ಹಳಿಯಾಳ:- ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು, ಅಂತಹಜ್ಞಾನ ಸಂಪತ್ತು ಹೆಚ್ಚು ಹೆಚ್ಚು ಓದುವುದರಿಂದ ವೃದ್ಧಿಯಾಗುತ್ತದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲಿನ ಪೀಠಾಧೀಶರಾದ ಗುರು ಮಹಾಂತಸ್ವಾಮಿಗಳು ಹೇಳಿದರು.
ಅವರು ಶ್ರೀ ವಿಜಯ ಮಹಾಂತೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿರುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವ ದೆಹಲಿ ಹಾಗೂ ಬೆಳಗಾವಿಯ ಸೇವಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಗೊಂಬೆಗಳ ಮೂಲಕ ವಿಜ್ಞಾನಕಲಿಕೆ” ಕಾರ್ಯಗಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಳಿಯಾಳದ ಚಿಬ್ಬಲಗೇರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗೊಂಬೆಯಾಟ ಖ್ಯಾತಿಯ ಸಿದ್ದಪ್ಪ ಬಿರಾದಾರ ಬರೆದ “ಶಿಕ್ಷಣದಲ್ಲಿ ಗೊಂಬೆಗಳು” ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಶಿಕ್ಷಕ ಸಿದ್ದಪ್ಪ ಬಿರಾದಾರ ಬರೆದ “ಶಿಕ್ಷಣದಲ್ಲಿ ಗೊಂಬೆಯಾಟ” ಪುಸ್ತಕ ಶಿಕ್ಷಕರಿಗೆ ತುಂಬಾ ಉಪಯುಕ್ತವಾಗಿದ್ದು ಅವರು ತಮ್ಮ ಪರಿಣಾಮಕಾರಿಯಾದ ಪಾಠ ಬೋಧನೆಗೆ ತಾವೇ ತಯಾರಿಸಿದ ಗೊಂಬೆಗಳು ಎಷ್ಟು ಸಹಕರಿಸಿವೇ ಎಂಬ ಅನುಭವವಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ. ಅವರು ಕಂಡುಕೊಂಡ ವಿನೂತನ ಮಾರ್ಗದ ಕೈಪಿಡಿ ಇದಾಗಿದ್ದು ಎಲ್ಲ ಶಿಕ್ಷಕರಿಗೆ ಮಾದರಿಯಾಗಲಿದೆ ಎಂದ ಮಹಾಂತಸ್ವಾಮಿಗಳು ಬಿರಾದಾರ ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಮಹಾಂತೇಶ್ವರ ವಿದ್ಯಾವರ್ಧಕ ಸಂಘದಚೇರಮನ್ನಎಮ್ ಜಿ ಪಟ್ಟಣಶೆಟ್ಟರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಯಲಾಟಅಕಾಟೆಮಿಯರಿಜಿಸ್ಟ್ರಾರ್ಆದ ಶಶಿಕಲಾ ಹುಡೇದ “ವಿಜ್ಞಾನಕಲಿಕೆಯಲ್ಲಿ ಸಂಪ್ರದಾಯದಲ್ಲಿ ಗೊಂಬೆಗಳು” ಎಂಬ ವಿಷಯದಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಸೇವಕ ಸಂಸ್ಥೆಯ ಮುಖ್ಯಸ್ಥಆನಂದ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ನಜಿಲ್ಲಾಅಧ್ಯಕ್ಷ ಮಹಾಂತೇಶಗಜೇಂದ್ರಗಡ ಪುಸ್ತಕದ ಪರಿಚಯ ಮಾಡಿದರು. ಸಂಸ್ಥೆಯಉಪಾಧ್ಯಕ್ಷ ಎ ಎನ್ಕನ್ನೂರ, ಪ್ರಧಾನ ಕಾರ್ಯದರ್ಶಿ ಡಿ ಎನ್ದೇವಗಿರಿಕರ,ಎಸ್ಆರ್ಕಂಟಿ ಶಿಕ್ಷಣ ಮಹಾ ವಿದ್ಯಾಲಯದಅಧ್ಯಕ್ಷ ಬಿ ಎಮ್ಕಬ್ಬಿಣದ, ನಿನಾಸಂ ಕಲಾವಿದಗಣೇಶ ಹೆಗ್ಗೋಡರಂಗಾಯಣದರಂಗನಿರ್ದೇಶಕಿ ಸುನಂದಾ ನಿಂಬನಗೌಡರ. ಕಲಾವಿದ ಸಿದ್ದಪ್ಪ ಬಿರಾದಾರ ಉಪಸ್ಥಿತರಿದ್ದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯಡಾ.ಜಿ ಸಿ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾತಿಸಿದರು. ಡಾ.ಆರ್ ಕೆ ಕುಲಕರ್ಣಿಕಾರ್ಯಕ್ರಮ ನಿರ್ವಹಿಸಿದರು.
Leave a Comment