
ಹೊನ್ನಾವರ : ತಾಲ್ಲೂಕಿನ ಮುಗ್ವಾ ಸುಬ್ರಹ್ಮಣ್ಯದ ವಿಶ್ವನಾಥ ಹಾಗೂ ಸವಿತಾ ದಂಪತಿಗಳ ಪುತ್ರಿಯಾದ ಕುಮಾರಿ ರಕ್ಷಿತಾ ಕೊಡಿಯಾ ಇವಳು ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ.
ಹಿ. ಪ್ರಾ. ಶಾಲೆ ನಿರ್ವತ್ತಿಕೊಡ್ಲಿನಲ್ಲಿ ಏಳನೇ ತರಗತಿಯಲ್ಲಿ ಒದುತ್ತಿರುವ ಇವಳು ಜಿಲ್ಲಾ ಮಟ್ಟದಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಊರಿಗೆ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ.
ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲು ಆಶಕ್ತಿ ವಹಿಸಿ ಸಾಧನೆ ಮಾಡಬೇಕೆಂಬ ಹಂಬಲ ಇವಳನ್ನು ಚೆಸ್ ಆಟಗಾರ್ತಿಯನ್ನಾಗಿ ಮಾಡಿದೆ.
ಸಾಮಾನ್ಯ ಮದ್ಯಮ ವರ್ಗದ ಕುಟುಂಬದಿಂದ ಬಂದ ಇವಳಿಗೆ ಪಾಲಕರ ಶಾಲಾ ಶಿಕ್ಷಕರ ಸಹಕಾರವಿದೆ. ತಂದೆ ವಿಶ್ವನಾಥ ಕೊಡಿಯಾ ರವರು ಮಗಳು ರಾಜ್ಯ ಮಟ್ಟಕ್ಕೆ ಹೋಗುವ ಮುನ್ನ ಅನುಭವಿ ತರಬೇತಿ ದಾರರಿಂದ ತರಬೇತಿ ನೀಡುವ ಮನಸ್ಸು ಹೊಂದಿದ್ದು, ಮಗಳು ಇನ್ನು ಹೆಚ್ಚಿನ ತರಬೇತಿ ಪಡೆದು ರಾಜ್ಯ ಮಟ್ಟದಲ್ಲು ಆಯ್ಕೆಯಾಗಲಿ ಎಂಬ ಹಂಬಲ ವ್ಯಕ್ತಪಡಿಸುತ್ತಾರೆ.
ಕುಮಾರಿ ರಕ್ಷಿತಾಳ ಸಾಧನೆಗೆ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಸಾರ್ವಜನಿಕರು ಶುಭ ಕೊರಿದ್ದಾರೆ. ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ಬರಲೆಂದು ಹಾರೈಸಿದ್ದಾರೆ.
Leave a Comment