ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಕಳೆದ ಸಭೆಯ ಠರಾವಿನಲ್ಲಿ ಬಜೆಟ್ ಮಂಡನೆಯ ವಿಷಯ ಇಲ್ಲದೇ ಇರುವುದಕ್ಕೆ ಸದಸ್ಯರು ಆಕ್ರೊಶ ವ್ಯಕ್ತಪಡಿಸಿ ಸಭೆ ನಡೆಸುವುದು ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳು ಮುಂದೆ ಈ ರೀತಿ ಸನ್ನಿವೇಶ ನಿರ್ಮಾಣವಾಗದೇಂತೆ ನೋಡಿಕೊಳ್ಳುತ್ತೆವೆ ಎಂದು ಭರವಸೆ ನೀಡಿದರು.ನಂತರ ಇಲಾಖಾವಾರು ಚರ್ಚೆಯಲ್ಲಿಕಂದಾಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವಿವರ ನೀಡುತ್ತಿದ್ದಂತೆ ಆಧಾರ ಕಾರ್ಡ್ ಪಡೆಯಲು ಜನರು ಹೆಣಗಾಡುತ್ತಿರುವದಕ್ಕೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ, ಹೊನ್ನಾವರ ಮತ್ತು ಮಂಕಿಯಲ್ಲಿ ಆಧಾರ್ ಕಾರ್ಡ್ ನೀಡಲಾಗುತ್ತಿದೆ.
ಹಡಿನಬಾಳ ಕೇಂದ್ರದಲ್ಲಿ ಕೆಟ್ಟುಹೋಗಿದ್ದ ಯಂತ್ರೊಪರವನ್ನು ಸರಿಪಡಿಸಲಾಗುತ್ತಿದೆ ಎಂದರು. ಜನರು ಗ್ರಾಮೀಣ ಭಾಗದಿಂದ ಬಂದು ಇಡೀದಿನ ಸರತಿ ಸಾಲಿನಲ್ಲಿ ನಿಂತರೂ ಆಧಾರ್ ಕಾರ್ಡ್ ದೊರೆಯುತ್ತಿಲ್ಲ. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಸಾಲಿನಲ್ಲಿ ನಿಲ್ಲುತ್ತಾರೆ. ಆಧಾರ್ಕಾರ್ಡ್ ಪಡೆಯಲು ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಟಿಸಿ ಕಡ್ಡಾಯ ಎಂದು ಹೇಳುತ್ತಾರೆ. ಅನಕ್ಷರಸ್ಥರು, ಬಡವರು ಸಮಸ್ಯೆ ಎದುರಿಸುತ್ತಿದ್ದಾರೆ ಬೊಗಸ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದವರಿಗೆ ತುಂಬಾ ತೊಂದರೆಯಾಗಿದೆ. ಜನಪ್ರತಿನಿಧಿಗಳಿಗೆ ದೂಸಿಸುತ್ತಿದ್ದಾರೆ. ಜನಸಾಮಾನ್ಯರಿಗೆ ನಾವು ಉತ್ತರಿಸಲಾಗುತ್ತಿಲ್ಲ. ಈ ಬಗ್ಗೆ ಒಂದು ನಿರ್ಣಯ ಕೈಗೊಳ್ಳಬೇಕು ನಾವೆಲ್ಲರು ಸೇರಿ ಡಿಸಿಯವರ ಜೊತೆಗೆ ಸಮಾಲೋಚಿಸಲು ನಿಯೋಗ ಹೋಗೋಣ ದಿನಾಂಕ ನಿರ್ಧರಿಸಿ ಎಂದು ಅಧ್ಯಕ್ಷರಿಗೆ ಸದಸ್ಯರಾದ ಅಣ್ಣಯ್ಯ ನಾಯ್ಕ ಮತ್ತು ಗಣಪಯ್ಯ ಗೌಡ ತಾಕೀತು ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದಲ್ಲಿ ಇನ್ನೊಂದು ಕೌಂಟರ್ನ್ನು ಸ್ಥಾಪಿಸಿ ಮತ್ತು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಧಾರ್ ಕಾರ್ಡ್ ಸಿಗುವಂತೆ ಮಾಡಬೇಕು. ೪೦-೫೦ ವರ್ಷಗಳ ವಯಸ್ಸಿನವರು ಆಧಾರ್ ಕಾರ್ಡ್ ಮತ್ತು ವೃದ್ದಾಪ್ಯ ಯೋಜನೆಗೆ ಜನ್ಮ ದಾಖಲೆ ಪಡೆಯಲು ಪರದಾಡುತ್ತಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸದಸ್ಯ ಆರ್.ಪಿ ನಾಯ್ಕ ಪ್ರಸಾಪಿಸಿದಾಗ ತಾ.ಪಂ.ಅಧ್ಯಕ್ಷ ಉಲ್ಲಾಸ ನಾಯ್ಕ ಕಂದಾಯ ಅಧಿಕಾರಿಗೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಚೀಟಿ ಪಡೆಯಲು ಮತ್ತು ಔಷಧ ಪಡೆಯಲು ಜನರು ತಾಸುಗಟ್ಟಲೆ ಸಮಯ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ಆಸ್ಪತ್ರೆಗೆ ಬೆಳಿಗ್ಗೆ ಹೋದ ರೋಗಿಗಳು ಮಧ್ಯಾಹ್ನದವರೆಗೆ ನಿಲ್ಲುತ್ತಿದ್ದಾರೆ, ರೋಗಿಗಳಿಗೆ ಹಿಂಸೆಯಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಕಾರ್ಯವೈಖರಿ ಕುರಿತು ಸದಸ್ಯ ಅಣ್ಣಯ್ಯ ನಾಯ್ಕ ಆಕ್ಷೆಪಿಸಿದರು. ರೋಗಿಗಳಿಗೆ ಈ ರೀತಿ ಸತಾಯಿಸಬಾರದು. ಅಧಿಕಾರಿಯಾಗುವ ಮೊದಲು ಮಾನವರಾಗಿ ಎಂದು ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಿಕ್ಷಣ ಇಲಾಖೆ ಕುರಿತ ಚರ್ಚೆಯಲ್ಲಿ ಸದಸ್ಯ ಲೊಕೇಶ್ ನಾಯ್ಕ ಮಾತನಾಡಿ ವೃದ್ದಾಪ್ಯ ವೇತನ ಸೌಲಭ್ಯ ಪಡೆಯಲು ಶಾಲಾ ದೃಢಿಕರಣ ಪತ್ರ ಅವಶ್ಯ ಎಂದು ಸೂಚಿಸುತ್ತಾರೆ. ಆದರೆ ಕೆಲ ಶಾಲೆಗಳಲ್ಲಿ ದಾಖಲೆಗಳೆ ಮಾಯವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳು ಪರ್ಯಾಯ ವ್ಯವಸ್ಥೆ ಏನು? ಎಂದು ಇಲಾಖಾ ಅಧಿಕಾರಿಗಳಿಗೆ ಪ್ರಶ್ನಿಸಿದರು. ಬಿಇಒ ಅಶೋಕ್ ಭಜಂತ್ರಿ ಉತ್ತರಿಸಿ ಇಂತಹ ಘಟನೆಗಳು ನಮ್ಮ ಗಮನಕ್ಕು ಬಂದಿದೆ. ನಮ್ಮಿಂದ ಯಾವುದೇ ದಾಖಲೆ ಸೃಷ್ಠಿಸಲಾಗದು. ದಾಖಲೆಗಳು ಇಲ್ಲವೆಂದು ಬರೆದುಕೊಡಲಾಗುವುದು ಎಂದರು.ಸರ್ಕಾರದ ಕೆಲವೊಂದು ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಇಚ್ಚಾಶಕ್ತಿ ತೋರಬೇಕು. ಪ್ರತಿಯೊಂದು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೀವು ಸಹಕರಿಸಬೇಕು ಎಂದು ಅಧ್ಯಕ್ಷ ಉಲ್ಲಾಸ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು. ೧೫ಕ್ಕೂ ಹೆಚ್ಚು ಅಧಿಕಾರಿಗಳು ಗೈರಾಗಿರುವುದು ಸಭೆ ಮಾಡಲಾಗಿತ್ತು. ಪ್ರತಿ ಬಾರಿಯಂತೆ ಆರಂಭದಲ್ಲಿ ಗೂರು ಹಾಜರಿ ಬಗ್ಗೆ ಚರ್ಚೆ ಮಾಡಿ ನಂತರ ಬಿಡಲಾಯಿತು. ಕಳೆದ ೬ ಸಭೆಗೆ ಸತತವಾಗಿ ಅಬಕಾರಿ ಇಲಾಖೆ ಗೈರಾದರೆ ಸಭೆಗೆ ಹಲವು ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾಗಿದ್ದವು. ತಾಲೂಕಿನ ಹಲವಡೆ ಇದ್ದ ರಸ್ತೆ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಿದ್ದ ಸಭೆ ಅಧಿಕಾರಿಗಳ ಗೈರಾಗಿರುವುದರಿಂದ ಸಮಸ್ಯೆಗೆ ಉತ್ತರವೇ ಸಿಗಲಿಲ್ಲ. ಕೃಷಿ, ಸಮಾಜ ಕಲ್ಯಾಣ, ಬಂದರು, ಸಾರಿಗೆ ಶಿಶು ಅಭಿವೃದ್ಧಿ ಮತ್ತಿತರ ಇಲಾಖೆಗಳ ಪ್ರಗತಿಯ ಕುರಿತು ಚರ್ಚೆ ನಡೆಯಿತು. ಉಪಾಧ್ಯಕ್ಷೆ ಲಲಿತಾ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಇರ್ಷಾದ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
Leave a Comment