ಹಳಿಯಾಳ:- ಲೋಕಸಭಾ ಚುನಾವಣೆ ಹಿನ್ನೆಲೆ ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಜನತೆ ನಿರ್ಭೀತಿಯಿಂದ ಮತಚಾಲಾಯಿಸಲು ಆತ್ಮಸ್ಥೈರ್ಯ ತುಂಬಲು ಹಳಿಯಾಳದ ಪಟ್ಟಣದಲ್ಲಿ ಭಾನುವಾರ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ ಸೈನಿಕರು ಹಾಗೂ ಪೋಲಿಸ್ ಇಲಾಖೆಯಿಂದ ಜಂಟಿ ಪಥ ಸಂಚಲನ ನಡೆಯಿತು.
ಪಟ್ಟಣದ ಶಿವಾಜಿ ವೃತ್ತದಿಂದ ಆರಂಭವಾದ ಪೋಲಿಸ್ ಪರೇಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಧೈರ್ಯ ತುಂಬಿ ಶಾಂತಿಯುತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಪ್ರೋತ್ಸಾಹಿಸಲಾಯಿತು. ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ(ಐಟಿಬಿಎಫ್)ನ ಒಂದು ಕಂಪೆನಿ ಅಂದರೇ 70 ಜನ ಸೈನಿಕರು, ಹಳಿಯಾಳದ ಗೃಹ ರಕ್ಷಕ ದಳ, ಪೋಲಿಸ್ ಸಿಬ್ಬಂದಿ ಅಧಿಕಾರಿ ಸೇರಿದಂತೆ 370ಜನ ಚುನಾವಣಾ ಕರ್ತವ್ಯದ ಬಂದೋಬಸ್ತ ನಿರ್ವಹಿಸಲಿದ್ದಾರೆ.
ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಡಿವೈಎಸ್ಪಿ ಮೋಹನಪ್ರಸಾತ್, ಸಿಪಿಐಗಳಾದ ಅನಿಸ ಮುಜಾವರ, ಲೋಕಾಪುರ, ಪಿಎಸ್ಐ ಆನಂದಮೂರ್ತಿ ಸೇರಿದಂತೆ ಮೊದಲಾದ ಅಧಿಕಾರಿಗಳು ಇದ್ದರು.
Leave a Comment