• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ

May 30, 2019 by Gaju Gokarna Leave a Comment

Summer_Camp_-2019_-1.

ಹೊನ್ನಾವರ , ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಟಿ.ವಿ., ಮೊಬೈಲ್ ಕಾರಣದಿಂದ ವಸ್ತು ನಿಷ್ಠ ಪ್ರಪಂಚವನ್ನೇ ಮರೆತು ಬಿಟ್ಟಿರುವ, ಇಂಥಾ ಸಂದರ್ಭದಲ್ಲಿಯೂ ಬಿಡುವು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಕೆರೆಕೋಣ ಶಿಬಿರದ ಯಶಸ್ಸನ್ನು ತೋರಿಸುತ್ತದೆ ಎಂದು ಹೊನ್ನಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿ.ಎಚ್. ಪಾಟೀಲ್ ಹೇಳಿದರು. ಅವರು ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ, ಕೆರೆಕೋಣ್‍ನಲ್ಲಿ 12 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.
ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ, ಸಮೂಹ ಗೀತೆ, ಸಮೂಹ ನೃತ್ಯ, ಚಿತ್ರಕಲೆ, ನಾಟಕ, ಜೇಡಿ ಮಣ್ಣಿನ ಕಲೆ, ಯಕ್ಷಗಾನ, ಕರಕುಶಲ, ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿಕೆ, ನೈತಿಕ ಶಿಕ್ಷಣ, ಬಾಲ್ಯ ವಿವಾಹ ಮುಂತಾದವುಗಳ ಕುರಿತು ಅರಿವು ಮೂಡಿಸಿ ಒಂದು ಮಾದರಿ ಶಿಬಿರವನ್ನಾಗಿ ಮಾಡಿರುವ ಕುಮುದಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿ ಕಲಾವಿದ ಬಿ.ವಿ. ಭಂಡಾರಿ ಮಾತನಾಡಿ, ಮಕ್ಕಳ ಮನೋಭಾವನೆ ಅರ್ಥ ಮಾಡಿಕೊಳ್ಳುವುದರ ಮೂಲಕ ಅವರಿಗೆ ಬೇರೆ ಬೇರೆ ವಿಷಯವನ್ನು ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ. ಮಕ್ಕಳೂ ಕೂಡ ಯಾವ ಮುಜುಗರ, ಸಂಕೋಚವಿಲ್ಲದೇ ತಮ್ಮ ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಸ್ಪಂದಿಸಿ ತಮಗೆ ಬೇಕಾದ್ದನ್ನು ಕೊಳ್ಳುವ ಪ್ರಯತ್ನ ಮಾಡುತ್ತಿದ್ದರು, ಇದು ಶಿಬಿರದ ಹೈಲೈಟ್ಸ್ ಎಂದು ಹೇಳಿ ಶಿಬಿರದಲ್ಲಿ ಅನುಭವಿಸಿದ ಖುಷಿ ಕ್ಷಣಗಳನ್ನು ಹಂಚಿಕೊಂಡರು.
ಶಿಬಿರದುದ್ದಕ್ಕೂ ಮಕ್ಕಳ ಜೊತೆಯಲ್ಲಿ ಕಾಲ ಕಳೆದÉÉ ಎಸ್.ಡಿ.ಎಮ್. ಪಿಯು ಕಾಲೇಜಿನ ಉಪನ್ಯಾಸಕ, ರಂಗಕರ್ಮಿ ಹಾಗೂ ಸಂಪನ್ಮೂಲ ವ್ಯಕ್ತಿ ವಿದ್ಯಾಧರ ನಾಯ್ಕ ಕಡತೋಕ ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ಮಾನವೀಯ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಿಗೆ ಪರಸ್ಪರರ ಅನುಭವವೂ ಪ್ರಾಪ್ತಿಯಾಗುತ್ತದೆ, ಮನುಷ್ಯ ಪ್ರೀತಿಯನ್ನು ಹುಟ್ಟು ಹಾಕುವ ಕೆಲಸವೂ ಶಿಬಿರದಲ್ಲಾಗಿದೆ. ಈ ಶಿಬಿರ ಅತ್ಯಂತ ವಿಶೇಷವೂ, ವೈವಿದ್ಯಮಯವೂ ಆಗಿತ್ತು. ಹಾಗಾಗಿ ನನಗೆ ಸರ್ವ ರೀತಿಯಲ್ಲೂ ಕಲಿಕೆ ಕೊಟ್ಟ ಮರೆಯಲಾಗದ ಶಿಬಿರ ಇದು ಎಂದರಲ್ಲದೇ ಇಂಥಾ ಗ್ರಾಮೀಣ ಪ್ರದೇಶದಲ್ಲಿ ಶಿಬಿರವನ್ನು ಆಯೋಜಿಸಿ ಸೌಲಭ್ಯ ವಂಚಿತ ಮಕ್ಕಳಿಗೂ ಸದುಪಯೋಗವಾಗುವಂತೆ ಮಾಡಿದ್ದು ಸ್ತುತ್ಯಾರ್ಹ ಎಂದರು.
ಶಿಬಿರದ ಮಕ್ಕಳ ಪಾಲಕರ ಪರವಾಗಿ ಶಾಂತಿ ನಾಯ್ಕ, ಹರಾವರಿ ಮಾತನಾಡಿ, ಇಲ್ಲಿ ನಡೆದ ಶಿಬಿರ ನಮ್ಮ ಊರಿನ ಮಕ್ಕಳ ಸಾಮಾಜಿಕ, ಸಾಂಸ್ಕøತಿಕ ಪ್ರಗತಿಗೆ ಅನುಕೂಲ ಮಾಡಿಕೊಟ್ಟಿತು ಹಾಗಾಗಿ ಎಲ್ಲರಿಗೆ ಧನ್ಯವಾದ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ಶಿಬಿರಾರ್ಥಿಗಳಾದ ಕುಮಾರಿ ಧನ್ಯಾ ಜಿ. ನಾಯ್ಕ, ಅಥರ್ವ ಶೆಟ್ಟಿ, ಮೈಥಿಲಿ ನಾಯ್ಕ, ಅನನ್ಯ ಶೆಟ್ಟಿ, ಚಿನ್ಮಯಿ ಧಾರೇಶ್ವರ, ವೈಭವ ಆಚಾರಿ, ಆದೇಶ ಶೆಟ್ಟಿ, ತನುಶ್ರೀ ನಾಯ್ಕ ಮತ್ತು ಸಿಂಚನಾ ಉದಯ ಶೆಟ್ಟಿ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು.
ವೇದಿಕೆ ಕಾರ್ಯಕ್ರಮಕ್ಕಿಂತ ಮೊದಲು ಶಿಬಿರಾರ್ಥಿಗಳು, ವಿದ್ಯಾಧರ ನಾಯ್ಕ ನಿರ್ದೇಶನದ ‘ಬ್ರಹ್ಮರಾಕ್ಷಸ’ ನಾಟಕ, ಸಮೂಹ ನೃತ್ಯ, ಸಮೂಹ ಗೀತೆ, ಹಾಡು, ಡ್ಯಾನ್ಸ್ ಆಡಿ ತೋರಿಸಿದರು ಮತ್ತು ತಮ್ಮ ಕಯ್ಯಲ್ಲೇ ಅರಳಿದ ಮಣ್ಣಿನ ಮಾದರಿ, ಚಿತ್ರಕಲೆ, ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು.
ಎಮ್ ಎಸ್ ಶೆಟ್ಟಿ ಸ್ವಾಗತಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

watermarked jj watermarked jj1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Balavana Society Bangalore, camp, Camping Children's Humanitarian Attitude, children, Children's Dormant Talent, Children's Summer Camp Closure, Clay Art, Drama, Fire Supply, Group Dancing, Handicrafts, Honnavar, Kumuda Development Institute, Mass Song, painting, Women and Child Development Department of Child Development, Yakshagana, ಅಗ್ನಿ ಶಾಮಕ ದಳ, ಕರಕುಶಲ, ಕುಮುದಾ ಅಭಿವೃದ್ಧಿ ಸಂಸ್ಥೆ ಸಹಯೋಗ, ಚಿತ್ರಕಲೆ, ಜೇಡಿ ಮಣ್ಣಿನ ಕಲೆ, ನಾಟಕ, ಬಾಲಭವನ ಸೊಸೈಟಿ ಬೆಂಗಳೂರು, ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ, ಮಕ್ಕಳ ಸುಪ್ತ ಪ್ರತಿಭೆ, ಮಕ್ಕಳಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಗರ್ಭಿಣಿಯರು, ಯಕ್ಷಗಾನ, ಶಿಬಿರಗಳು ಮಕ್ಕಳ ಮಾನವೀಯ ಮನೋಭಾವ, ಶಿಬಿರವು, ಶಿಶು ಅಭಿವೃದ್ಧಿ ಯೋಜನೆ, ಸಮೂಹ ಗೀತೆ, ಸಮೂಹ ನೃತ್ಯ, ಹೊನ್ನಾವರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...