ಹಳಿಯಾಳ : ಪುರಾತನ ದೇವಸ್ಥಾನದ ಆವರಣದಲ್ಲಿರುವ ಕಲ್ಲುಗಳನ್ನು ಸೋಮವಾರ(ಮೇ 12) ಮಧ್ಯರಾತ್ರಿ ತೆಗೆದು ಹಾಕಿ ನೆಲವನ್ನು ಅಗೆದು ನಿಧಿಯನ್ನು ಸಂಗ್ರಹಿಸಲು ವಿಫಲ ಪ್ರಯತ್ನ ನಡೆಸಿದ ತಂಡವನ್ನು ಹಳಿಯಾಳ ಪೋಲಿಸರು ಬಂಧಿಸಿ ಇಲ್ಲಿಯ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮೇ 28ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಮುರ್ಕವಾಡ ಗ್ರಾಮದ ನಾಗಮೋಹನ ನಂಜುಂಡ ಶೆಟ್ಟಿ, ಹಳಿಯಾಳ ಪಟ್ಟಣದ ಯಲ್ಲಾಪೂರ ನಾಕಾದ ಅನ್ಸಾರ್ ಅಕ್ಬರ್ ಶೇಟ್ ಹಾಗೂ ಮುಂಡವಾಡ ಗ್ರಾಮದ ಅನ್ವರ ಉಮ್ಮರಲಿ ಖತಾಲ್ ಎಂಬುವರನ್ನು ಪೋಲಿಸರು ಬಂಧಿಸಿದ್ದರು.
ಸೋಮವಾರ ಮಧ್ಯರಾತ್ರಿ ತಾಲೂಕಿನ ಮುಗದಕೊಪ್ಪ ಗ್ರಾಮದ ಅನತಿ ದೂರದಲ್ಲಿಯ ಅರಣ್ಯ ಪ್ರದೇಶದ ಸರ್ವೆ ನಂ 7ರಲ್ಲಿರುವ ಪುರಾತನ ಶ್ರೀ ಕಲ್ಮೇಶ್ವರ ದೇವಸ್ಥಾನ ಪ್ರದೇಶದಲ್ಲಿರುವ ಭೂಮಿಯನ್ನು ಮಧ್ಯರಾತ್ರಿ ಸುಮಾರು 1 ಗಂಟೆಗೆ ಅಗೆದು ಅಲ್ಲಿರುವ ಕಲ್ಲುಗಳನ್ನು ತೆರವುಗೊಳಿಸಿ ನಿಧಿ ಶೋಧದಲ್ಲಿ ತೊಡಗಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು.
Leave a Comment