ಹಳಿಯಾಳ:- ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 53ನೇ ಹುಟ್ಟು ಹಬ್ಬದ ಅಂಗವಾಗಿ ವೇದಿಕೆಯ ಹಳಿಯಾಳ ಘಟಕ 250 ಸಸಿಗಳನ್ನು ನೆಡುವುದರ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಹಳಿಯಾಳ ಘಟಕ ಅಧ್ಯಕ್ಷ “ಸುವರ್ಣಶ್ರೀ” ರಾಜ್ಯ ಪ್ರಶಸ್ತಿ ಪುರಸ್ಕøತ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಹಳಿಯಾಳ-ಅಳ್ನಾವರ ರಸ್ತೆಯಲ್ಲಿರುವ ಗುತ್ತಿಗೇರಿ ಕೆರೆಯ ಸುತ್ತಮುತ್ತಲು ವಿವಿಧ ತಳಿಯ ಸುಮಾರು 250 ಸಸಿಗಳನ್ನು ನೆಡುವ ಮೂಲಕ ತಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ವನಮಹೋತ್ಸವ ಅಂಗವಾಗಿ ಮತ್ತೇ ಪಟ್ಟಣದಲ್ಲಿ 250 ಸಸಿಗಳನ್ನು ನೆಡುವ ಯೋಜನೆ ಹೊಂದಿದ್ದು ಒಟ್ಟಾರೆ 500 ಸಸಿಗಳನ್ನು ನೆಡುವ ಯೋಜನೆ ರಕ್ಷಣಾ ವೇದಿಕೆಯದ್ದಾಗಿದ್ದು, ಇವುಗಳ ನಿರ್ವಹಣೆಯನ್ನು ವೇದಿಕೆ ಮಾಡಲಿದೆ ಎಂದು ಬಸವರಾಜ ತಿಳಿಸಿದ್ದಾರೆ.
ಈ ವನಮಹೋತ್ಸವ ಕಾರ್ಯಕ್ರಮಕ್ಕೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಚಾಲನೆ ನೀಡಿದರು. ಕರವೇ ಉಪಾಧ್ಯಕ್ಷ ಚಂದ್ರಕಾಂತ ದುರ್ವೆ, ಜೀಜಾಮಾತಾ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಮಂಗಲಾ ಕಶೀಲಕರ, ಲಯನ್ಸ್ ಕ್ಲಬ್ ಅಧ್ಯಕ್ಷ ಮಹಾಂತೇಶ ಓಶಿಮಠ, ಮಂಜು ಡ್ಯಾನ್ಸ್ ಅಕಾಡೆಮಿಯ ಪ್ರಾಂಶುಪಾಲ ಮಂಜುನಾಥ ಮಾದಾರ, ಶಿರಸ್ತೆದಾರ ಅನಂತ ಚಿಪ್ಪಲಕಟ್ಟಿ, ಅಭಿವೃದ್ದಿ ಚಿಂತಕ ಕಮಲ ಸಿಕ್ವೇರಾ, ಮಹಾಂತೇಶ ಓಶಿಮಠ ಸೇರಿದಂತೆ ಮೊದಲಾದವರು ಇದ್ದರು.
Leave a Comment