ಹೊನ್ನಾವರ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ವೆಸ್ಟ್ಕೋಸ್ಟ್ ಪೇಪರ ಮಿಲ್ ದಾಂಡೇಲಿಯವರ ಪ್ರಾಯೋಜತ್ವದಲ್ಲಿ ‘ವಾಯು ಮಾಲಿನ್ಯವನ್ನು ಹಿಮ್ಮೆಟ್ಟಿಸಿ’ ಎಂಬ ವಿಷಯದಲ್ಲಿ ತಾಲೂಕಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಚಿತ್ರ ಬಿಡಿಸುವ ಸ್ಪರ್ಧೆ ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ವಾರ ಪತ್ರಿಕೆಯ ಪ್ರಧಾನ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮುಖ್ಯಾಧ್ಯಾಪಕ ಎಲ್.ಎಮ್. ಹೆಗಡೆ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಸುಧೀಶ ನಾಯ್ಕ ಹಾಗೂ ನ್ಯೂ ಇಂಗ್ಲೀಷ್ ಸ್ಕೂಲಿನ ನಿವೃತ್ತ ಶಿಕ್ಷಕ ಬಿ.ಜೆ. ನಾಯ್ಕ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೀಮಾ ಭಟ್ಟ ಬಹುಮಾನ ಯಾದಿ ಓದಿದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಯಾ ಗೌಡ ವಂದಿಸಿದರು.
ಫಲಿತಾಂಶ : ಪ್ರಥಮ – ವಿಶಾಲ ವಿನೋದ ನಾಯ್ಕ, ದ್ವಿತೀಯ – ಭಗತ್ರಾಜ್ ಡಿ. ಗುನಗ, ತೃತೀಯ – ಮೇಘನಾ ಹನುಮಂತ ನಾಯ್ಕ, 4ನೇ ಸ್ಥಾನ – ಆಕಾಶ ಸುಬ್ರಾಯ ಹರಿಕಾಂತ, 5ನೇ ಸ್ಥಾನ – ಪಡೆದರು.
Leave a Comment