ಹಳಿಯಾಳ : ಕಸ ವಿಲೇವಾರಿ, ಶುದ್ದ ಕುಡಿಯುವ ನೀರಿನ ಪೂರೈಕೆ, ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪೂರೈಸುವ ಮೂಲಭೂತ ಕರ್ತವ್ಯ ನಗರ ಸಭೆ, ಪುರಸಭೆ ಹಾಗೂ ತಾಲೂಕಾಡಳಿತದ ಪ್ರಮುಖ ಕಾರ್ಯವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರಿಶಕುಮಾರ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹಳಿಯಾಳ-ಜೋಯಿಡಾದ ವಿಧಾನಸಭಾ ಕ್ಷೇತ್ರದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ, ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಪಂ, ತಾಪಂ, ಪುರಸಭೆ, ನಗರಸಭೆ, ತೋಟಗಾರಿಕೆ, ಪೋಲಿಸ್, ಆರೋಗ್ಯ, ಕೃಷಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಹಾಗೂ ಕುಂದು ಕೊರತೆಯನ್ನು ಆಲಿಸಿದ ಡಿಸಿ ಸರ್ಕಾರಿ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಎಲ್ಲ ಸರ್ಕಾರಿ ಜಮೀನುಗಳ ಸಮೀಕ್ಷೆ ಕಾರ್ಯ ಒಂದು ಬಾರಿಯಾದರು ಮಾಡಿಸಬೇಕು ಇದು ಮುಂದೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ ಎಂದರು.
ಮುಂದಿನ ಅವಶ್ಯಕತೆ ಅನುಗುಣವಾಗಿ ಕಸ ವಿಲೇವಾರಿಗೆ ಹಾಗೂ ಸ್ಮಶಾನಗಳಿಗೆ ಈಗಲೇ ಜಾಗ ಗುರುತಿಸಿ ಇಡುವಂತೆ ಸಲಹೆ ನೀಡಿದ ಅವರು ಯಾರಿಗೂ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೇ ಉತ್ತರ ಕನ್ನಡ ಜಿಲ್ಲೆಯು ಪ್ರವಾಸಿ ಕ್ಷೇತ್ರವಾಗಿದ್ದು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅಭದ್ರತೆಯ ಭಯ ಕಾಡದಂತೆ ಅಧಿಕಾರಿಗಳು ನೊಡಿಕೊಳ್ಳಬೇಕೆಂದು ಕೂಡ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಇನ್ನೂ ಜಿಲ್ಲಾಧಿಕಾರಿ ಹರೀಶ ಅವರು ಹಳಿಯಾಳ ಪಟ್ಟಣದಲ್ಲಿ ನೀರಿನ ಪೈಪಲೈನ್ ಒಡೆದು ನೀರು ಪೋಲಾಗುತ್ತಿರುವ ಬಗ್ಗೆ ಹಾಗೂ ಕಸದ ಸಮಸ್ಯೆಯ ಬಗ್ಗೆ ಅವರ ಮೊಬೈಲ್ ವಾಟ್ಸ್ಪ್ಗೆ ಬಂದ ದೂರಿನ ಬಗ್ಗೆ ಸಭೆಯ ಗಮನ ಸೆಳೆದು ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಆದೇಶಿಸಿದರು.
ಉಕ ಜಿಲ್ಲಾ ಎಸಿ ಅಭಿಜಿನ್ ಅವರು ಅಧಿಕಾರಿಗಳಿಂದ ಪ್ರಗತಿ ಪರಿಶೀಲಿಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ತಹಶೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ಎಸಿಎಫ್ ಸಂತೋಷ ಕೆಂಚಪ್ಪನವರ, ಪಿಡಬ್ಲೂಡಿ ಅಧಿಕಾರಿ ಕುಲಕರ್ಣಿ, ಕೃಷಿ ಇಲಾಖೆ ನಾಗೇಶ ನಾಯ್ಕ, ತಾಪಂ ಇಓ ಡಾ.ಮಹೇಶ ಕುರಿಯವರ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.
Leave a Comment