
ಹೊನ್ನಾವರ: ‘ಮಹಾಸತಿ ಗೆಳೆಯರಬಳಗ ಕೇಶವಪಾಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ತಾಲೂಕಿನ ಕೆರೆಕೋಣ ಮಹಾಸತಿ ದೇವಿ ಆವಾರ ಕೇಶವಪಾಲದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಕ್ರೀಡಾಂಗಣ ಉದ್ಘಾಟಿಸಿದ ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯಬೇಕು. ಹಗ್ಗ ಜಗ್ಗಾಟ ನಮ್ಮ ದೇಶಿ ಆಟವಾಗಿದೆ. ಅರಿಶಿಣ ದಾರದಿಂದ ಎರಡು ಮನಸ್ಸು ಒಂದುಗೂಡುತ್ತದೆ. ಹಗ್ಗಜಗ್ಗಾಟದಲ್ಲಿ ಸೋತ ತಂಡವು ಗೆದ್ದ ತಂಡದ ಬಳಿಯಲ್ಲಿ ಒಂದೂಗೂಡುತ್ತದೆ. ಒಂದೂಗೂಡಿಸುವ ಶಕ್ತಿ ದಾರ ಅಥವಾ ಹಗ್ಗದಲ್ಲಿರುತ್ತದೆ. ಇದುವೇ ಹಗ್ಗದ ಮಹತ್ವ ಎಂದು ಕ್ರಿಡಾಕೂಟಕ್ಕೆÉ ಶುಭಕೋರಿದರು.
ಕ್ರಷ್ಣ ಗೌಡ ಹಳಗೇರಿ ಮಾತನಾಡಿ ಶಕ್ತಿ ಜೊತೆ ಯುಕ್ತಿ ಪ್ರದರ್ಶನ ತೋರಿಸುವ ಕ್ರೀಡೆ ಹಗ್ಗ ಜಗ್ಗಾಟ ಕ್ರೀಡೆಯಾಗಿz.É ಸೋಲು ಗೆಲುವಿನ ಮೆಟ್ಟಿಲು ಎಂದು ಈ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.
ಸೂರಜ್ ನಾಯ್ಕ ಸೋನಿ ಮಾತನಾಡಿ ನಮ್ಮ ದೇಶಿ ಕ್ರೀಡೆಯಾದ ಕಬಡ್ಡಿ ಇಂದು ಜಗತ್ಪ್ರಸಿದ್ಧಿ ಆಗುತ್ತಿದೆ. ಅದೇ ರೀತಿ ಹಗ್ಗಜಗ್ಗಾಟ ಕ್ರೀಡೆಯ ಮುಂದಿನ ದಿನಗಳಲ್ಲಿ ಜಗತ್ಪ್ರಸಿದ್ಧಿ ಪಡೆಯಲಿದೆ ಎಂದರು.
ಹಗ್ಗಜಗ್ಗಾಟ ಕಾರ್ಯಕ್ರಮದ ಪೂರ್ವದಲ್ಲಿ ಗುಂಡು ಎಸೆತ, ಮೇಣದ ಬತ್ತಿ ಹಚ್ಚುವ, ಮಡಕೆ ಒಡೆಯುವ ಸ್ಪರ್ಧೆ ನಡೆಯಿತು.
ಮಹಿಳಾ ವಿಭಾಗದ ಹಗ್ಗಜಗ್ಗಾಟದಲ್ಲಿ ಮಹಾಸತಿ ಕೇಶವಪಾಲ ತಂಡ ಪ್ರಥಮ ಸ್ಥಾನ ಪಡೆದರೆ, ಚೌಡೇಶ್ವರಿ ಕೆರೆಕೋಣ ತಂಡ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಸ್ಟಾರ್ ಬಾಯ್ಸ್ ಮುದ್ಗಾ,ಕಾರವಾರ ತಂಡ ಪ್ರಥಮ ಸ್ಥಾನ ಪಡೆದು ವಿಜಯಶಾಲಿಯಾಯಿತು. ಮಹಾಸತಿ ಗೆಳೆಯರ ಬಳಗ ಕೆರೆಕೋಣ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಆಯಿತು. ಜಟಗೇಶ್ವರಿ ಗೆಳೆಯರ ಬಳಗ ಕಾನಕ್ಕಿ ತ್ರತೀಯ ಸ್ಥಾನ ಪಡೆಯಿತು.
ಮಾಜಿ ಜಿ.ಪಂ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರೀ, ಡಾ.ಸುರೇಶ್ ಹೆಗಡೆ, ಕರ್ನಾಟಕ ಕ್ರಾಂತಿರಂಗ ಯುವ ಅಧ್ಯಕ್ಷ ಸಚಿನ್ ನಾಯ್ಕ,ಉಪಸ್ಥಿತರಿದ್ದರು.
Leave a Comment