ಹಳಿಯಾಳ:- ಮೌಢ್ಯತೆ ಹಾಸು ಹೊಕ್ಕಾಗಿರುವ ಸಮಾಜದಲ್ಲಿ ದೇವರ ಮೇಲೆ ನಂಬಿಕೆ ಇರಲಿ ಆದರೇ ಮೊಸ ಮಾಡುವ ಜನರೇ ತುಂಬಿರುವ ಈ ಕಾಲಘಟ್ಟದಲ್ಲಿ ಮಂತ್ರವಾದಿಗಳು, ಭಾನಾಮತಿ, ಮಾಟ- ಮಂತ್ರದವರ ಮೊರೆ ಹೊಗಿ ಮೊಸ ಹೊಗದಿರಿ ಎಂದು ‘ಪವಾಡ ಬಯಲು’ ಖ್ಯಾತಿಯ ಹುಲಿಕಲ್ ನಟರಾಜ ಕರೆ ನೀಡಿದರು.
ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಪಟ್ಟಣದ ಮಿಲಾಗ್ರಿಸ್ ಸಮುದಾಯ ಭವನದಲ್ಲಿ ನಡೆದ “ಪವಾಡ ಬಯಲು” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಮಂತ್ರವಾದಿಗಳು ಆಂತರಿಕ, ಮಾನಸಿಕ ಭಯೋತ್ಪಾದಕರಾಗಿದ್ದು ಸಮಾಜಕ್ಕೆ ಕಂಟಕರಾಗಿದ್ದಾರೆಂದು ಕಿಡಿ ಕಾರಿದರು.
ಮೊಬೈಲ್ ಚಾಟಿಂಗ್, ಧಾರಾವಾಹಿಗಳು, ಟಿಆರಪಿ ಆಸೆಗೊಸ್ಕರ ದೃಶ್ಯ ಮಾದ್ಯಮಗಳು ಇಲ್ಲಸಲ್ಲದ್ದನ್ನು ತೊರಿಸಿ ಸಮಾಜದ ಮೇಲೆ ದುಷ್ಪರಿಣಾಮ ಬಿರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾನವೀಯತೆಯೆ ಮಾಯವಾಗಿರುವ ಈ ಕಾಲದಲ್ಲಿ ವಿವೇಚಿಸುವಂತಹ, ಆಲೋಚನೆ ಮಾಡುವಂತಹ ಹಾಗೂ ಪ್ರಶ್ನೀಸುವಂತಹ “ಪ್ರಜ್ಞಾವಂತಿಕೆಯ ಸಮಾಜ” ನಿರ್ಮಾಣವಾಗಬೇಕಿದೆ ಎಂದು ಕರೆ ನೀಡಿದ ಅವರು ಸದೃಢ ದೇಹಕ್ಕಿಂತ ಸದೃಢ ಮನಸ್ಸು ಮುಖ್ಯ, ಪಂಚಾಗಕ್ಕಿಂತ ಪಂಚೆಂದ್ರಿಯಗಳ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಪಠ್ಯಪುಸ್ತಕಗಳಲ್ಲಿ ಬದುಕುವ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಮಕ್ಕಳನ್ನು ಪ್ರಿತಿಯಿಂದ ದೂರ ಮಾಡಲಾಗುತ್ತಿದೆ. ಮಕ್ಕಳ ತಲೆಯನ್ನು ಖಾಲಿ ಇರಲು ಬಿಡಬೇಡಿ ಮಕ್ಕಳೊಂದಿಗೆ ಬೆರೆತು ಇರುವಂತೆ ಪಾಲಕರಿಗೆ ಸಲಹೆ ನೀಡಿದ ಹುಲಿಕಲ್ ಅವರು ಭಕ್ತಿ ಸಕಾರಾತ್ಮಕ ಚಿಂತನೆಯಾಗಿದ್ದರೇ ಭಯ ಎನ್ನುವುದು ನಕಾರಾತ್ಮಕ ಚಿಂತನೆಯಾಗಿದೆ ಹೀಗಾಗಿ ಭಯವನ್ನು ಮನಸ್ಸಿನಿಂದ ಕಿತ್ತೊಗೆಯುವಂತೆ ಕರೆ ನೀಡಿದರು.
ಭಗವಾನ್ ಬುದ್ದರ ಅಹಿಂಸಾವಾದ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನ ವ್ಯವಸ್ಥೆ ಹಾಗೂ ಜಗದ್ಗುರು ಬಸವಣ್ಣನವರ ಕಾಯಕದ ಪಾಠ ಪ್ರಸ್ತುತ ಸಮಾಜದಲ್ಲಿ ಮತ್ತೇ ಬೇಕಿದೆ ಅವರಂತಹ ಮಹಾನ್ ಪುರುಷರು ಮತ್ತೇ ಜನ್ಮ ತಾಳಬೇಕಿದೆ ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರು.
ವೇದಿಕೆಯ ಮೇಲೆ ವಿಆರ್. ಡಿಎಮ್ ಟ್ರಸ್ಟ್ನ ಧರ್ಮದರ್ಶಿಗಳಾದ ಪ್ರಸಾದ ದೇಶಪಾಂಡೆ, ಆರ್ಸೆಟ್ನ ವಿನಾಯಕ ಚವ್ವಾಣ, ಟ್ರಸ್ಟ್ನ ಶ್ರೀಪಾದ ಮಾನಗೆ, ಸಂಜೀವ ಜೋಶಿ ಮೊದಲಾದವರು ಇದ್ದರು.
Leave a Comment