ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಸುರಾನಾ ಕಾಲೇಜ್ ಆಫ್ ಎಂ.ಬಿ.ಎ. ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಎಂ.ಬಿ.ಎ. ಪ್ರವೇಶ ಪರೀಕ್ಷೆ ಬರೆಯುವ ಉತ್ತರ ಕನ್ನಡ ಜಿಲ್ಲೆಯ ಪದವಿದರರಿಗಾಗಿ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಲಾಯಿತು.
ಈಲ್ಲೆಯ ವಿಇವಧ ತಾಲೂಕುಗಳಿಂದ ಸುಮಾರು 50 ಪದವಿಧರರು ಆಗಮಿಸಿ ತರಬೇತಿ ಪಡೆದುಕೊಂಡರು. ಸುರಾನಾ ಕಾಲೇಜು ಸಂಪನ್ಮೂಲ ವ್ಯಕ್ತಗಳಾದ ಪ್ರೊ. ಪಾಷಾ ಮತ್ತು ಪ್ರೊ. ಗುರುರಾಜರವರುಗಳು ಪಿ.ಪಿ.ಟಿ. ಯ ಮುಖಾಂತರ ಮೆಂಟಲ್ ಎಬಿಲಿಟಿ, ಇಂಗ್ಲಿಷ್, ಸಾಮಾನ್ಯ ಜ್ಞಾನ ಮುಂತಾದ ವಿಷಯಗಳ ತರಬೇತಿ ನೀಡಿದರು.
ಆರಂಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಆಫಿಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನೂ ಸ್ವಾಗಿತಿಸಿದರು. ಎಂ.ಪಿ.ಇ. ಸೊಸೈಟಿಯ ಕಾರ್ಯದರ್ಶಿ ಎಸ್. ಎಂ. ಭಟ್ಟ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಆಗಮಿಸಿದ ಡಾ. ಸುಮಂಗಲಾ ನಾಯ ್ಕಮಾತನಾಡಿ ಇಂತಹ ತರಬೇತಿಗಳ ಪ್ರಯೋಜನವನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಪ್ರೊ. ಪಿ. ಎಂ. ಹೊನ್ನಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಕಾಂ. 5 ನೇ ಸೆಮ್ನ ಪ್ರತಿಭಾ ಹೆಗಡೆ ಪ್ರಾರ್ಥಿಸಿದರು. ಡಾ. ಶಿವರಾಮ ಶಾಸ್ತ್ರಿ ಸರ್ವರನ್ನೂ ವಂದಿಸಿದರು.
Leave a Comment