ಹೊನ್ನಾವರ . ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದಲ್ಲಿ ಪಾಲಕರ ಸಭೆ ನಡೆಸಿದ್ದು ಊರ ಹಿರಿಯ ನಾಯಕರು ಮಾಡಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎಂದು ಕೆಲವು ಹಳೇ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಹತ್ತನೇ ತರಗತಿಯ ರಿಜಲ್ಟ್ನಲ್ಲಿ ಕಡಿಮೆ ಬಂದಿರುವುದರಿಂದ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ ತಿಂಗಳಲ್ಲಿ ಬಹಳ ಶ್ರಮಪಟ್ಟು, ಒತ್ತಾಯ ಮಾಡಿ ಪಾಲಕರ ಸ¨s ಗೋವಿಂದ ಎಸ್ ನಾಯ್ಕರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಸಭೆಗೆ ಮುಖ್ಯ ಕಾರಣ ಎಂದರೆ ಮಕ್ಕಳ ಕುರಿತು ಸರಿಯಾದ ಕಾಳಜಿವಹಿಸುತ್ತಿಲ್ಲ ಎಂದಾಗಿತ್ತು. ಈ ಶಾಲೆಗೆ ಬರುವ ಮಕ್ಕಳಿಗೆ ಬಸ್ ಡ್ರೈವರ್ಗಳಾದ ರಮಾಕಾಂತ ನಾಯ್ಕ ಮತ್ತು ಚಿದಾನಂದ ಮಡಿವಾಳ ಮುಂತಾದವರು ತಲೆಕೆಟ್ಟ ಹುಳುಗಳಮತೆ ತೊಂದರೆ ಕೊಡುವುದು, ಬಸ್ ಹತ್ತಲು ಬರುತ್ತಿದ್ದ ಮಕ್ಕಳಿಗೆ ಬಸ್ ನಿಲ್ಲಿಸದೇ ಬಿಟ್ಟು ಹೋಗುವುದು ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸದಿರುವುದು ಮುಂತಾದ ಕೆಲಸಗಳು ಡ್ರೈವರ್ರಿಂದ ನಡೆಯುತ್ತಿತ್ತು. ಮಡಿವಾಳ ಎಂಬ ಡ್ರೈವರ್ ರಾತ್ರಿ ಹೊಲ್ಟಿಂಗಿಗೆ ಗೇರಸೊಪ್ಪಾಕ್ಕೆ ಬಂದರೆ ಬೇಲೆ ಮೇಲಿಂದ ಊಟಕ್ಕೆಂದು ಬಸ್ ದೇವಸ್ಥಾನ ತನಕ ತಂದು ನಂತರ ಊಟ ಮಾಡಿ ಹೋಗುವಾಗ ಹೆಂಗಸರು ಹೆಣ್ಣು ಮಕ್ಕಳಿರುವ ಮನೆಗಳ ಮುಂದೆ ನಿಲ್ಲಿಸಿ ಮೂತ್ರವಿಸರ್ಜನೆಗೆ ಹೋಗುವುದು ಈ ಬಗ್ಗೆ ಶಿಕ್ಷಕರು ಯಾರಿಗೂ ತಿಳಿಸದೇ ಪಂಚಾಯತಿಗೂ ಒಂದು ಲಿಖಿತ ದೂರು ನೀಡದೇ ಇರುವುದು. ಹಾಗೇ ಅದೇ ಶಾಲೆಯ ಶಿಕ್ಷಕಿಯಾಗಿದ್ದ ಸವಿತಾ ದೇವಾಡಿಗ ಎಂಬುವವರ ಮೇಲೆ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ವಿಚಾರದ ಪೋಲಿಸ್ ತನಿಖೆಯ ವರದಿ ತರಿಸದಿರುವುದು ಮುಂತಾದ ವಿಷಯದ ಕುರಿತು ಯಾವುದೇ ಜವಾಬ್ದಾರಿಯಿಂದ ಆ ಶಾಲೆಯ ಹಿರಿಯ ಶಿಕ್ಷಕರ್ಯಾರೂ ಗಮನ ಕೊಡದಿರುವುದು ಊರಿನ ಹಲವರಿಗೆ ಬೇಸರ ತಂದಿತು.
ಶಾಲೆಯಲ್ಲಿ ಪದೇ ಪದೇ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿನಿಯರು ಬೀಳುವುದು ಆ ಕುರಿತೂ ಕೂಡಾ ಶಿಕ್ಷಕರು ಯಾವುದೇ ಗಮನ ಕೊಡದಿದ್ದರಿಂದ ಮತ್ತು ಎಸ್.ಡಿ.ಎಂ.ಸಿ. ರಚನೆ ಮಾಡಿಸರಿದ್ದರಿಂದ ಹಲವರಿಗೆ ಬೇಸರವಾಗಿದೆ. ಇಷ್ಟಾದ ಮೇಲೆ ಗೋವಿಂದ ಎಸ್ ನಾಯ್ಕರವರ ಹತ್ತಿರದ ಸಂಬಂಧಿ ಹುಡುಗಿ ಪದೇ ಪದೇ ಬಿದ್ದ ಮೇಲೆ ಅವರಿಗೆ ತಡೆದುಕೊಳ್ಳಲಾಗದೇ ಪಾಲಕ-ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತ್ ಕೆಲವು ಸದಸ್ಯರನ್ನು ಭೇಟಿಯಾಗಿ ಪಾಲಕರ ಸಭೆಯನ್ನು ನಡೆಸಲು ಮುಂದಾದರು. ಸಭೆ ಯಶಸ್ವಿಯಾಗಿ ನಡೆದಿದ್ದು, ಶಾಲೆಯ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆದು ಸರಿಪಡಿಸಿದ್ದರು. ಗೋವಿಂದ ಸುಬ್ಬ ನಾಯ್ಕರವರು ಕಳೆದ ಒಂದು ವರ್ಷದಲ್ಲಿ ವನಮಹೋತ್ಸವ ಬಿಟ್ಟರೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಲೆಗೆ ಹೋಗಿರಲಿಲ್ಲ. ಶಾಲೆಯ ಹತ್ತಿರದ ಹೆಚ್ಚುವರಿ ಮಣ್ಣನ್ನು ಶಾಲೆಯ ಅನುಮತಿಯ ಮೇರೆಗೆ ತೆಗೆದದ್ದನ್ನು ಕೆಲವರು ರಾಜಕೀಐ ಮಾಡಿ ಕಿರಾತರಂತೆ ನಡೆದುಕೊಂಡು ಗೋವಿಂದ ನಾಯ್ಕರ ರಾಜಕೀಯ ಭವಿಷ್ಯ ಹಾಳು ಮಾಡಲು ಪ್ರಯತ್ನಿಸಿದ್ದರು. ಈ ಬೇಸರದಲ್ಲಿ ಶಾಲೆಯ ಹತ್ತಿರ ಹೋಗುತ್ತಿರಲಿಲ್ಲ. ಆದರೆ ಶಾಲೆಯ ಅಭಿವೃದ್ಧಿಗಾಗಿ ಮತ್ತು ಶಾಲೆಯ ಹಿತದೃಷ್ಟಿಯಿಂದ ಊರಿನ ಶಾಲೆಯನ್ನು ಒಳ್ಳೇಯದು ಮಾಡಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಮಣ್ಣನ್ನು ತೆಗೆದ ವಿಚಾರದಲ್ಲಿ ಶಾಲೆಯಿಂದ ಪ್ರತಿ ಹೇಳಿಕೆಗಳು ಬರಲಿಲ್ಲ. ಮಕ್ಕಳ ಮತ್ತು ಕೆಎಸ್ಆರ್ಟಿಸಿ ಡ್ರೈವರ್ –ಕಂಡಕ್ಟರ್ ನಡುವೆ ಗಲಭೆ ನಡೆದಾಗ ಮಾನ್ಯ ಸಿಪಿಐಯವರು ಸ್ಥಳಕ್ಕೆ ಬಂದಾಗ ಮುಖ್ಯಾಧ್ಯಾಪಕರ ಹುದ್ದೆಯಲ್ಲಿದ ಹಿರಿಯ ಶಿಕ್ಷಕರು ಏನೂ ಮಾತನಾಡದೇ ಸುಮ್ಮನಿದ್ದರು. ಈ ಬಗ್ಗೆ ಪಂಚಾಯತಿಗೂ ಲಿಖಿತವಾಗಿ ತಿಳಿಸಲಿಲ್ಲ. ಈ ಎಲ್ಲ ವಿಷಯದ ಕುರಿತು ಸರಿಪಡಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಈ ವರ್ಷದ ಎಸ್.ಎಸ್.ಎಲ್.ಸಿ ರಿಜಲ್ಟ್ ಉತ್ತಮ ಪಡಿಸುವ ಬಗ್ಗೆ ಕೂಡಾ ತೀರ್ಮಾನಿಸಲಾಗಿತ್ತು. ಆದರೆ ಸಭೆಗೆ ಕೆಲವು ಶಿಕ್ಷಕರು ಉದ್ದೆಶ ಪೂರ್ವಕವಾಗಿ ಗೈರಾಗಿದ್ದರು. ಅಲ್ಲದೇ ಅವರ ವಿಷಯದಲ್ಲಿ ಹೆಚ್ಚು ಮಕ್ಕಳು ಫೇಲಾಗಿದ್ದಾರೆ. ಗೋವಿಂದ ನಾಯ್ಕರವರು ಜಿಲ್ಲಾ ಪಂಚಾಯತ್ ಸದಸ್ಯರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕೆಲವರು ಈಗ ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ. ಅವರ ಹೊಸ ವಾಹನ ಕೊಳ್ಳಲು ಭಟ್ಕಳದ ರಾಜಕೀಯ ಧುರಿಣರೊಬ್ಬರು ಸಹಾಯ ಮಾಡಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಈ ಶಾಲೆಗೆ ತೃತೀಯ ಭಾಷೆಯಾಗಿ ಸಂಸ್ಕøತ ಒಂದೇ ಸಾಕು ಅಲ್ಲದೇ ಕೆಲಸ ಮಾಡದ ಶಿಕ್ಷಕರನ್ನು ಅಲ್ಲಿಂದ ತೆಗೆಯಬೇಕು. ಮತ್ತು ಶಾಲೆಯ ಜಮೀನಿನ ತಕರಾರನ್ನು ತಕ್ಷಣ ಸರಿಪಡಿಸಬೇಕು. ಮುಂತಾದ ವಿಚಾರಗಳು ಮುಂದಿನ ಎಸ್.ಡಿ.ಎಂ.ಡಿ ಜಾರಿಗೊಳಿಸಿದರೆ ಶಾಲೆ ಅಭಿವೃದ್ಧಿಯಾಗುತ್ತದೆ ಎಂದು ಕೆಲವು ಹಳೇ ವಿದ್ಯಾರ್ಥಿಗಳು ತಿಳಿಸಿದ್ದಾರೆ.
Leave a Comment