ಹಳಿಯಾಳ:- ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನದ ಪ್ರಯುಕ್ತ ಹಳಿಯಾಳ ಸಂಸ್ಥೆಯ ಆವರಣದಲ್ಲಿ ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಯಿತು.
ಶಿರಸಿ ಖ್ಯಾತ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆ ವೈದ್ಯ ಡಾ|| ವೆಂಕಟ್ರಮಣ ಹೆಗಡೆ ಉಧ್ಘಾಟಿಸಿ, ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸ್ವಾಸ್ಥ್ಯ ಸಂಬಂಧಿ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ಜೆ.ಡಿ. ಗಂಗಾಧರ, ಸÀದಸ್ಯರು, ಸಾಂಬ್ರಾಣಿ ಗ್ರಾಮ ಪಂಚಾಯತ ಅಧ್ಯಕ್ಷ ಇಂದಿರಾಕಾಂತ ಕಾಮಕರ ಹಾಗೂ ವಿ.ಆರ್.ಡಿ.ಎಮ್. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರರು ಇದ್ದರು.
Leave a Comment