ಹಳಿಯಾಳ;- ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಳಿಯಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪುಷ್ಪಲತಾ ಅಶೋಕ ಚೆನ್ನಬಸನ್ನವರ 98.24%.,
ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ
ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ ನಾಯಕ್ 94.72% ಹಾಗೂ ಸ್ಪಂದನ ಎಸ್ ರಗಟೆ 94.24%
ಅವರನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನೇತ್ರತ್ವದಲ್ಲಿ ಸಾಧಕ ವಿದ್ಯಾರ್ಥಿಗಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಸ್ವಾಮಿ ವಿವೇಕಾನಂದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಮಂಜು ಪಂಡಿತ, ಉದಯ ಹೂಲಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಬಿಜೆಪಿ ಪುರಸಭೆ ಸದ್ಯರಾದ ಶಾಂತಾ ಹಿರೆಕರ, ಸಂಗೀತಾ ಜಾಧವ, ರೂಪಾ ಗಿರಿ, ಚಂದ್ರು ಕಮ್ಮಾರ, ಸಂತೋಷ ಘಟಕಾಂಬಳೆ, ಮುಖಂಡರಾದ ಅನಿಲ ಮುತ್ನಾಳ, ವಿಜಯ ಬೋಬಾಟಿ, ಸಂತಾನ ಸಾವಂತ, ನಾಗರಾಜ ಸಾನಿಕೊಪ್ಪ ಇತರರು ಇದ್ದರು.
Leave a Comment