ಹೊನ್ನಾವರ .À: ಮಹಿಳೆಯೊರ್ವಳ ಕತ್ತಿನಿಂದ ಮಾಂಗಲ್ಯ ಸರ ಎಗರಿಸಿದ್ದ ಆರೋಪಿಗಳು ಹೊನ್ನಾವರ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದÀÀ ಬಂಧಿತರಾಗಿದ್ದಾರೆ.
ತಾಲೂಕಿನ ಕೆಳಗಿನೂರು ಅಭಿತೋಟದ ನಿವಾಸಿ ಮನೋಜ ನಾಗರಾಜ ಶೇಟ್, ಗುಣವಂತೆ ಶಿವನಗರ ನಿವಾಸಿ ಪ್ರಮೋದ ನಾಗಪ್ಪ ನಾಯ್ಕ ಬಂಧಿತ ಆರೋಪಿಗಳು. ರವಿವಾರ ರಾತ್ರಿ ಪಟ್ಟಣದ ಗುಣಗುಣಿಕೇರಿ ನಿವಾಸಿ ಸವಿತಾ ಶೇಟ್ ಅವರು ಶರಾವತಿ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಶ್ರೀದೇವಿ ಆಸ್ಪತ್ರೆಯ ತಿರುವಿನಲ್ಲಿ ಅಪರಿಚಿತರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರು. ಈ ಕುರಿತು ಸವಿತಾ ಶೇಟ್ ಅವರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಪಿಐ ಚೆಲುವರಾಜು ಹಾಗೂ ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಕೃಷ್ಣ ಗೌಡ, ಅಶೋಕ ನಾಯ್ಕ, ವಿನಾಯಕ ನಾಯ್ಕ, ರಮಾನಂದ ನಾಯ್ಕ ತಂಡ ಘಟನೆ ನಡೆದ ಒಂದೂವರೆ ದಿನದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Leave a Comment