ಹಳಿಯಾಳ.: ಪಟ್ಟಣದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವವ ನಿಮಿತ್ತ ಸಾವಿರಾರು ಭಕ್ತರ ಭಕ್ತಿ ಘೋಷಗಳ ನಡುವೆ ಬುಧವಾರ ಮಹಾ ರಥೋತ್ಸವವು ಶೃದ್ಧಾ-ಭಕ್ತಿಯೊಂದಿಗೆ ಬುಧವಾರ ನೆರವೆರಿತು.
ಬಸವೇಶ್ವರ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಪ್ರತಿವರ್ಷದಂತೆ ಅನ್ನಸಂತರ್ಪಣೆ ಸಹ ನಡೆಯಿತು.
ರಥವು ದೇವಸ್ಥಾನದ ಎದುರಿನಿಂದ ಮುಖ್ಯರಸ್ತೆಯಲ್ಲಿ ಸಾಗಿತು. ಶಿವಾಜಿ ವೃತ್ತ, ಮುಖ್ಯರಸ್ತೆಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದ ರಥವನ್ನು ಮರಳಿ ಜವಳಿಗಲ್ಲಿ ವೀರಕ್ತಮಠದ ವರೆಗೆ ಕೊಂಡೊಯ್ಯಲಾಯಿತು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಜಾತ್ರೆಗೂ ಮುನ್ನ ಶ್ರೀ ಈಶ್ವರ ಹಾಗೂ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆಸಿ ರಥವನ್ನು ರಥದ ಮನೆಯಿಂದ ಹೊರತಂದು ಪೂಜೆ ಸಲ್ಲಿಸಿ ಬಳಿಕ ಇಲ್ಲಿಯ ಶ್ರೀ ಗುರು ವಿರಕ್ತ ಮಠದಿಂದ ರಥದ ಕಳಸವನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಆರೋಹಣ ಮಾಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಪಟ್ಟಣದ ಜವಳಿ ಗಲ್ಲಿಯ ವಿರಕ್ತ ಮಠದಿಂದ ಕುಂಭಮೇಳದ ಮೆರವಣಿಗೆ ನಡೆಯಿತು. ಬಸವೇಶ್ವರ ದೇವರಿಗೆ ಬಿಲ್ವಾರ್ಚನೆ, ಕುಂಭಾಭೀಷೇಕ ನಡೆಯಿತು ಅಲ್ಲದೇ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯದಲ್ಲಿ ಬಸವ ಜಯಂತಿ, ಬಸವೇಶ್ವರ ನಾಮಕರಣ ಕಾರ್ಯಕ್ರಮವು ನಡೆಯಿತು.
ಮುಂದಿನ ವರ್ಷ 50ನೇ ಮಹಾರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೇಟೆ ಬಸವೇಶ್ವರ ಟ್ರಸ್ಟ್ ಕಮೀಟಿಯವರು ಹೇಳಿದ್ದಾರೆ.
Leave a Comment