ಹೊನ್ನಾವರ , ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಟಿ.ವಿ., ಮೊಬೈಲ್ ಕಾರಣದಿಂದ ವಸ್ತು ನಿಷ್ಠ ಪ್ರಪಂಚವನ್ನೇ ಮರೆತು ಬಿಟ್ಟಿರುವ, ಇಂಥಾ ಸಂದರ್ಭದಲ್ಲಿಯೂ ಬಿಡುವು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಕೆರೆಕೋಣ ಶಿಬಿರದ ಯಶಸ್ಸನ್ನು ತೋರಿಸುತ್ತದೆ ಎಂದು ಹೊನ್ನಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿ.ಎಚ್. ಪಾಟೀಲ್ ಹೇಳಿದರು. ಅವರು ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ, ಕೆರೆಕೋಣ್ನಲ್ಲಿ 12 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.
ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ, ಸಮೂಹ ಗೀತೆ, ಸಮೂಹ ನೃತ್ಯ, ಚಿತ್ರಕಲೆ, ನಾಟಕ, ಜೇಡಿ ಮಣ್ಣಿನ ಕಲೆ, ಯಕ್ಷಗಾನ, ಕರಕುಶಲ, ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿಕೆ, ನೈತಿಕ ಶಿಕ್ಷಣ, ಬಾಲ್ಯ ವಿವಾಹ ಮುಂತಾದವುಗಳ ಕುರಿತು ಅರಿವು ಮೂಡಿಸಿ ಒಂದು ಮಾದರಿ ಶಿಬಿರವನ್ನಾಗಿ ಮಾಡಿರುವ ಕುಮುದಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿ ಕಲಾವಿದ ಬಿ.ವಿ. ಭಂಡಾರಿ ಮಾತನಾಡಿ, ಮಕ್ಕಳ ಮನೋಭಾವನೆ ಅರ್ಥ ಮಾಡಿಕೊಳ್ಳುವುದರ ಮೂಲಕ ಅವರಿಗೆ ಬೇರೆ ಬೇರೆ ವಿಷಯವನ್ನು ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ. ಮಕ್ಕಳೂ ಕೂಡ ಯಾವ ಮುಜುಗರ, ಸಂಕೋಚವಿಲ್ಲದೇ ತಮ್ಮ ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಸ್ಪಂದಿಸಿ ತಮಗೆ ಬೇಕಾದ್ದನ್ನು ಕೊಳ್ಳುವ ಪ್ರಯತ್ನ ಮಾಡುತ್ತಿದ್ದರು, ಇದು ಶಿಬಿರದ ಹೈಲೈಟ್ಸ್ ಎಂದು ಹೇಳಿ ಶಿಬಿರದಲ್ಲಿ ಅನುಭವಿಸಿದ ಖುಷಿ ಕ್ಷಣಗಳನ್ನು ಹಂಚಿಕೊಂಡರು.
ಶಿಬಿರದುದ್ದಕ್ಕೂ ಮಕ್ಕಳ ಜೊತೆಯಲ್ಲಿ ಕಾಲ ಕಳೆದÉÉ ಎಸ್.ಡಿ.ಎಮ್. ಪಿಯು ಕಾಲೇಜಿನ ಉಪನ್ಯಾಸಕ, ರಂಗಕರ್ಮಿ ಹಾಗೂ ಸಂಪನ್ಮೂಲ ವ್ಯಕ್ತಿ ವಿದ್ಯಾಧರ ನಾಯ್ಕ ಕಡತೋಕ ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ಮಾನವೀಯ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಿಗೆ ಪರಸ್ಪರರ ಅನುಭವವೂ ಪ್ರಾಪ್ತಿಯಾಗುತ್ತದೆ, ಮನುಷ್ಯ ಪ್ರೀತಿಯನ್ನು ಹುಟ್ಟು ಹಾಕುವ ಕೆಲಸವೂ ಶಿಬಿರದಲ್ಲಾಗಿದೆ. ಈ ಶಿಬಿರ ಅತ್ಯಂತ ವಿಶೇಷವೂ, ವೈವಿದ್ಯಮಯವೂ ಆಗಿತ್ತು. ಹಾಗಾಗಿ ನನಗೆ ಸರ್ವ ರೀತಿಯಲ್ಲೂ ಕಲಿಕೆ ಕೊಟ್ಟ ಮರೆಯಲಾಗದ ಶಿಬಿರ ಇದು ಎಂದರಲ್ಲದೇ ಇಂಥಾ ಗ್ರಾಮೀಣ ಪ್ರದೇಶದಲ್ಲಿ ಶಿಬಿರವನ್ನು ಆಯೋಜಿಸಿ ಸೌಲಭ್ಯ ವಂಚಿತ ಮಕ್ಕಳಿಗೂ ಸದುಪಯೋಗವಾಗುವಂತೆ ಮಾಡಿದ್ದು ಸ್ತುತ್ಯಾರ್ಹ ಎಂದರು.
ಶಿಬಿರದ ಮಕ್ಕಳ ಪಾಲಕರ ಪರವಾಗಿ ಶಾಂತಿ ನಾಯ್ಕ, ಹರಾವರಿ ಮಾತನಾಡಿ, ಇಲ್ಲಿ ನಡೆದ ಶಿಬಿರ ನಮ್ಮ ಊರಿನ ಮಕ್ಕಳ ಸಾಮಾಜಿಕ, ಸಾಂಸ್ಕøತಿಕ ಪ್ರಗತಿಗೆ ಅನುಕೂಲ ಮಾಡಿಕೊಟ್ಟಿತು ಹಾಗಾಗಿ ಎಲ್ಲರಿಗೆ ಧನ್ಯವಾದ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ಶಿಬಿರಾರ್ಥಿಗಳಾದ ಕುಮಾರಿ ಧನ್ಯಾ ಜಿ. ನಾಯ್ಕ, ಅಥರ್ವ ಶೆಟ್ಟಿ, ಮೈಥಿಲಿ ನಾಯ್ಕ, ಅನನ್ಯ ಶೆಟ್ಟಿ, ಚಿನ್ಮಯಿ ಧಾರೇಶ್ವರ, ವೈಭವ ಆಚಾರಿ, ಆದೇಶ ಶೆಟ್ಟಿ, ತನುಶ್ರೀ ನಾಯ್ಕ ಮತ್ತು ಸಿಂಚನಾ ಉದಯ ಶೆಟ್ಟಿ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು.
ವೇದಿಕೆ ಕಾರ್ಯಕ್ರಮಕ್ಕಿಂತ ಮೊದಲು ಶಿಬಿರಾರ್ಥಿಗಳು, ವಿದ್ಯಾಧರ ನಾಯ್ಕ ನಿರ್ದೇಶನದ ‘ಬ್ರಹ್ಮರಾಕ್ಷಸ’ ನಾಟಕ, ಸಮೂಹ ನೃತ್ಯ, ಸಮೂಹ ಗೀತೆ, ಹಾಡು, ಡ್ಯಾನ್ಸ್ ಆಡಿ ತೋರಿಸಿದರು ಮತ್ತು ತಮ್ಮ ಕಯ್ಯಲ್ಲೇ ಅರಳಿದ ಮಣ್ಣಿನ ಮಾದರಿ, ಚಿತ್ರಕಲೆ, ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು.
ಎಮ್ ಎಸ್ ಶೆಟ್ಟಿ ಸ್ವಾಗತಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Leave a Comment