• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಪಟ್ಟಣದಲ್ಲಿ‌ನ ಅಕ್ರಮ ಕಸಾಯಿಖಾನೆ ತೆರವುಗೊಳಿಸಿ – ಸಾರ್ವಜನೀಕರಿಂದ ಮನವಿ.

September 25, 2019 by Yogaraj SK Leave a Comment

kasayi khane bandh maduvante manvi

ಹಳಿಯಾಳ:- ಪಟ್ಟಣದ ಹೃದಯಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಯನ್ನು ಒಂದು ವಾರದ ಅವಧಿಯಲ್ಲಿ ತೆರವುಗೊಳಿಸಬೇಕು ಇಲ್ಲದಿದ್ದರೇ ಊಗ್ರ ಹೋರಾಟ ನಡೆಸಲಾಗುವುದೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಪಟ್ಟಣದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿ ಮಧ್ಯದಲ್ಲಿ ರಸ್ತೆಯ ಮೇಲಿರುವ ಅನಧಿಕೃತ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗೋವಧಾಲಯವನ್ನು ನಡೆಸುತ್ತಾ ಬಂದಿದ್ದು ಇದನ್ನು ಬಂದ್ ಮಾಡುವಂತೆ ನೂರಾರು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಪ್ರತಿಭಟನೆಗಳನ್ನು ಮಾಡಲಾಗಿದ್ದರು ಸಹಿತ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಲಾಗಿದೆ.
ಮೇದಾರಗಲ್ಲಿ, ಬಸ್ ನಿಲ್ದಾಣ ನಿವಾಸಿಗಳು, ಸಾರ್ವಜನೀಕರು, ಕರ್ನಾಟಕ ರಕ್ಷಣಾ ವೇದಿಕೆ, ಬಿಜೆಪಿ ಪಕ್ಷದವರು, ಆರ್.ಎಸ್.ಎಸ್, ಭಜರಂಗದಳ, ಸನಾತನ ಸಂಸ್ಥೆ ಸೇರಿದಂತೆ ಅನೇಕರು ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ, ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಕೇಶವ ಚೌಗಲೆ ಬಳಿಕ ಪೋಲಿಸ್ ಠಾಣೆಗೆ ಆಗಮಿಸಿ ಪಿಎಸ್‍ಐ ಆನಂದಮೂರ್ತಿ ಅವರಿಗೆ ಕಸಾಯಿಖಾನೆ ಬಂದ್ ಮಾಡುವಂತೆ ಲಿಖಿತ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದ ಸಮೀಪದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿಯ ಮಧ್ಯದ ರಸ್ತೆಯ ಮೇಲೆ ಅನಧಿಕೃತ ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿದೆ. ಗೋ, ದನಗಳ ಮಾಂಸದ ತ್ಯಾಜ್ಯದಿಂದ ಪರಿಸರವೆಲ್ಲ ದುರ್ವಾಸನೆ ಭರಿತವಾಗುತ್ತಿದೆ. ಮಾಂಸದ ತ್ಯಾಜ್ಯ ಹಾಗೂ ಎಲುಬುಗಳಿಗಾಗಿ ನಾಯಿಗಳು ಬೆನ್ನುಬಿದ್ದು ಅವುಗಳನ್ನು ಎಲ್ಲೆಂದರಲ್ಲಿ ಚೆಲ್ಲುತ್ತಿವೆ. ಗೋವಧಾಲಯದ ರಕ್ತ ಗಟಾರಗಳಲ್ಲಿ ಹರಿದು ರೋಗ ರುಜಿನಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದ್ದು ಇದರಿಂದ ಸುತ್ತಮುತ್ತಲ ನೂರಾರು ಕುಟುಂಬಗಳು ರೋಗ ಗ್ರಸ್ಥವಾಗುತ್ತಿದ್ದು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಅಕ್ರಮ ಗೋ ವಧಾಲಯದ ಬಗ್ಗೆ ಈ ಹಿಂದೆ ನೂರಾರು ಬಾರಿ ಸ್ಥಳೀಯ ಶಾಸಕರು ಸೇರಿ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ ಆದರೇ ಯಾವುದೇ ಕ್ರಮ ಜರುಗಿಸದೆ ಇರುವುದಕ್ಕೆ ಖಂಡನೆಯನ್ನು ವ್ಯಕ್ತಪಡಿಸಲಾಗಿದೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ, ರೋಗರುಜಿನಗಳ ಆವಾಸಸ್ಥಾನವಾಗಿ, ದುರ್ವಾಸನೆ ಬಿರುತ್ತಿರುವ ಈ ಕಸಾಯಿಖಾನೆಯನ್ನು ಒಂದು ವಾರದ ಒಳಗೆ ತೆರವು ಗೊಳಿಸದೆ ಇದ್ದರೇ ಊಗ್ರ ಪ್ರತಿಭಟನೆಯನ್ನು ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಲಿಖಿತ ಮನವಿಯ ಮೂಲಕ ನೀಡಿದ್ದಾರೆ.
ಗೋ ಹತ್ಯೆ ನಿಷೇಧವಿದ್ದರು ಸಹಿತ ಹಳಿಯಾಳದಲ್ಲಿ ಅನಧಿಕೃತ ಕಸಾಯಿಖಾನೆ ಪಟ್ಟಣದ ಬಸ್ ನಿಲ್ದಾಣದ ಸಮೀಪವೇ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬಂದ್ ಮಾಡುವಂತೆ ಹಿಂದೆಯೂ ಅನೇಕ ಬಾರಿ ಮನವಿ ನೀಡಲಾಗಿದೆ. ಆದರೇ ಯಾವುದೇ ಕ್ರಮ ಜರುಗಿಸಲಾಗಿಲ್ಲ. ಈ ಬಾರಿ ಮನವಿ ಸಲ್ಲಿಸಿ ಗಡುವು ನೀಡಲಾಗಿದೆ. ಒಂದಾನುವೇಳೆ ಮತ್ತೇ ಹಳೆ ಚಾಳಿಯನ್ನೇ ಮುಂದುವರೆಸಿ ಅಕ್ರಮ ಕಸಾಯಿಖಾನೆ ವಿರುದ್ದ ಕ್ರಮ ಕೈಗೊಳ್ಳದೇ ಇದ್ದರೇ ಬಿಜೆಪಿ ಪಕ್ಷದಿಂದಲೂ ಹೋರಾಟ ನಡೆಸಲಾಗುವುದು – ಹಳಿಯಾಳ ಬಿಜೆಪಿ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ.
ಮನವಿ ಸಲ್ಲಿಸುವಾಗ ಬಿಜೆಪಿ ಪುರಸಭೆ ಸದಸ್ಯರಾದ ಉದಯ ಹೂಲಿ, ಸಂಗೀತಾ ಜಾಧವ, ಶಾಂತಾ ಹಿರೇಕರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ದುರ್ವೆ, ಪ್ರಮುಖರಾದ ಅನಿಲ ಮುತ್ನಾಳ, ಶ್ರೀನಿವಾಸ ದೊಡ್ಮಣಿ, ವಿಜಯ ಬೋಬಾಟಿ, ಉಮೆಶ ದೇಶಪಾಂಡೆ, ರಾಜು ಹುಟಗಿಕರ, ಪ್ರೇಮಾ ಗೌಳಿ, ಯಲ್ಲವ್ವಾ ಮೇದಾರ, ಸರೋಜಾ ಬೂದಪ್ಪನವರ, ಸಿಎಚ್.ಮಡ್ಡಿ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: kasayi khane bandh maduvante manvi, ಅಕ್ರಮ ಕಸಾಯಿಖಾನೆ ತೆರವುಗೊಳಿಸಿ, ಅನಧಿಕೃತ ಕಟ್ಟಡ, ಅನಧಿಕೃತ ಕಸಾಯಿಖಾನೆ, ಸಾರ್ವಜನೀಕರಿಂದ ಮನವಿ., ಹಳಿಯಾಳ ಪಟ್ಟಣದಲ್ಲಿ‌, ಹಳಿಯಾಳ:- ಪಟ್ಟಣದ ಹೃದಯಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆ, ಹೃದಯಭಾಗದಲ್ಲಿ ನಡೆಯುತ್ತಿರುವ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...