ಮಂಗಳವಾರ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸುವ ಉದ್ಧಟತನ ಪ್ರದರ್ಶಿಸಿದ ಚಾಲಕ ಎಎಸ್.ಎಫ್.ಶೇಖ್ ಮತ್ತು ನಿರ್ವಾಹಕ ಮಠಪತಿ ಅವರನ್ನು ತಕ್ಷಣ ಬಂಧಿಸಿ, ೨೪ ಗಂಟೆಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶದಂತೆ ನಂದಗಡ ಪೊಲೀಸ್ ಠಾಣೆಯ ಪಿಎಸ್ಐ ಸುಮಾ ನಾಯಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದು, *ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ* ಯನ್ನು ಶೋಧಿಸಿ ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ನಂದಗಡ ಪೊಲೀಸ್ ಠಾಣೆಯಲ್ಲಿ ತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾದ *ನಂದಗಡ ಪಿಎಸ್ಐ ಸುಮಾ ನಾಯಕ* ಅವರ ಕಾರ್ಯ ವೈಖರಿಗೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ.
Leave a Comment