ಹಳಿಯಾಳ: ಸತತ ಮೂರು ವರ್ಷಗಳಿಂದ ಕೆರೆಗಳ ಹುಳನ್ನು ತೆಗೆದು ನೀರು ಸಂಗ್ರಹಣೆಗೆ ಹಾಗೂ ಫಲವತ್ತಾದ ಮಣ್ಣು ದೊರಕಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿರುವ ಹಳಿಯಾಳದ ವಿಆರ್ಡಿಎಮ್ ಟ್ರಸ್ಟ್ ಪ್ರಸಕ್ತ ವರ್ಷವು ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡರವರ ಸಹಕಾರದಿಂದ ಕೆರೆಗಳ ಹುಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದೆ.
ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿರುವ ವಿಆರ್ಡಿಎಮ್ ಟ್ರಸ್ಟ್ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ತಮ್ಮ ಹಲವಾರು ಖಾಸಗಿ ಕಂಪೆನಿಗಳ ಮಿತ್ರರ ಸಹಾಯದಿಂದ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್) ಅಡಿ ಹಳಿಯಾಳ-ಜೋಯಿಡಾ ತಾಲೂಕಿನ ನೂರಾರು ಕೆರೆಗಳ ಹುಳೆತ್ತುವ ಮೂಲಕ ರೈತರಿಗೆ ಸಹಾಯ-ಸಹಕಾರ ನೀಡಿದ್ದು ಪ್ರಸಕ್ತ ಸಾಲಿನಲ್ಲಿ ಮತ್ತೇ 8 ಕ್ಕೂ ಅಧಿಕ ಕೆರೆಗಳ ಹುಳೆತ್ತುವ ಕಾರ್ಯ ಪ್ರಾರಂಭಿಸಿದೆ.
ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಕೆರೆಗಳಲ್ಲಿ ತೆಗೆದ ಹೂಳಿನ ಮಣ್ಣನ್ನು ರೈತರ ಹೂಲಗಳಿಗೆ ಸಾಗಿಸುವ ಮೂಲಕ ಕೆರೆಗಳ ಪುನರುಜ್ಜೀವನ ಕಾರ್ಯದಿಂದ ಕೆರೆಗಳಿಗೆ ಹೊಸ ಕಾಯಕಲ್ಪ ನೀಡಲಾಗಿದೆ. ಬಹುತೇಕ ಎಲ್ಲ ಕೆರೆಗಳಲ್ಲಿ ಮೇ ಕೊನೆವರೆಗೆ ನೀರು ಕಂಡು ಬಂದಿರುವುದು ಸಂತೋಷದ ವಿಚಾರ ಎಂದ ಅವರು ಇದರಿಂದ ಅಂರ್ತಜಲ ಹೆಚ್ಚಿಸಿದ್ದು, ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಗಾತ್ರ ಕೂಡ ವೃದ್ದಿಯಾಗಿದ್ದು, ರೈತರಿಗೆ ಮತ್ತು ಜಾನುವಾರಗಳಿಗೆ ತುಂಬಾ ಅನುಕೂಲಕರವಾಗಿದೆ ಎಂದು ಹೇಳಿದರು.
ಕಳೆದ ಸಾಲಿನಂತೆ ಈ ವರ್ಷವು ಕೂಡ ವಿಆರ್ಡಿಎಮ್ ಟ್ರಸ್ಟ್ ಮತ್ತು ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡ ಇವರ ಸಹಕಾರದಿಂದ ಹಳಿಯಾಳ ತಾಲೂಕಿನ ಬಂಟರಗಾಳಿ, ಸಾತ್ನಳ್ಳಿ, ಅರ್ಲವಾಡ ಕೆರೆಗಳನ್ನು ಹೂಳೆತ್ತಿದ್ದು, ಬೆಳವಟಗಿ ಮತ್ತು ತೆಗ್ನಳ್ಳಿ ಗ್ರಾಮಗಳ ಕೆರೆಗಳ ಹೂಳೆತ್ತುವ ಕಾರ್ಯ ಚಾಲನೆಯಲ್ಲಿದೆ ಇನ್ನೂ ಹೆಚ್ಚಿನ ಕೆರೆಗಳ ಹುಳೆತ್ತುವ ಕಾರ್ಯ ನಡೆಯಲಿದೆ ಎಂದರು.
ಈ ಕೆರೆಗಳನ್ನು ರೈತ ಸಮುದಾಯದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ರೈತರು ಕೆರೆಯ ಹೂಳನ್ನು ತಮ್ಮ ಹೊಲಗಳಿಗೆ ಸಾಗಿಸುತ್ತಿದ್ದಾರೆ. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಈ ಕೆರೆಗಳ ಹೂಳೆತ್ತುವ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದ ಪ್ರಭು ಈ ಸಂದರ್ಭದಲ್ಲಿ ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡದ ಹಿರಿಯ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ರೈತರೊಂದಿಗೆ ಸಮಾಲೋಚಿಸುತ್ತಿದ್ದು ರೈತರಿಗೆ ಸಹಕಾರಿಯಾಗಿದೆ ಎಂದರು.
ಈ ಕೆರೆಗಳ ಹೂಳೆತ್ತುವ ಕಾರ್ಯದಿಂದ ಅಂರ್ತಜಲ ಮಟ್ಟ ಸುಧಾರಿಸುವ ಜೊತೆಗೆ ಹಳಿಯಾಳ ತಾಲೂಕಿನ ಕೆರೆಗಳ ನೀರು ತುಂಬಿಸುವ ಕಾಳಿ ನದಿ ಯೋಜನೆಗೆ ಪೂರ್ವಕವಾಗಿ ಅನುಕೂಲಕರವಾಗಲಿದೆ ಎಂದು ವಿಆರ್ಡಿಎಂ ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾಹಿತಿ ನೀಡಿದರು.
Leave a Comment