ಹೊನ್ನಾ ವರ . ಇಂದಿನ ಆಧುನಿಕ ಯುಗದಲ್ಲಿ ಬೆವರು ಸುರಿಸಿ, ಕಷ್ಟಪಟ್ಟು ಜೀವನ ಮಾಡಿ ಉಣ್ಣುವರೇ ಇತ್ತಿಚಿನ ದಿನದಲ್ಲಿ ತುಂಬಾ ವಿರಳ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಪಾದನೆ ಅಥವಾ ಹಣ ಮಾಡುವ ಸುಲಭ ಉಪಾಯಗಳು ಇಂದಿನ ವರ್ತಮಾನ ಪತ್ರಿಕೆಯಲ್ಲಿ ಹಾಗೂ ಮಾಧ್ಯಮಗಳಲ್ಲಿ ದಿನ ಬೆಳಗಾಗುವಂತೆ ಕಾಣುವುದು ಸಹಜವಾಗಿದೆ.
ಆದರು ಸಹ ನಮ್ಮ ಸಮಾಜದಲ್ಲಿ ಬೇರೆಯವರ ಆಸ್ತಿಗೆ, ಹಣಕ್ಕೆ ಅಥವಾ ಬೇರೆಯವರಿಗೆ ಮೋಸ ಮಾಡುವುದು. ಜೊತೆಗೆ ಬೇರೆಯವರ ವಸ್ತು ಸಿಕ್ಕಿದಾಗ ಪ್ರಾಮಾಣಿಕವಾಗಿ ಸಂಬಂಧಪಟ್ಟ ಜನರಿಗೆ ಅಲ್ಲದೆ ಹತ್ತಿರದ ಪೋಲಿಸ್ ಠಾಣೆಗೆ ಮುಟ್ಟಿಸುವ ಜನರು ನಮ್ಮ ಸಮಾಜದಲ್ಲಿ ಈಗಲೂ ಇದ್ದಾರೆ. ಇವರ ವ್ಯಕ್ತಿತ್ವದಿಂದ ಇವರ ಪ್ರಮಾಣಿಕತನ ಸ್ವಲ್ಪ ಮಟ್ಟಿಗೆ ಇದೆಯೆಂಬುದು ಎದ್ದು ಕಾಣುತ್ತದೆ. ಇವರಿಂದ ನಾವು ಸಹ ಪ್ರಾಮಾಣಿಕರಾಗಬೇಕೆಂಬುದು ಮುಖ್ಯವಾಗಿದೆ.
ಹೊನ್ನಾವರ ತಾಲೂಕಿನ ಪ್ರಭಾತನಗರದಲ್ಲಿ ವಾಸಿಸುವ ನಿಲನ್ ಮಿರಾಂದ ಶನಿವಾರ ರಾತ್ರಿ ತನ್ನ ಅಜ್ಜಿ ಮನೆಯಾದ ಗುಳಿಬೆಲೆ ಮೋಟೊಗೆ ಶರಾವತಿ ಕೊಂಕಣ ರೈಲ್ವೆ ಸೇತುವೆಯಿಂದ ಕಾಲ್ನಡಿಗೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಇವರ ಹಣದ ಪರ್ಸ ಅದರಲ್ಲಿದ್ದ 6400/- ಹಣ, ಎ.ಟಿ.ಎಂ. ಕಾರ್ಡ ಹಾಗೂ ಅಗತ್ಯವಿರುವ ದಾಖಲಾತಿ ಕಳೆದುಕೊಂಡಿರುತ್ತಾರೆ. ಅದೇ ರಾತ್ರಿ ಕೊಂಕಣ ರೈಲ್ವೆ ಸಿಬ್ಬಂದಿ ಗುಳಿಬೆಲೆ ಮೋಟೊ À ಬಸ್ತ್ಯಾಂವ್ ರುಪೆಲ್ ಲೋಪಿಸ್ ತನ್ನ ವೃತ್ತಿಯಲ್ಲಿರುವಾಗ ಅದೇ ಸೇತುವೆಯಿಂದ ಕಾಲ್ನಡಿಗೆಯಲ್ಲಿ ಬರುವ ಸಂದರ್ಭದಲ್ಲಿ ನೀಲನ್ ಇವರ ಪರ್ಸ್ ಸಿಕ್ಕಿದ್ದು ಇರುತ್ತದೆ. ಬಳಿಕ ಇದನ್ನು ಪರಿಶೀಲಿಸಿ ಪರ್ಸ್ ಕಳೆದುಕೊಂಡ ನೀಲನ್ ಮಿರಾಂದರವರಿಗೆ ಮುಟ್ಟಿಸಿ ಪ್ರಾಮಾಣಿಕತನ ಮೆರೆದ À ಬಸ್ತ್ಯಾಂವ್ ಲೋಪಿಸ್ ಕೊಂಕಣ ರೈಲ್ವೆ ಸಿಬ್ಬಂದಿ ತನ್ನ ಮಾನವಿಯತೆ ಮೆರೆದಿದ್ದಾರೆ.
Leave a Comment