
ಹೊನ್ನಾವರ: ಸಪ್ಟೆಂಬರ್2ರಿಂದ ಆರಂಭವಾಗುವ ಗಣೇಶೊತ್ಸವ ಹಾಗೂ ಮೋಹರಂ ಹಬ್ಬದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಪಟ್ಟಣದ ಪ್ರತಿಭೋದಯದಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ಧಾರ ವಿವೇಕ ಶೇಣ್ವೆ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ಗನೇಶೊತ್ಸವವನ್ನು ಅದ್ದೂರಿಯಾಗಿ ಶಾಂತಿ ಭಂಗ ಬರದಂತೆ ಕಾನೂನಿನ ಇತಿಮಿತಿಯಲ್ಲಿ ಆಚರಿಸೋಣ, ಈ ಸಭೆಗೆ ಪ್ರತಿಯೊಂದು ಸಮಿತಿಯ ಸದಸ್ಯರು ಹಾಜರಾದಾಗ ಮಾತ್ರ ಸರ್ಕಾರದ ನಿಯಮಾವಳಿಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲು ಸಾಧ್ಯ. ಲಾಟರಿ ಮುಂತಾದ ಆಮಿಷ ಒಡ್ಡುವ ಸನ್ನೀವೇಶ ನಿರ್ಮಿಸದೇ, ಒತ್ತಾಯದ ದೇಣೆಗೆಯನ್ನು ಪಡೆಯದೇ ಭಕ್ತಿಪೂರ್ವಕವಾಗಿ ನೀಡಿದರೆ ಸ್ವೀಕರಿಸಿ. ಪರಿಸರ ಸ್ನೇಹಿ ಗಣಪತಿಯ ಮೂರ್ತಿ ಬಳಿಸಿ ಸ್ವಚ್ಚ ಪರಿಸರ ನಿರ್ಮಿಸೋಣ. ಗಣಪತಿ ವಿಸರ್ಜನೆ ಸೇರಿದಂತೆ ಸಮಿತಿಯ ಪೂರ್ಣ ಮಾಹಿತಿಯನ್ನು ಪೋಲಿಸರಿಗೆ ನೀಡಿ. ಮುಖ್ಯವಾಗಿ ಶೋಬಯಾತ್ರೆಯ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಿ ಪೋಲಿಸ್ ಇಲಾಖೆಯೊಂದಿಗೆ ಸಹಾಕಾರ ನೀಡುವಂತೆ ಕೇಳಿಕೊಂಡರು. ಇದೇ ನಿಯಮವನ್ನು ಮೊಹರಂನಲ್ಲಿಯೂ ಅನುಸರಿಸೋಣ ಎಂದರು.
ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ಸ್ವಚ್ಚಭಾರತದ ಸಮಾಜದ ಮಧ್ಯೆ ಇರುವ ನಾವು ಸಮಾಜದ ಒಳಿತನ್ನು ಗಮನಿಸಿ ಪ್ರತಿಯೋಂದು ಹಬ್ಬವನ್ನು ಆಚರಿಸಬೇಕಿದೆ. ಹಬ್ಬವನ್ನು ಅಹಂಕಾರದಿಂದ ಆಚರಿಸದೇ ಭಕ್ತಿಯಿಂದ ಆಚರಿಸೋಣ. ಮೋಹರಂ ಹಾಗೂ ಗಣೇಶೋತ್ಸವ ಶಾಂತಿ ಸೌಹಾರ್ದತೆಯಿಂದ ಇಡೀ ನಾಡಿಗೆ ಮಾದರಿಯಾಗುವಂತೆ ಆಚರಿಸೋಣ. ಯುವಸಮುದಾಯ ಈ ಬಗ್ಗೆ ಹೆಚ್ಚಿನ ಗಮನಹರಿಸಿಬೇಕಿದೆ ಎಂದರು.
ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಸಮಿತಿ ಸದಸ್ಯರು ಹಬ್ಬದ ಸಂದರ್ಭದಲ್ಲಿ ಉದ್ಬವಿಸಬಹುದಾದ ಕುಂದುಕೊರತೆಗಳಾದ ವಿದ್ಯುತ್ ಸಮಸ್ಯೆ, ಪಟ್ಟಣದ ರಸ್ತೆ ಬೀದಿದೀಪ ಹಾಗೂ ಗಣಪತಿ ವಿಸರ್ಜನೆ ಮಾಡುವಾಗ ಇರುವ ಸಮನ್ಯೆ ಬಗ್ಗೆ ಮಾಹಿತಿ ನೀಡಿ ಈ ಭಾರಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೇಳಿಕೊಂಡರು. ಇದಕ್ಕೆ ಆಯಾ ಇಲಾಖೆಯ ಅಧಿಕಾರಿಗಳು ಉತ್ತರಿಸಿ ಈ ಬಾರಿ ಕೈಗೊಂಡ ಕ್ರಮದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಪಿ.ಎಸೈ ಸಂತೋಷ ಕಾಯ್ಕಿಣಿ, ಕೈಂ ಪಿ.ಎಸೈ ಸಾವಿತ್ರಿ ನಾಯ್ಕ, ಕರಾವಳಿ ಕಾವಲುಪಡೆಯ ಮಂಜೇಶ ಚಂದಾವರ, ಅಗ್ನೀಶಾಮಕದಳದ ಯೋಗಿಶ್, ಹೆಸ್ಕಾ ವಿಭಾಗದ ರಾಧಾ ಭಟ್, ಉಪಸ್ಥಿತರಿದ್ದರು.
Leave a Comment