• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗದಗ ಜಿಲ್ಲಾ ಪೌರಾಡಳಿತ ಇಲಾಖೆ ಅಧಿಕಾರಿಗಳಿಂದ ಹಳಿಯಾಳ ಪುರಸಭೆಗೆ ಭೆಟಿ ಮಾಹಿತಿ ಸಂಗ್ರಹ

May 19, 2019 by Yogaraj SK Leave a Comment

GADAG nagarsabhe adhikarigala bheti parishilane

ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಹಳಿಯಾಳ ಪುರಸಭೆಗೆ ಗದಗ ಜಿಲ್ಲೆಯ ಪೌರಾಡಳಿತ ಇಲಾಖೆಯ ಅಧಿಕಾರಿ ಮತ್ತು ಪೌರ ಕಾರ್ಮಿಕರ ತಂಡವು ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿದರು.
ಗದಗ ಜಿಲ್ಲೆಯ ಗದಗ-ಬೇಟಗೇರಿ ನಗರಸಭೆ, ಲಕ್ಷ್ಮೇಶ್ವರ ಪುರಸಭೆ, ಶಿರಹಟ್ಟಿ ಪುರಸಭೆ, ಮುಂಡರಗಿ ಪುರಸಭೆ, ರೋಣ ಪುರಸಭೆ, ನರಗುಂದ ಪುರಸಭೆ, ಗಜೇಂದ್ರಗಡ ಪುರಸಭೆ ಮತ್ತು ನರೇಗಲ್ ಪಟ್ಟಣ ಪಂಚಾಯತ ಮತ್ತು ಮುಳಗುಂದ ಪಂಚಾಯತನ್ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ತಂಡವು ಪಟ್ಟಣದ ಆಶ್ರಯ ಬಡಾವಣೆ, ಹೊಸ ಚರ್ಚ ರಸ್ತೆ, ಕಸಬಾ ಗಲ್ಲಿ, ಕೆ.ಎಚ್.ಬಿ ಕಾಲೋನಿ, ಶೆಟ್ಟಿ ಗಲ್ಲಿ, ಐತಿಹಾಸಿಕ ಕೋಟೆ ಪ್ರದೇಶ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಂಚಾರ ನಡೆಸಿ, ಇಲ್ಲಿಯ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗಳಿಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸ ವಿಲೇವಾರಿ ವಾಹನದ ಮಾರ್ಗಗಳ ವಿವರ, ಕಸವನ್ನು ಪಡೆಯುವಾಗ ಜನರೊಂದಿಗೆ ಅವರ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು ಸಾರ್ವಜನಿಕರ ಆಸಕ್ತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಪಟ್ಟಣದ ವಿವಿಧ ಕೆರೆಗಳಿಗೆ ಭೇಟಿ ನೀಡಿದ ತಂಡವು ಕೆರೆಗಳ ಹೊಳೆತ್ತೆವುದು, ಅವುಗಳ ನೈರ್ಮಲ್ಯ ಮತ್ತು ಸ್ವಚ್ಚತೆಯ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಹಳಿಯಾಳ ಪುರಸಭೆಯ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು, ಪಟ್ಟಣದಲ್ಲಿ ನಿರ್ಮಿಸುತ್ತಿರುವ ಜಿ ಪ್ಲಸ್ ಟೂ ಮನೆಗಳ ಸಮುಚ್ಚಯ, ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮತ್ತು ವ್ಯವಸ್ಥೆ, ನೀರು ಪೊರೈಕೆಯ ನಿರ್ವಹಣೆಯ ಹೊಣೆ ಹೊತ್ತಿರುವ ಜೈನ್ ಇರಿಗೇಶನ್ ಸಿಸ್ಟಮ್‍ನ ಕಚೇರಿಗೆ ತೆರಳಿ ವಿಚಾರ ವಿನಿಮಯ ನಡೆಸಿದರು. ನಂತರ ಪಟ್ಟಣದಿಂದ ಮೂರು ಕಿಮೀ ಅಂತರದಲ್ಲಿರುವ ಬಾಬಣಿಕೊಪ್ಪ ಗ್ರಾಮದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಅಲ್ಲಿಯ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಿದರು.
ನಗರಸಭೆ, 6 ಪುರಸಭೆ ಸೇರಿದಂತೆ 2 ಪಟ್ಟಣ ಪಂಚಾಯತ್‍ಗೆ ಸೇರಿದ ಓರ್ವ ಪರಿಸರ ಇಂಜನಿಯರ್, 3 ಹಿರಿಯ ಆರೋಗ್ಯ ನಿರೀಕ್ಷಕರು, 4 ಕಿರಿಯ ಆರೋಗ್ಯ ಸಹಾಯಕರು, 10 ಜನ ನೈರ್ಮಲ್ಯ ಮೇಲ್ವಿಚಾರಕರು ಸೇರಿದಂತೆ 28 ಜನ ಪೌರ ಕಾರ್ಮಿಕರು ಆಗಮಿಸಿ ಕಸ ವಿಲೇವಾರಿ ಕುರಿತು ಅಧ್ಯಯನ ನಡೆಸಿದರು. ಇವರಿಗೆ ಹಳಿಯಾಳ ಪುರಸಭೆಯ ಕಿರಿಯ ಇಂಜನಿಯರ ಹರೀಷ್ ಗೌಡಾ, ಕಂದಾಯ ಅಧಿಕಾರಿ ಅಶೋಕಕುಮಾರ ಸಾಳೆನವರ, ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ, ಸಿಬ್ಬಂದಿಗಳಾದ ರಾಮಚಂದ್ರ ಮೋಹಿತೆ, ರಮೇಶ ಮುಜುಕರ, ಚಂದ್ರು ನಿಂಗನಗೌಡಾ, ಗೋಪಾಲಸಿಂಗ್ ಬಿಂದ್ರಾಬಿನ್, ಪರಶುರಾಮ ಜುವೇಕರ, ಪರಶುರಾಮ ಕುರಿಯಾರ, ವಿಶ್ರಾಂತವ್ವಾ ಮಾದರ, ಸಂಜಯ ಮುಳೆ ಸೇರಿದಂತೆ ಮತ್ತೀತರರು ಮಾಹಿತಿ ನೀಡಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Award, Gadag District Municipalities Department, GADAG nagarsabhe adhikarigala bheti parishilane, Haliya Municipalities, in the state of garbage disposal, OFFICERS, the Gadag district, the Gajendragada municipality, the Lakshmeshwar municipality, the measures taken by the lakes, the Mundaragi municipality, The Municipal Corporation of Gadag district for the municipalities, the Naragunda municipality, the Naregal town panchayat, the Runa municipality, the Shirahatti municipality, their hygiene and cleanliness, ಅಧಿಕಾರಿಗಳಿಂದ, ಅವುಗಳ ನೈರ್ಮಲ್ಯ, ಕೆರೆಗಳ ಹೊಳೆತ್ತೆವುದು, ಗಜೇಂದ್ರಗಡ ಪುರಸಭೆ, ಗದಗ ಜಿಲ್ಲಾ ಪೌರಾಡಳಿತ ಇಲಾಖೆ, ಗದಗ ಜಿಲ್ಲೆಯ ಗದಗ-ಬೇಟಗೇರಿ ನಗರಸಭೆ, ನರಗುಂದ ಪುರಸಭೆ, ನರೇಗಲ್ ಪಟ್ಟಣ ಪಂಚಾಯತ, ಪುರಸಭೆಗೆ ಗದಗ ಜಿಲ್ಲೆಯ ಪೌರಾಡಳಿತ ಇಲಾಖೆ, ಮಾಹಿತಿ ಸಂಗ್ರಹ, ಮುಂಡರಗಿ ಪುರಸಭೆ, ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ, ರೋಣ ಪುರಸಭೆ, ಲಕ್ಷ್ಮೇಶ್ವರ ಪುರಸಭೆ, ಶಿರಹಟ್ಟಿ ಪುರಸಭೆ, ಸ್ವಚ್ಚತೆಯ ಬಗ್ಗೆ ಕೈಗೊಂಡ ಕ್ರಮಗಳ, ಹಳಿಯಾಳ ಪುರಸಭೆಗೆ ಭೆಟಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...