ಹಳಿಯಾಳ:- ಗೆಲುವು ಸೋಲು ಮತದಾರರ ಕೈಯಲ್ಲಿದೆ. ಮತದಾರರ ನಿರ್ಣಯಕ್ಕೆ ನಾವು ತಲೆಬಾಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರ ಪಡೆ ಇದೆ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈಕಮಾಂಡಗೆ ಒತ್ತಡ ಹೇರಲಾಗಿತ್ತು ಆದರೂ ಕೊನೆ ಗಳಿಗೆಯಲ್ಲಿ ಜೆಡಿಎಸ್ ಪಕ್ಷದಿಂದ ಆನಂದ ಅಸ್ನೋಟಿಕರಗೆ ಟಿಕೆಟ್ ನೀಡಿದ್ದರಿಂದ ಕಾಂಗ್ರೇಸ್ ಕಾರ್ಯಕರ್ತರು, ಮುಖಂಡರು ಮುನಿಸಿಕೊಂಡಿದ್ದು ನಿಜ ಆದರೇ ಬಳಿಕ ತಾವು ಹಾಗೂ ಪಕ್ಷದ ಹಿರಿಯರು ನಡೆಸಿದ ಹಲವು ಸಭೆಗಳ ಬಳಿಕ ಎಲ್ಲರೂ ಮೈತ್ರಿ ಧರ್ಮ ಪಾಲಿಸಿದ್ದಾರೆ. ಶಿಸ್ತಿನ ಸಿಪಾಯಿಗಳಾಗಿ ಅಸ್ನೋಟಿಕರ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದರು.
ತಾವು ಕೂಡ ಕ್ಷೇತ್ರಾದ್ಯಂತ ಸಂಚರಿಸಿ ಆನಂದ ಪರವಾಗಿ ಮತಯಾಚನೆ ಮಾಡಿದ್ದು ಸೋಲು ಗೆಲುವು ಮತದಾರರ ಕೈಯಲ್ಲಿ ಇರುತ್ತದೆ. ಮತದಾರ ಪ್ರಭುವಿನ ನಿರ್ಧಾರವನ್ನು ನಾವು ಹೇಳಲು ಸಾಧ್ಯವಿಲ್ಲ ಪ್ರಜಾಪ್ರಭುತ್ವದ ಈ ಮತದಾನದ ವ್ಯವಸ್ಥೆಯಲ್ಲಿ ಹಲವಾರು ರಾಷ್ಟ್ರನಾಯಕರು ಸೋಲನುಭವಿಸಿದ್ದಾರೆ ಹೀಗಾಗಿ ಯಾರ ಸೋಲು ಗೆಲುವಿಗೆ ನಾವು ಕಾರಣರಾಗುವುದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೇಗಳಿಗೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ ರಾಜ್ಯದಲ್ಲಿ 21ಕ್ಕೂ ಅಧಿಕ ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದರು.
Leave a Comment