ಹಳಿಯಾಳ :- ರಸ್ತೆಯ ಮೇಲೆ ಇಕ್ಕೆಲಗಳಿಗೆ ತಾಗಿ ತುಂಬಿ ನಿಂತಿರುವ ನೀರು. ಇದು ರಸ್ತೆಯೋ ಅಥವಾ ನದಿಯೋ ಎಂಬ ಪ್ರಶ್ನೇ ಇಲ್ಲಿ ಸಂಚಾರ ಮಾಡುವವರು ಕೇಳುತ್ತಾರೆ. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಗಟಾರವಿಲ್ಲದೇ ರಸ್ತೆಯೇ ನದಿಯಂತಾಗಿರುವ ಚಿತ್ರಣ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲಾ ಪ್ರದೇಶದಲ್ಲಿ ಕಾಣ ಸಿಗುತ್ತದೆ.
ಪಟ್ಟಣದ ಬಸವನಗಲ್ಲಿ, ದೇಸಾಯಿಗಲ್ಲಿ ಸನಿಹವಿರುವ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಪ್ರದೇಶದಲ್ಲಿ ಸರ್ಕಾರದ ಪ್ರವಾಸಿ ಮಂದಿರಗಳು, ಕೊಟೆ ಉದ್ಯಾನವನ, ಮಲ್ಲೀಕಾರ್ಜುನ ದೇವಸ್ಥಾನ, ಮಸೀದಿ ಇದೆ ಅಲ್ಲದೇ ತಿಮ್ಮಾಪುರ, ಕಳಸಾಪುರ ಗ್ರಾಮಗಳಿಗೆ ತೆರಳಲು ರಸ್ತೆಯು ಇದ್ದು ಇವೆಲ್ಲದಕ್ಕೂ ತೆರಳಲು ಇದೊಂದೆ ರಸ್ತೆ ಮಾರ್ಗವಾಗಿದೆ.
ಆದರೇ ಮಳೆಗಾಲದಲ್ಲಿ ಮಾತ್ರ ಇಲ್ಲಿಯ ಚಿತ್ರಣವೇ ಬದಲಾಗಿರುತ್ತೇ. ಬಾಕಿ ಸಮಯದಲ್ಲಿ ಕಾಣ ಸಿಗುವ ರಸ್ತೆ ಮಳೆಗಾಲದಲ್ಲಿ ಮಾಯವಾಗಿ ನದಿಯಂತಾಗಿರುತ್ತದೆ. ಇಲ್ಲಿ ನೀರು ಮುಂದೆ ಸಾಗಲು ಗಟಾರ ವ್ಯವಸ್ಥೆ ಇಲ್ಲದೇ ನೀರೆಲ್ಲ ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ತೀವೃ ಅಡಚಣೆ, ಕಿರಿಕಿರಿ ಉಂಟಾಗುತ್ತದೆ. ಆದರೇ ಸಂಬಂಧಪಟ್ಟ ಇಲಾಖೆಯವರಿಗೆ ಇಲ್ಲಿ ಸಂಚರಿಸುವ ಜನತೆ ಹಾಗೂ ಪಟ್ಟಣದ ಹಲವಾರು ಸಂಘಟನೆಯವರು ದೂರಿದರು ಸಹ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮಾತ್ರ ವಿಪರ್ಯಾಸವೇ ಸರಿ.
ಸದ್ಯ ಈ ಸಮಸ್ಯಯನ್ನು ಕೂಡಲೇ ಪರಿಹರಿಸಿ ರಸ್ತೆಯ ಮೇಲೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಇಲ್ಲದಿದ್ದರೇ ಸಂಬಂಧ ಪಟ್ಟ ಇಲಾಖೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ನೀಡಿದ್ದಾರೆ.
Leave a Comment