ಚುನಾವಣೆಯ ಕತ್ಯರ್ವ ಮುಗಿಸಿ ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ತಿರುಪತಿಯತ್ತ ಪ್ರಯಾಣ ಬೆಳೆಸಿದ್ದ ನಗರಸಭೆಯ ಹೆಲ್ತ್ ಇನ್ಸಫೆಕ್ಟರ್ ಸುನೀಲ್ ಗಾವಡೆ ಮತ್ತು ಅವರ ಪತ್ನಿ ಶ್ರೀಮತಿ ಶಾರದಾ ಗಾವಡೆ ಇವರ ಕಾರು ಚಿತ್ರದುರ್ಗದ ಬಳಿ ಲಾರಿ ಹಿಂಭಾಗಕ್ಕೆ ಡಿಕ್ಕಿ ಸಂಭವಿಸಿದೆ. ಅಪಘಾತದ ತಿವ್ರತೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಪತ್ನಿ ಶಾರದಾ ಗಾವಡೆ ಸ್ಥಳದಲ್ಲಿ ಮೃತಪಟ್ಟಿದ್ದು, ಸುನೀಲ್ ಅವರಿಗೆ ಗಂಭೀರ ಗಾಯಗಳಾಗಿವೆ. ಶಾರದಾ ಅವರು ಹಳಿಯಾಳದಲ್ಲಿ ಸೆನಿಟರಿ ಇನ್ಸಫೆಕ್ಟರ್ ಆಗಿ ಕೆಲಸಮಾಡುತ್ತಿದ್ದಳು. ಮೂಲತಃ ಹೊನ್ನಾವರ ತಾಲೂಕಿನ ಮಾಳ್ಕೋಡಿನವರು, ಸುನೀಲ ಗಾವಡೆ ಹಳಿಯಾಳ ಮೂಲದವರಾಗಿದ್ದು ಗಂಭೀರ ಗಾಯಗೊಂಡ ಇವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ. ಒಬ್ಬ ಮಗ ಬೆಂಗಳೂರಿನಲ್ಲಿ ಓದುತ್ತಿದ್ದಾನೆ. ಚುನಾವಣೆ ಕರ್ತವ್ಯ ಮುಗಿಸಿ ನಿನ್ನೆ ರಾತ್ರಿ ಇಬ್ಬರೂ ಹೊರಟು, ಬೆಂಗಳುರಿನಲ್ಲಿರುವ ಮಗನನ್ನು ಕರೆದುಕೊಂಡು ತಿರುಪತಿಗೆ ಹೊರಟಿದ್ದರು ಎನ್ನಲಾಗುತ್ತಿದ್ದು ಶಾರದಾ ನಿಧನಕ್ಕೆ ಎಲ್ಲಡೆಯಂದ ಕಂಬನಿ ವ್ಯಕ್ತವಾಗಿದೆ. ಸುನೀಲ್ ಆದಷ್ಟು ಶಿಘ್ರ ಗುಣಮುಖವಾಗಿ ಕತ್ಯರ್ವಕ್ಕೆ ಮರಳಲಿ ಎಂದು ಸಹದ್ಯೋಗಿಗಳು ಆಶಿಸಿದ್ದಾರೆ.
Leave a Comment