ಹಳಿಯಾಳ:- ತಾಲೂಕಿನ ಬಾಣಸಗೇರಿ ತೋಟಗಾರಿಕೆ ಕ್ಷೇತ್ರವನ್ನು ಮಾದರಿ ತೋಟಗಾರಿಕೆ ಕ್ಷೇತ್ರವನ್ನಾಗಿ ಪರಿವರ್ತಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ ಬಾಣಸಗೇರಿ ತೋಟಗಾರಿಕೆ ಕ್ಷೇತಕ್ಕೆ 23.91ಲಕ್ಷ ಅನುದಾನ ಮಂಜೂರಾಗಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2019-20ನೇ ಸಾಲಿನಲ್ಲಿ ನಬಾರ್ಡ ಬ್ಯಾಂಕನ ಐಆರ್ಡಿಎಫ್ 23 ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಅನುದಾನ ಯೋಜನೆಯಡಿಯಲ್ಲಿ ಈ ಅನುದಾನ ಮಂಜೂರಿಯಾಗಿದೆ ಎಂದಿರುವ ಅವರು ಈ ಅನುದಾನದಲ್ಲಿ ಬಾಣಸಗೇರಿ ತೋಟಗಾರಿಕೆ ಕ್ಷೇತ್ರವನ್ನು ಮಾದರಿ ತೋಟಗಾರಿಕೆ ಕ್ಷೇತ್ರವನ್ನಾಗಿ ಪರಿವರ್ತಿಸಲು ಅವಕಾಶವಿದ್ದು, ಇದರಲ್ಲಿ ಕ್ಷೇತ್ರಕ್ಕೆ ಬೇಕಾದ ಬೊರವೆಲ್ ಪೈಪಲೈನ್, ಹಸಿರುಮನೆ ನಿರ್ಮಾಣ, ಮಾವು ವಂಶಾವಳಿ ತಾಕು ಮತ್ತು ಮಾವು ಸಸ್ಯಾಭಿವೃದ್ಧಿ ಹಾಗೂ ಕ್ಷೇತ್ರದ ಪಾಲನೆ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಬಹುದಾಗಿರುತ್ತದೆ.
ಇದೊಂದು ಮಹತ್ವಪೂರ್ಣ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
Leave a Comment