ ಮುಖಂಡ ಸೂರಜ್ ಸೋನಿ ಮಾತಾನಾಡಿ, ಅನಂತ ಕುಮಾರ ಹೆಗಡೆ ಹತ್ತಾರು ವರ್ಷಗಳ ಕಾಲ ನಮ್ಮನ್ನು ಉಪಯೋಗಿಸಿಕೊಂಡು ಕೊನೆಗೆ ನಮ್ಮನ್ನೆಲ್ಲಾ ಜೈಲಿಗೆ ಅಟ್ಟಿಸಿ ಖುಷಿ ಪÀಟ್ಟಂತಹ ಅನಂತ ಕುಮಾರ ಹೆಗಡೆ ವಿಶ್ಯಾಸ ದ್ರೋಹಿ ಎಂದರು. ಯುವಕರು ಇಂತವರ ಬಣ್ಣ ಬಣ್ಣದ ಮಾತುಗಳಿಗೆ ಮರಳಾಗದಂತೆ ಎಚ್ಚರದಿಂದಿರಲು ಕರೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ಯಾರಿಗೂ ಗೌರವ ನೀಡದೇ, ಸರ್ವಾಧಿಕಾರಿಯಂತೇ ವರ್ತಿಸುವ ಅನಂತ ಕುಮಾರ ಹೆಗಡೆಯವರನ್ನು ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದರು .
ಸಭೆಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ,ಜೆ.ಡಿ.ಎಸ್. ಜಿಲ್ಲಾ ಅಧ್ಯಕ್ಷ ಬಿ.ಆರ್.ನಾಯ್ಕ,ಕೆ.ಪಿ.ಸಿ.ಸಿ ವೀಕ್ಷಕಿ ಸುನೀತಾ ಹುರಕಡ್ಲಿ, ಕುಮಟಾ ಬ್ಲಾಕ್ ಅಧ್ಯಕ್ಷ ವಿ.ಎಲ್.ನಾಯ್ಕ, ವಾಮನ ನಾಯ್ಕ, ಗಜು ಅಳ್ವೇಕೋಡಿ, ಜೆ.ಡಿ.ಎಸ್. ತಾಲೂಕಾಧ್ಯಕ್ಷ ಸುಬ್ರಾಯ ಗೌಡ, ಯುವ ಮುಖಂಡ ರವಿಕುಮಾರ ಶೆಟ್ಟಿ, ವಿನಾಯಕ ಶೇಟ, ದಾಮೋದರ ನಾಯ್ಕ, ಗೋವಿಂದ ಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ.ಎಸ್. ಮುಖಂಡ ಕೃಷ್ಣ ಗೌಡ,ಹಳಗೇರಿ ವಂದಿಸಿದರು.
Leave a Comment