ಜೋಯಿಡಾ –
ದೈನಂದಿನ ವ್ಯವಹಾರಕ್ಕೆ ಕಚೇರಿಗೆ ಬರುವ ಜನರಿಗೆ , ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜನರ ಪರವಾಗಿದ್ದೇವೆ, ವಿನಾ ಕಾರಣ ಜನರಿಗೆ ನೀವು ತೊಂದರೆ ಕೊಟ್ಟರೆ ನೀವೆ ಜವಾಬ್ದಾರರಾಗುತ್ತಿರಿ ಎಂದು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಅರವಿಂದ ಕಲಗುಜ್ಜಿ ಹೇಳಿದರು.
ಅವರು ಸೋಮವಾರ ಜೋಯಿಡಾ ತಾ.ಪಂ,ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಿಗದಿತ ವೇಳೆಗೆ ಅಧಿಕಾರಿಗಳು ನೀಡದೇ ವಿಳಂಬ ಮಾಡಿದರೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ, ಆಗ ನಾವು ನಮ್ಮ ಲೋಕಾಯುಕ್ತದ ಚೌಕಟ್ಟನ್ನು ಪಾಲನೆ ಮಾಡಬೇಕಾಗುತ್ತದೆ, ಆಡಳಿತ ದುರಾಡಳಿತ ಆಗಬಾರದು ಎಂದು ಎಲ್ಲ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಸಾಕಷ್ಟು ದೂರುಗಳು ಬಂದಿಲ್ಲ ಎಂಬ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದಲ್ಲ, ದೂರು ನೀಡುವವರು ಹಲವಾರು ಕಾರಣಗಳಿಂದ ದೂರು ನೀಡಲು ಹಿಂದೆಟು ಹಾಕಬಹುದು, ಹಲವಾರು ಪ್ರಕರಣಗಳು ಪತ್ರಕೆಯಿಮದ ತಿಳಿಯುತ್ತವೆ, ಎಲ್ಲಾ ಇಲಾಕೆಗಳ ಮಾಹಿತಿಯಿಂದಲೂ ತಿಳಿಯುತ್ತದೆ, ಅಧಿಕಾರಿಗಳು ಇಲ್ಲಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂದು ಹೇಳಿ ಹಲವಾರು ಉದಾಹರಣೆಗಳನ್ನು ನೀಡಿ ಮಾತನಾಡಿದರು.
ತಾಲೂಕಾ ದಂಢಾಧಿಕಾರಿ ಸಂಜಯ ಕಾಂಬಳೆ ಮಾತನಾಡಿ ಲೋಕಾಯುಕ್ತರು ಅಧಿಕಾರಿಗಳಿಗೆ ತಿಳಿಯದ ಹಲವಾರು ವಿಷಯಗಳನ್ನು ತಿಳಿಸಿದ್ದು ತುಂಬಾ ಸಂತೋಷ, ತಪ್ಪು ಮಾಡಿದರೆ ಅಂತವರಿಗೆ ಶಿಕ್ಷೆ ಆಗಲೇ ಬೇಕು ಎಂದರು.
ವೇದಿಕೆಯಲ್ಲಿ ತಾ,ಪಂ,ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಲೋಕಾಯುಕ್ತ ಅಧಿಕಾರಿ ಮಂಜುನಾಥ ಬಡಿಗೇರಾ, ಉಪಸ್ಥಿತರಿದ್ದರು. ಮದ್ಯಾಹ್ನ 2 ಘಂಟೆಯವರೆಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಿದರು.
Leave a Comment