
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದ ಬೆಂಗಳೂರಿನ ಅವರ ಸ್ನೇಹಿತರಿಂದ ಹಳಿಯಾಳದ ಪ್ರವಾಹ ಪಿಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ನೆರವು ದೊರತಿದ್ದು 2 ಲೋಡಗಳಷ್ಟು ಮೇವು ಸ್ವತಂತ್ರೋತ್ಸವ ದಿನದಂದು ಹಳಿಯಾಳ ಪಟ್ಟಣ ತಲುಪಿದೆ.
ಸಂಸದರು ಮೊನ್ನೆಯಷ್ಟೇ ಹಳಿಯಾಳದ ನೆರೆ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು ಅಲ್ಲದೇ ಹಳಿಯಾಳ-ದಾಂಡೇಲಿ-ಜೋಯಿಡಾ 3 ತಾಲೂಕುಗಳ ಅಧಿಕಾರಿಗಳ ಸಭೆ ಕರೆದು ನೆರೆ ಸಂತ್ರಸ್ಥರು ಸೇರಿದಂತೆ ಜಾನುವಾರುಗಳಿಗೂ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದ್ದರು.
ಸಭೆಯಲ್ಲಿ ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆಯ ಡಾ.ನದಾಫ ಅವರು ಜಾನುವಾರುಗಳಿಗೆ ಮೇವಿನ ಕೊರತೆ ಇದ್ದು ಮೇವು ಪೂರೈಸುವಂತೆ ಮನವಿ ಮಾಡಿದ್ದರು. ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸಂದರಲ್ಲಿ ಈ ಕುರಿತು ಆಗ್ರಹಿಸಿದ್ದರು. ಇದಕ್ಕೆ 2 ದಿನಗಳಲ್ಲೇ ಸ್ಪಂದಿಸಿರುವ ಸಂಸದರು ಅವರ ಬೆಂಗಳೂರಿನ ಸ್ನೇಹಿತರಿಗೆ ಹಳಿಯಾಳದಲ್ಲಿ ಮೇವಿನ ನೆರವು ನೀಡುವಂತೆ ಕೆಳಿಕೊಂಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿರುವ ಬೆಂಗಳೂರಿನ ನಾಯ್ಡು ಫಾರ್ಮನ ಗೋಪಾಲ ನಾಯ್ಡು, ಕಾಂತಿ ಸ್ವೀಟ್ಸ್ನ ಶೈಲೆಶ್ ಶರ್ಮಾ, ಹಾಲಿನ ವ್ಯಾಪಾರಸ್ಥರಾದ ಆರ್.ಸುರೇಶ ಬಾಬು, ನಾಗೇಂದ್ರಕುಮಾರ, ರಮೇಶ, ಚಂದ್ರಪ್ಪಾ ಅವರುಗಳು ತಮ್ಮ ಸ್ವಂತ ಹಣದಿಂದ ನೆರೆ ಸಂತ್ರಸ್ಥರ ಪ್ರದೇಶದ ಜಾನುವಾರುಗಳಿಗೆ ರಾಗಿ ಹುಲ್ಲು(ಒಣ ಮೇವು) 5 ಟನ್, ಮುಸುಕಿನ ಜೋಳದ ಹಸಿ ಕಡ್ಡಿಗಳು-12 ಟನ್ ಹಾಗೂ ಬೂಸಾ(ತೌಡು) 100 ಬ್ಯಾಗಗಳನ್ನು ಬೆಂಗಳೂರು ಸುತ್ತಮುತ್ತಲ ಪ್ರದೇಶದಿಂದ ಖರೀದಿಸಿ 3 ವಾಹನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಬೂಸಾವನ್ನು ನೀಡಿ ಬಳಿಕ ಸಂಸದ ಅನಂತಕುಮಾರ ಅವರ ಮನವಿಯ ಮೆರೆಗೆ ಹಳಿಯಾಳಕ್ಕೆ 1 ಟ್ರಕ್ ಮುಸುಕಿನ ಜೋಳ ಹಸಿ ಕಡ್ಡಿ ಹಾಗೂ 1 ಲಾರಿ ರಾಗಿ ಹುಲ್ಲಿನ ನೆರವನ್ನು ರೈತರಿಗೆ ನೀಡಿದ್ದಾರೆ.
ಸ್ವಾತಂತ್ರೋತ್ಸವ ದಿನವಾದ ಗುರುವಾರ ನೆರವು ನೀಡಿರುವ ಬೆಂಗಳೂರಿನ ಸುರೇಶಬಾಬು ಹಾಗೂ ಸ್ನೇಹಿತರು ಲಾರಿಗಳೊಂದಿಗೆ ಹಳಿಯಾಳಕ್ಕೆ ಆಗಮಿಸಿ ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಇವುಗಳನ್ನು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ಪಶು ಇಲಾಖೆಯ ಅಧಿಕಾರಿ ಡಾ. ನದಾಫ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇವಿನ ನೆರವು ನೀಡಿದ ಗೋಪಾಲ ನಾಯ್ಡು ಅವರು ಸಂಸದ ಅನಂತಕುಮಾರ ಹೆಗಡೆ ಹಾಗೂ ಹಳಿಯಾಳ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತೇ ಮೇವಿನ ನೆರವು ಬೇಕಾಗಿದೆ ಅಲ್ಲದೇ ನಿರಾಶ್ರಿತರಿಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ ಎಂದ ನಾಯ್ಡು ಬೆಂಗಳೂರಿನ ತಮ್ಮ ಸ್ನೇಹಿತರೊಂದಿಗೆ ಮತ್ತೇ ನೆರವು ನೀಡಲು ತಾವು ಸಿದ್ದವಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಪುರಸಭೆ ಸದಸ್ಯರಾದ ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಬಿಜೆಪಿ ಪ್ರಮುಖರಾದ ವಿಜಯ ಬೋಬಾಟಿ, ಯಲ್ಲಪ್ಪಾ ಹೊನ್ನೊಜಿ, ಹನುಮಂತ ಚಲವಾದಿ, ಅಜೋಬಾ ಕರಂಜೆಕರ, ಸಿದ್ದು ಶೇಟ್ಟಿ ಮೊದಲಾದವರು ಇದ್ದರು.
Leave a Comment