• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮಾಂತರ ಭಾಗದಲ್ಲಿ‌ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.

November 4, 2019 by Yogaraj SK Leave a Comment

akrama sarayi maratha

ಹಳಿಯಾಳ:- ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಮಧ್ಯದಂಗಡಿಗಳನ್ನು ಹೊರತು ಪಡಿಸಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಾರ್ವಜನೀಕ ಸ್ಥಳಗಳಲ್ಲಿಯೂ ಎಗ್ಗಿಲ್ಲದೇ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿ ನಡೆದಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಪಟ್ಟಣದಲ್ಲಿ ಸತ್ಯನಾರಾಯಣ, ಶ್ರೀದೇವಿ, ಸುಚಿತ್ರಾ, ವೈಶಾಲಿ-ರಾಘವೇಂದ್ರ, ಶ್ರೀ ರೇಣುಕಾ, ಶ್ರೀ ಬಾಲಾಜಿ, ಮರ‍್ಯ, ಫ್ರೇಂಡ್ಸ್, ಬಾಬುರಾವ್, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ರಾಜಶೇಖರ ರೇಸಾರ್ಟ ಹಾಗೂ ಮುರ್ಕವಾಡ ಗ್ರಾಮದಲ್ಲೊಂದು ದುರ್ಗಾ ಬಾರ್ ಎಂಬ ಪರವಾನಿಗೆ ಹೊಂದಿರುವ ೧೨ ಮಧ್ಯದಂಗಡಿಗಳು ಇವೆ.
ಆದರೇ ಇವುಗಳನ್ನು ಹೊರತು ಪಡಿಸಿ ಗ್ರಾಮಾಂತರ ಭಾಗದಲ್ಲಿ ಕೆಲವು ಕಡೆಗಳಲ್ಲಿ ಕಿರಾಣಿ ಅಂಗಡಿ, ಸಣ್ಣ ಬಿಡಾ ಅಂಗಡಿಗಳು, ಚಹಾ ಅಂಗಡಿಗಳಲ್ಲಿ ಹಾಗೂ ಹಲವು ಮನೆಗಳಲ್ಲಿ ಕೂಡ ಅಕ್ರಮ ಸರಾಯಿ ಮಾರಾಟವು ನಡೆಯುತ್ತಿದೆ ಅಲ್ಲದೇ ಎಮ್.ಆರ್.ಪಿ ದರಕ್ಕಿಂತ ಎರಡೂ ಪಟ್ಟು(ಡಬಲ್) ಹೆಚ್ಚಿನ ಬೆಲೆಯಲ್ಲಿ ಮದ್ಯವನ್ನು ಮರಾಟ ಮಾಡುತ್ತಿರುವುದು ಹೆಚ್ಚಿನ ಬೆಲೆಗೆ ಮಧ್ಯ ಕೊಳ್ಳುತ್ತಿರುವ ಕೆಲವರಿಂದ ಈಗ ಈ ಎಲ್ಲ ವ್ಯವಹಾರಗಳು ಬಹಿರಂಗಗೊಳ್ಳುತ್ತಿದ್ದು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆಯವರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿ, ಶಾಲೆಯ ಸನಿಹದ ಹಲವಾರು ಅಂಗಡಿಗಳಲ್ಲಿ ಪ್ರತಿನಿತ್ಯ ಅಕ್ರಮ ಸರಾಯಿ ಮಾರಾಟ ನಡೆಸಲಾಗುತ್ತಿದೆ ಎಂಬ ಬಗ್ಗೆ ಜನಪ್ರತಿನಿಧಿಗಳು ಹಾಗೂ ಇಲಾಖೆಗೂ ಮೌಖಿಕವಾಗಿ ದೂರು ನೀಡಿದರು ಕೂಡ ಈವರೆಗೆ ಯಾವುದೇ ಕ್ರಮ ಜರುಗಿಸದೆ ಇರುವುದು ಸಂಶಯಕ್ಕೆ ಎಡೆಮಾಡಿದೆ.

IMG 20190926 WA0133


ತಾಲೂಕಿನ ಗಡಿಗ್ರಾಮವಾದ ಭಾಗವತಿ ಗ್ರಾಮದಲ್ಲಿಯೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆದಿದೆ ಎಂಬ ಹೆಸರು ಹೇಳಲು ಇಚ್ಚಿಸದ ಗ್ರಾಮದ ಕೆಲವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಬೊಮ್ಮನಳ್ಳಿ ಗ್ರಾಮದಲ್ಲಿ ಅಕ್ರಮ ಸರಾಯಿ ಮರಾಟದ ಬಗ್ಗೆ ಕಳೆದ ೨ ವರ್ಷಗಳಿಂದ ಗ್ರಾಮಸ್ಥರು ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರ ಹಾಗೂ ಸಂಬAಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಕೂಡ ಈವರೆಗೆ ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಜರುಗಿಸದೆ ಇರುವುದು ದುರ್ದೈವವಾಗಿದೆ.
ಇನ್ನೂ ಈ ಕುರಿತು “ಕಡಲವಾಣಿ” ಪ್ರತಿನಿಧಿಯೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ದಾಂಡೇಲಿ ವಿಭಾಗದ ಪಿಎಸ್‌ಐ ವೈದ್ಯ ಅವರು ಅಕ್ರಮ ಸರಾಯಿ ಮಾರಾಟ ಮಾಡುವವರ ಕುರಿತು ಮಾಹಿತಿ ನೀಡಿದರೇ ಕ್ರಮ ಜರುಗಿಸಲಾಗುವುದು. ಬೊಮ್ಮನಳ್ಳಿ ಹಾಗೂ ಭಾಗವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಏನೇ ಆಗಲಿ ಸಂಬAಧಪಟ್ಟ ಇಲಾಖೆಯವರು ಗ್ರಾಮಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಅಕ್ರಮ ಸರಾಯಿ ಮರಾಟಾದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಕುರಿತು ಕಠಿಣ ಕ್ರಮ ಜರುಗಿಸಬೇಕೆಂಬುದು ಜನರ ಆಶಯವಾಗಿದೆ.

IMG 20190926 WA0134

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: akrama sarayi maratha, ಅಕ್ರಮ ಮಧ್ಯ ಮಾರಾಟ ಹಾವಳಿ, ಗ್ರಾಮಾಂತರ ಭಾಗ, ಫ್ರೇಂಡ್ಸ್, ಬಾಬುರಾವ್, ಬೊಮ್ಮನಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ, ಮರ‍್ಯ, ಮುರ್ಕವಾಡ ಗ್ರಾಮದಲ್ಲೊಂದು ದುರ್ಗಾ ಬಾರ್, ರಾಜಶೇಖರ ರೇಸಾರ್ಟ, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ವೈಶಾಲಿ-ರಾಘವೇಂದ್ರ, ಶ್ರೀ ಬಾಲಾಜಿ, ಶ್ರೀ ರೇಣುಕಾ, ಶ್ರೀದೇವಿ, ಸತ್ಯನಾರಾಯಣ, ಸಾರ್ವಜನೀಕ ಸ್ಥಳ, ಸುಚಿತ್ರಾ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...