ಹಳಿಯಾಳ :- ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿರದ ಗ್ರಾಮ ಹಾಗೂ ವಾರ್ಡ ಸಭೆಯನ್ನು ಗ್ರಾಮಸ್ಥರು ತೀವೃವಾಗಿ ವಿರೋಧಿಸಿದ್ದರಿಂದ ತಾಲೂಕಿನ ಕೆರವಾಡ ಗ್ರಾಮದಲ್ಲಿ ಮಂಗಳವಾರ ನಡೆಯಬೇಕಿದ್ದ ಸಭೆಗಳು ರದ್ದಾಗಿರುವ ಘಟನೆ ನಡೆಯಿತು.
ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತಾಲೂಕಿನ ಹವಗಿ ಗ್ರಾಮ ಪಂಚಾಯತಗೆ ಬರುವ ಕೆರವಾಡ ಗ್ರಾಮದಲ್ಲಿ ಗ್ರಾಮ ಸಭೆ ಹಾಗೂ ವಾರ್ಡ ಈ 2 ಸಭೆಗಳನ್ನು ಆಯೋಜಿಸಲಾಗಿತ್ತು. ಸಭೆಯ ಕುರಿತು ಸರಿಯಾಗಿ ಮಾಹಿತಿಯನ್ನು ನೀಡದೆ ಕಾಟಾಚಾರಕ್ಕೆ ಸಭೆ ನಡೆಸುತ್ತಿರುವ ಕುರಿತು ಗ್ರಾಮಸ್ಥರು ಕಿಡಿ ಕಾರಿದರು.
ಆದರೇ ಸಭೆಗೆ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ನೀರು ಸರಬರಾಜು ಮಂಡಳಿಯವರು, ಸಿಡಿಪಿಓ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾರೊಬ್ಬರು ಆಗಮಿಸಿದ ಕಾರಣ ಆಕ್ರೊಶಗೊಂಡ ಗ್ರಾಮಸ್ಥರು ಎಲ್ಲ ಇಲಾಖೆಯವರು ಆಗಮಿಸಿದಾಗಲೇ ಗ್ರಾಮ ಹಾಗೂ ವಾರ್ಡ ಸಭೆ ಮಾಡಬೇಕೆಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಳೆಗಾಲ ಆರಂಭವಾದರು ಗ್ರಾಮದಲ್ಲಿ ಗಟಾರಗಳಲ್ಲಿನ ಹುಳು, ಕಲ್ಮಶ ತೆಗೆಯದೆ ಇರುವ ಕುರಿತು ಹಾಗೂ ಅಸಮರ್ಪಕ ಕುಡಿಯುವ ನೀರು ಸರಬರಾಜು ಕುರಿತು ಗ್ರಾಮಸ್ಥರು ಹವಗಿ ಪಂಚಾಯತ ಪಿಡಿಓ ಅನುಪಮಾ ಬೆನ್ನುರ ಹಾಗೂ ಕಾರ್ಯದರ್ಶಿ ಎನ್ ಎಮ್ ಧಾರವಾಡಕರ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಗ್ರಾಮದಲ್ಲಿ ಗಟಾರಗಳನ್ನು ಸ್ವಚ್ಚಗೊಳಿಸಬೇಕು ಹಾಗೂ ಸಮರ್ಪಕ ನೀರು ಸರಬರಾಜು ಮಾಡಿದ ಬಳಿಕವೇ ಗ್ರಾಮಸಭೆಗಳನ್ನು ನಡೆಸುವಂತೆ ಎಚ್ಚರಿಕೆಯನ್ನು ನೀಡಿದರು.
ಕೆರವಾಡ ಗ್ರಾಮದ ಗ್ರಾಮದೇವಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಶ್ವಿನಿ, ಕೆಇಬಿ ಅಧಿಕಾರಿ ಸೂರ್ಯವಂಶಿ, ಕೃಷಿ ಇಲಾಖೆಯ ದೇಸಾರ ಹಾಗೂ ಗ್ರಾಪಂ ಅಧ್ಯಕ್ಷೆ ಕಿರವ್ವಾ ಕೊರವರ, ಸದಸ್ಯರಾದ ಪ್ರಕಾಶ ಕೊರವರ, ಪಾಂಡುರಂಗ ಚಲವಾದಿ, ಮನೋಹರ ಅಂಗ್ರೊಳ್ಳಿ, ಪ್ರಿಯಾ ಲೋಹಾರ, ಮಾರುತಿ ಕಿತ್ತೂರಕರ, ಮಾಜಿ ಜಿಪಂ ಸದಸ್ಯ ಕೈತಾನ ಬಾರಬೋಜಾ, ಪ್ರಮುಖರಾದ ಹೊನ್ನಪ್ಪ ಗೌಡ, ವಿಠ್ಠಲ ಟೊಸುರ, ಮಹೇಶ, ಶಂಬಾಜಿ ಗೌಡಾ, ಉತ್ತಮ ಚಲವಾದಿ, ಶಾಂತಾರಾಮ ಟೊಸುರ ಮೊದಲಾದವರು ಇದ್ದರು.
Leave a Comment