ಹಳಿಯಾಳ : ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋ ವಧಾಗೃಹಗಳಲ್ಲಿ ಸಾವಿರಾರು ಗೋವುಗಳನ್ನು ಸಂವಹರಿಸಿ ಅವುಗಳ ಬುರುಡೆ ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಬೇರೆಯೆಡೆಗೆ ಸಾಗಾಟ ಮಾಡುತ್ತಿದ್ದಾಗ ವಿವಿಧ ಸಂಘ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳು, ಎರಡು ಲಾರಿ ಮತ್ತು 10 ಟನ್ ದನದ ಎಲುಬುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆಯು ನಡೆದಿದ್ದು ಹುಬ್ಬಳ್ಳಿಯಿಂದ ಹಳಿಯಾಳ ಮಾರ್ಗವಾಗಿ ಲೊಂಡಾಗೆ ಗೋವು, ದನ, ಎಮ್ಮೆ ಮತ್ತು ಕರುಗಳನ್ನು ವಧೆ ಮಾಡಿ ಅವುಗಳ ಎಲುಬು, ತೆಲೆಬುರುಡೆ, ಕೊಡುಗಳು, ಪಕ್ಕೆಲುಬು ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಸಂಗ್ರಹಿಸಿ ಎರಡು ಲಾರಿ (ಕೆಎ 22, ಸಿ.1549)ದಲ್ಲಿ 6 ಟನ್ ಮತ್ತು (ಕೆಎ 22, ಡಿ, 0944)ದಲ್ಲಿ 4 ಟನ್ಗಳಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ನೀಡಿದ ಮಾಹಿತಿಯನ್ನು ಪಡೆದ ಪೋಲಿಸರು ಪಟ್ಟಣದ ಕ್ರೀಡಾಭವನದ ಹತ್ತಿರದ ಬಸವೇಶ್ವರ ಸರ್ಕಲ್ನ ಪ್ರದೇಶದಲ್ಲಿ ದಾಳಿ ನಡೆಸಿ, ಮೂವರು ಆರೋಪಿಗಳಾದ ಲೋಂಡಾದ ಅಕ್ಬರ್ ನಿಜಾಮ್ ಮುಲ್ಲಾ, ಖಾನಾಪೂರದ ಮೊಸೀನ್ ಬಾಧಷಾ ಮುಲ್ಲಾ ಮತ್ತು ಬೆಳಗಾವಿಯ ಮಾರುತಿ ತಮ್ಮಣ್ಣಾ ಗುಳಿ ಅವರನ್ನು ಬಂಧಿಸಲಾಗಿದೆ.
ಎಲುಬುಗಳ ಸಾಗಾಟಕ್ಕೆ ಬಳಸಲಾದ ಎರಡು ಲಾರಿ ಮತ್ತು ಇನ್ನಿತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಿಎಸೈ ಆನಂದಮೂರ್ತಿ ಪ್ರಕರಣ ದಾಖಲಿಸಿದ್ದಾರೆ.
Leave a Comment