ಖಾನಾಪುರ: ತಾಲೂಕಿನ ಲಿಂಗನಮಠದ ಹತ್ತಿರವಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಕಳೆದ ೯-೧೦ ವರ್ಷಗಳ ನಂತರ ಮತ್ತೆ ಸಂಪೂರ್ಣ ಭರ್ತಿಯಾಗಿದೆ.
ಸುಮಾರು ೯-೧೦ವರ್ಷಗಳ ಹಿಂದೆ ಈ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷದಲ್ಲಿ ಜೂನ್ ೧೦ರ ವೆರೆಗೆ ಏನೂ ಮಳೆ ಆಗದೇ ಇರುವುದರಿಂದ ರೈತರು ಮತ್ತು ಜನರು ಆತಂಕ ರೈತರು ಮತ್ತು ಜನರು ಆತಂಕ ಕ್ಕೆ ಒಳಗಾಗಿದ್ದರು. ಆದರೆ ಜೂನ್ ೧೦ರ ನಂತರ ಮಳೆಗಾಲ ಆರಂಭವಾಗಿ ಈಗ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ *130ಹೆಕ್ಟರ್* ವಿಸ್ತೀರ್ಣದ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೆರೆಯ ಪಾಳಿ(ಕೊಡಿ) ಮೇಲಿಂದ ಅಂದಾಜು 2-3 ಅಡಿಗಳಷ್ಟು ನೀರು ಹರಿಯುತ್ತಿದೆ. ಇಂದಿರಮ್ಮನ ಕೆರೆಯ ಪಾಳಿ(ಕೊಡಿ) ಮೇಲಿಂದ ನೀರು ಹರಿಯುತ್ತಿದನ್ನು ಕಂಡು ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ. ಈ ಕೆರೆಯ ನೀರು ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯಲು ಆಧಾರವಾಗಿದ್ದು. ಜೋತೆಗೆ ಅಂದಾಜು ಸಾವಿರಾರು ಎಕರೆ ಭೂಪ್ರದೇಶದ ಬೆಳೆ ಬೆಳೆಯಲು ತುಂಬಾ ಅನುಕೂಲಕರವಾಗಿದೆ.
Leave a Comment