ಹಳಿಯಾಳ:- ಶ್ರೀರಾಮನಿಗೂ ಮೊಸ ಮಾಡಿದ, ದೇವರಿಗೂ ಬಿಡದ- ಬಾಯಿ ಬಡಾಯಿ ಪಕ್ಷ ಬಿಜೆಪಿಗೆ ಈ ಬಾರಿ ತೀವೃ ಹಿನ್ನಡೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.
ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಆನಂದ ಅಸ್ನೋಟಿಕರ ಪರವಾಗಿ ನಡೆದ ಬಹಿರಂಗ ಮತಯಾಚನೆ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿಯವರು ಅಚ್ಚೇ ದಿನ್ ಬರುತ್ತದೆ ಎಂದಿದ್ದರು ಎಲ್ಲಿವೇ ಆ ಅಚ್ಚೇ ದಿನ್ ?, 15 ಲಕ್ಷ ಬಂತಾ ? ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದೆ, ಕೈಗಾರಿಕೆಗಳು ಮುಚ್ಚಿ ಹೊಗಿವೆ ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎಂದು ತೀವೃ ಟೀಕಾ ಪ್ರಹಾರ ನಡೆಸಿದ ಅವರು ನಮಗೆ ಮನ್ಕಿ ಬಾತ್ ಬೇಡಾ ವಾಂಗಿ ಬಾತ್ ಕೊಡಿ ಎಂದು ಲೇವಡಿ ಮಾಡಿದರು.
ಗುಜರಾತ್ನ ಸಚಿವ ವಿಜಯಸಿಂಗ್ ಎನ್ನುವವರು ರಾಹುಲ್ ಗಾಂಧಿಯನ್ನು ನಾಯಿಮರಿ ಎಂದು ಕರೆದಿದ್ದು ಅದನ್ನು ಖಂಡಿಸುವುದಾಗಿ ಹೇಳಿದ ಘೋಟ್ನೇಕರ ವಿಜಯಸಿಂಗ್ ಒಬ್ಬ ಹಂದಿ ಎಂದು ಜರಿದರು.
25 ವರ್ಷಗಳಿಂದ ಅನಂತಕುಮಾರ ಹೆಗಡೆ ಸತತವಾಗಿ ಸಂಸದರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ?, ಕೇವಲ ಧರ್ಮಾಧಾರಿತ ರಾಜಕಾರಣ ಮಾಡುವ ಹೆಗಡೆ ಸಂವಿಧಾನ ಹಾಗೂ ಇತಿಹಾಸವನ್ನು ಬದಲಿಸುವ ಮಾತನ್ನಾಡುತ್ತಾರೆ ಹೀಗಾಗಿ ಈ ಬಾರಿ ಜನತೆ ಅವರನ್ನು ಮನೆಗೆ ಕಳಿಸಲಿದ್ದು ಅನಂತ ಹಠಾವೋ ಘೋಷಣೆ ಈಗಾಗಲೇ ಎಲ್ಲರ ಬಾಯಲ್ಲಿದ್ದು ಅನಂತಗೆ ಈ ಬಾರಿ ಪಕ್ಕಾ ವಿಶ್ರಾಂತಿ ದೊರೆಯಲಿದ್ದು ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಗೆಲುವು ಸಾಧಿಸಿ ಸಂಸತ್ತ ಪ್ರವೇಶಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಎಸ್.ಎ.ಶೆಟವಣ್ಣವರ ಮಾತನಾಡಿ ಸೋಲುವ ಭಿತಿಯಲ್ಲಿರುವ ವಿರೋಧ ಪಕ್ಷದವರು ಶನಿವಾರ ಕುತಂತ್ರದಿಂದ ನಮ್ಮ ಮನೆಗೆ ಚುನಾವಣಾಧಿಕಾರಿಗಳು ದಾಳಿ ಮಾಡುವಂತೆ ಮಾಡಿದ್ದು ಇಂತಹ ಹೇಡಿ ರಾಜಕಾರಣಕ್ಕೆ ನಾವು ಹೆದರುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಅವರಿಗೆ ಕಲಿಸಲಿದ್ದೇವೆ ಎಂದು ಆಕ್ರೋಶದಿಂದ ಹೇಳಿದರಲ್ಲದೇ ತೀವೃ ಟೀಕಾ ಪ್ರಹಾರ ನಡೆಸಿದರು.
ಎಪಿಎಮ್ಸಿ ಅಧ್ಯಕ್ಷ ಹಾಗೂ ಯುವ ಕಾಂಗ್ರೇಸ್ ಮುಖಂಡ ಶ್ರೀನಿವಾಸ ಘೋಟ್ನೇಕರ, ಉಮೇಶ ಬೋಳಶೆಟ್ಟಿ ಮಾತನಾಡಿದರು. ಪ್ರಮುಖರಾದ ಸತ್ಯಜೀತ ಗಿರಿ, ಸುರೇಶ ವಗ್ರಾಯಿ, ಅಜರ ಬಸರಿಕಟ್ಟಿ, ಯಲ್ಲಪ್ಪಾ ಸಾಂಬ್ರೇಕರ, ಎಲ್.ಎಸ್.ಅರಿಶೀನಗೆರಿ, ರೋಹನ ಬ್ರಗಾಂಜಾ, ಅನಿಲ ಚವ್ವಾಣ ಮೊದಲಾದವರು ಇದ್ದರು.
Leave a Comment